<p><strong>ಕೋಲಾರ</strong>: ಲಾಕ್ಡೌನ್ ಮಾರ್ಗಸೂಚಿ ಉಲ್ಲಂಘಿಸಿ ಬೈಕ್ನಲ್ಲಿ ಸಂಚರಿಸುತ್ತಿದ್ದ ಸ್ಮಿತಾ ಎಂಬ ಮಂಗಳಮುಖಿಗೆ ನಗರದ ಗಲ್ಪೇಟೆ ಠಾಣೆ ಎಸ್ಐ ವೇದಾವತಿ ಅವರು ಸೋಮವಾರ ಕಪಾಳಮೋಕ್ಷ ಮಾಡಿದರು.</p>.<p>ಜನರು ಅಗತ್ಯ ವಸ್ತುಗಳ ಖರೀದಿಗೆ ವಾಹನದಲ್ಲಿ ಬರಬಾರದೆಂದು ಸರ್ಕಾರ ಲಾಕ್ಡೌನ್ ಮಾರ್ಗಸೂಚಿಯಲ್ಲಿ ತಿಳಿಸಿದೆ. ಆದರೆ, ಸ್ಮಿತಾ ಅವರು ಸೋಪ್ ಖರೀದಿಸಲು ಬೈಕ್ನಲ್ಲಿ ಬೆಳಿಗ್ಗೆ ನಗರದ ಅಮ್ಮವಾರಿಪೇಟೆ ವೃತ್ತದಲ್ಲಿನ ಅಂಗಡಿಗೆ ಬಂದಿದ್ದರು.</p>.<p>ಅವರ ಬೈಕ್ ತಡೆದ ಎಸ್ಐ ವೇದಾವತಿ ಜತೆ ಸ್ಮಿತಾ ಅನುಚಿತವಾಗಿ ವರ್ತಿಸಿ ಕರ್ತವ್ಯಕ್ಕೆ ನಿರ್ವಹಣೆಗೆ ಅಡ್ಡಿಪಡಿಸಿದರು. ಆಗ ವೇದಾವತಿ ಅವರು ಸ್ಮಿತಾರ ತಲೆಗೂದಲು ಹಿಡಿದು ಠಾಣೆಗೆ ಎಳೆದೊಯ್ಯಲು ಮುಂದಾದರು. ಇದಕ್ಕೆ ಪ್ರತಿರೋಧ ತೋರಿದ ಸ್ಮಿತಾ ಪೊಲೀಸರ ವಿರುದ್ಧ ತಿರುಗಿಬಿದ್ದರು.</p>.<p>ಬಳಿಕ ವೇದಾವತಿ ಅವರು ಸ್ಮಿತಾಗೆ ಕಪಾಳಮೋಕ್ಷ ಮಾಡಿ ಲಾಠಿಯಿಂದ ಹಿಗ್ಗಾಮುಗ್ಗಾ ಥಳಿಸಿ ವಾಹನಕ್ಕೆ ಹತ್ತಿಸಿದರು. ನಂತರ ಸ್ಮಿತಾ ಕ್ಷಮೆ ಕೋರಿದ್ದರಿಂದ ಪೊಲೀಸರು ಅವರನ್ನು ಬಿಟ್ಟು ಕಳುಹಿಸಿದರು. ಲಾಠಿ ಏಟಿನಿಂದ ಸ್ಮಿತಾರ ಬಲ ಕೈಗೆ ತೀವ್ರ ಪೆಟ್ಟಾಗಿ ರಕ್ತ ಸ್ರಾವವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ</strong>: ಲಾಕ್ಡೌನ್ ಮಾರ್ಗಸೂಚಿ ಉಲ್ಲಂಘಿಸಿ ಬೈಕ್ನಲ್ಲಿ ಸಂಚರಿಸುತ್ತಿದ್ದ ಸ್ಮಿತಾ ಎಂಬ ಮಂಗಳಮುಖಿಗೆ ನಗರದ ಗಲ್ಪೇಟೆ ಠಾಣೆ ಎಸ್ಐ ವೇದಾವತಿ ಅವರು ಸೋಮವಾರ ಕಪಾಳಮೋಕ್ಷ ಮಾಡಿದರು.</p>.<p>ಜನರು ಅಗತ್ಯ ವಸ್ತುಗಳ ಖರೀದಿಗೆ ವಾಹನದಲ್ಲಿ ಬರಬಾರದೆಂದು ಸರ್ಕಾರ ಲಾಕ್ಡೌನ್ ಮಾರ್ಗಸೂಚಿಯಲ್ಲಿ ತಿಳಿಸಿದೆ. ಆದರೆ, ಸ್ಮಿತಾ ಅವರು ಸೋಪ್ ಖರೀದಿಸಲು ಬೈಕ್ನಲ್ಲಿ ಬೆಳಿಗ್ಗೆ ನಗರದ ಅಮ್ಮವಾರಿಪೇಟೆ ವೃತ್ತದಲ್ಲಿನ ಅಂಗಡಿಗೆ ಬಂದಿದ್ದರು.</p>.<p>ಅವರ ಬೈಕ್ ತಡೆದ ಎಸ್ಐ ವೇದಾವತಿ ಜತೆ ಸ್ಮಿತಾ ಅನುಚಿತವಾಗಿ ವರ್ತಿಸಿ ಕರ್ತವ್ಯಕ್ಕೆ ನಿರ್ವಹಣೆಗೆ ಅಡ್ಡಿಪಡಿಸಿದರು. ಆಗ ವೇದಾವತಿ ಅವರು ಸ್ಮಿತಾರ ತಲೆಗೂದಲು ಹಿಡಿದು ಠಾಣೆಗೆ ಎಳೆದೊಯ್ಯಲು ಮುಂದಾದರು. ಇದಕ್ಕೆ ಪ್ರತಿರೋಧ ತೋರಿದ ಸ್ಮಿತಾ ಪೊಲೀಸರ ವಿರುದ್ಧ ತಿರುಗಿಬಿದ್ದರು.</p>.<p>ಬಳಿಕ ವೇದಾವತಿ ಅವರು ಸ್ಮಿತಾಗೆ ಕಪಾಳಮೋಕ್ಷ ಮಾಡಿ ಲಾಠಿಯಿಂದ ಹಿಗ್ಗಾಮುಗ್ಗಾ ಥಳಿಸಿ ವಾಹನಕ್ಕೆ ಹತ್ತಿಸಿದರು. ನಂತರ ಸ್ಮಿತಾ ಕ್ಷಮೆ ಕೋರಿದ್ದರಿಂದ ಪೊಲೀಸರು ಅವರನ್ನು ಬಿಟ್ಟು ಕಳುಹಿಸಿದರು. ಲಾಠಿ ಏಟಿನಿಂದ ಸ್ಮಿತಾರ ಬಲ ಕೈಗೆ ತೀವ್ರ ಪೆಟ್ಟಾಗಿ ರಕ್ತ ಸ್ರಾವವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>