ಬಿರುಗಾಳಿ ಸಹಿತ ಸುರಿದ ಅಕಾಲಿಕ ಮಳೆಗೆ ಮಾವಿನ ಮರಗಳ ಹೂವು ಉದುರಿದ್ದು, ಕೊಂಬೆಗಳು ಮುರಿದು ಬಿದ್ದಿವೆ. ಕಾಯಿ ಕಚ್ಚುವ ಹಂತದಲ್ಲಿದ್ದ ಹೂವು ಗಾಳಿಯ ತೀವ್ರತೆಗೆ ಉದುರಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅತಿ ಹೆಚ್ಚು ಮಾವು ಬೆಳೆಯಿರುವ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಮಳೆರಾಯ ರೈತರಿಗೆ ಕಣ್ಣೀರು ತರಿಸಿದ್ದಾನೆ.