ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜನಸಂಖ್ಯೆ ನಿಯಂತ್ರಣವು ಯಾವುದೋ ಒಂದು ಸಮುದಾಯಕ್ಕೆ ಸೀಮಿತವಲ್ಲ. ಇದರಲ್ಲಿ ಜಾತಿ, ಮತ, ಪಂಥವಿಲ್ಲ. ರಾಜ್ಯದ, ರಾಷ್ಟ್ರದ ಎಲ್ಲಾ ವರ್ಗಕ್ಕೂ ಸಮಾನ ನ್ಯಾಯ ಸಿಗಲಿದೆ. ಶಾಸಕ ಜಮೀರ್ ಅಹಮ್ಮದ್ ಎಲ್ಲವನ್ನೂ ಕಾಮಾಲೆ ಕಣ್ಣಿನಿಂದ ನೋಡ್ತಾರೆ. ಅವರು ಮತೀಯವಾದಿ’ ಎಂದು ಟೀಕಿಸಿದರು.