ಲಾಕ್ಡೌನ್ ಸಡಿಲಿಕೆಯಾಗಿದೆ ಎಂದು ವರ್ತಕರು ಶುಕ್ರವಾರ ಬೆಳಿಗ್ಗೆ ಮಳಿಗೆ ತೆರೆದು ಪ್ರತಿನಿತ್ಯದಂತೆ ವಹಿವಾಟು ಮಾಡಲಾರಂಭಿಸಿದರು. ಜಿಲ್ಲಾಧಿಕಾರಿ ಆದೇಶದನ್ವಯ ಪೊಲೀಸರು ನಗರದೆಲ್ಲೆಡೆ ಅಂಗಡಿಗಳನ್ನು 10 ಗಂಟೆಗೆ ಬಂದ್ ಮಾಡಿಸಿದರು. ಹಾಲು, ಹಣ್ಣು, ತರಕಾರಿ, ಔಷಧ ಅಂಗಡಿಗಳು ಮತ್ತು ಪೆಟ್ರೋಲ್ ಬಂಕ್ಗಳಿಗೆ ಮಾತ್ರ ವಿನಾಯಿತಿ ನೀಡಿದರು. ರಸ್ತೆಯಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರನ್ನು ತಡೆದು ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದರು.