ಶನಿವಾರ, 18 ಅಕ್ಟೋಬರ್ 2025
×
ADVERTISEMENT
ADVERTISEMENT

ಕೋಲಾರ | ಮರು ಮತ ಎಣಿಕೆ-ಲೋಪಕ್ಕೆ ಆಸ್ಪದ ಬೇಡ: ಕೆ.ಎಸ್‌.ಮಂಜುನಾಥ್‌ ಗೌಡ

Published : 18 ಅಕ್ಟೋಬರ್ 2025, 6:57 IST
Last Updated : 18 ಅಕ್ಟೋಬರ್ 2025, 6:57 IST
ಫಾಲೋ ಮಾಡಿ
Comments
10ರಿಂದ 15 ದಿನಗಳಲ್ಲಿ ಮರು ಮತ ಎಣಿಕೆ ಮಾಡುವ ಸಾಧ್ಯತೆ ಇದೆ. ಯಾವುದೇ ಗೊಂದಲ ಲೋಪ ಆಗದಂತೆ ಎಣಿಕೆ ಕಾರ್ಯ ನಡೆಸುವಂತೆ ಕೋರಿದ್ದೇನೆ
ಕೆ.ಎಸ್‌.ಮಂಜುನಾಥ್‌ ಗೌಡ ಮಾಜಿ ಶಾಸಕ
ಮರು ಚುನಾವಣೆಯೂ ನಡೆಯಬಹುದು
ಮುಚ್ಚಿದ ಲಕೋಟೆಯಲ್ಲಿ ಫಲಿತಾಂಶ ಒಪ್ಪಿಸುವಂತೆ ಸುಪ್ರೀಂ ಕೋರ್ಟ್‌ ಹೇಳಿದೆ. ಮರು ಎಣಿಕೆಯಲ್ಲಿ ಏನಾದರೂ ಸಮಸ್ಯೆ ಉಂಟಾದರೆ ಇವಿಎಂಗಳು ಕೆಟ್ಟು ಹೋಗಿದ್ದರೆ ಮತ್ತೆ ಚುನಾವಣೆ ನಡೆದರೂ ನಡೆಯಬಹುದು. ಹೀಗಾಗಿ ಸಾರ್ವಜನಿಕವಾಗಿ ಫಲಿತಾಂಶ ಘೋಷಿಸದಂತೆ ನ್ಯಾಯಾಲಯ ಸೂಚಿಸಿದೆ ಎಂದು ಕೆ.ಎಸ್‌.ಮಂಜನಾಥ್‌ ಗೌಡ ಹೇಳಿದರು. ಅಂಚೆ ಮತಗಳು ಇದ್ದವೋ ಇಲ್ಲವೋ ಗೊತ್ತಿಲ್ಲ. ಎಣಿಕೆಯ ವಿಡಿಯೋ ಕೂಡ ಇಲ್ಲ. ಏನಾಗಿದೆಯೋ ಗೊತ್ತಿಲ್ಲ. ನಾಪತ್ತೆ ಆಗಿದ್ದರೆ ಮರು ಚುನಾವಣೆಯೇ ನಡೆಯಬೇಕಾಗುತ್ತದೆ ಎಂದರು.
197 ಮತ ಅಮಾನ್ಯಗೊಂಡಿದ್ದೇಕೆ?
ಮಾಲೂರು ಕ್ಷೇತ್ರದಲ್ಲಿ ಅಮಾನ್ಯಗೊಂಡ 197 ಮತಗಳಿವೆ. ಅವುಗಳು ಏಕೆ ಅಮಾನ್ಯಗೊಂಡಿವೆ ಮತ್ತೆ ಮಾನ್ಯ ಆಗಬಹುದೇ ಎಂಬುದನ್ನೂ ಪರಿಶೀಲಿಸಬೇಕು. ಗೆಜೆಟೆಡ್‌ ಅಧಿಕಾರಿಯ ಸಹಿ ಇಲ್ಲವೆಂದು ಅಮಾನ್ಯ ಮಾಡಿರುತ್ತಾರೆ. ಮತದಾನ ಆಗಿರುವ ಮತಗಳನ್ನು ತಿರಸ್ಕಾರ ಮಾಡಬಾರದು. ಅದು ಯಾವುದೇ ಅಭ್ಯರ್ಥಿಗೆ ಬರಲಿ. ಜಯನಗರ ಕ್ಷೇತ್ರದಲ್ಲಿ ಬಿಜೆಪಿಯ ರಾಮಮೂರ್ತಿ ಮೊದಲು ಸೋತಿರುತ್ತಾರೆ. ಎದುರಾಳಿ ಸ್ಪರ್ಧಿ ಕಾಂಗ್ರೆಸ್‌ನ ಸೌಮ್ಯರೆಡ್ಡಿ ಇದ್ದು ಮರು ಎಣಿಕೆ ನಡೆಯುತ್ತದೆ. ಆಗ ಕೆಲ ಅಮಾನ್ಯ ಮತಗಳನ್ನು ಕಾನೂನು ರೀತಿ ಮಾನ್ಯ ಮಾಡಲಾಗುತ್ತದೆ ಎಂದು ಕೆ.ಎಸ್‌.ಮಂಜುನಾಥ್‌ ಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT