<p>ಕೋಲಾರ: ತಾಲ್ಲೂಕಿನ ನರಸಾಪುರ ಹೋಬಳಿಯ ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಎಂದಿನಂತೆ ತರಗತಿ ಪಾಠಗಳು ನಡೆಯಲಿಲ್ಲ. ಬದಲಿಗೆ ಗ್ರಾಮದ ಹಲವರ ಕಂದಾಯ ಭೂಮಿ ದಾಖಲೆಗಳ ಸಮಸ್ಯೆಗಳು ಪರಿಹಾರವಾದವು.<br /> <br /> ಮುಖ್ಯಶಿಕ್ಷಕರ ಸ್ಥಾನದಲ್ಲಿ ಜಿಲ್ಲಾಧಿಕಾರಿ ಡಿ.ಕೆ.ರವಿ ಇದ್ದರು. ವಿದ್ಯಾರ್ಥಿಗಳ ಸ್ಥಾನದಲ್ಲಿ ಹಳ್ಳಿಗರಿದ್ದರು. ಶೈಕ್ಷಣಿಕ ಚಟುವಟಿಕೆ ನಡೆಯುತ್ತಿದ್ದ ಸ್ಥಳದಲ್ಲಿ ಇದೇ ಮೊದಲ ಬಾರಿಗೆ ‘ಕಂದಾಯ ಅದಾಲತ್’ ನಡೆಯಿತು. ಕಂದಾಯ ಇಲಾಖೆ ಸಿಬ್ಬಂದಿಗೆ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಯ ಜವಾಬ್ದಾರಿಗಳ ನಿರ್ವಹಣೆ ಪಾಠಗಳನ್ನೂ ಹೇಳಿ-ಕೊಟ್ಟರು.<br /> <br /> ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಬೆಳ್ಳೂರಿನಲ್ಲಿ ನಡೆದರೆ, ಮಧ್ಯಾಹ್ನದ ಬಳಿಕ ಅದೇ ಹೋಬಳಿಯ ಚೌಡದೇನಹಳ್ಳಿಯ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಅದಾಲತ್ ನಡೆಯಿತು. ಪಹಣಿ ತಿದ್ದುಪಡಿಯ 161 ಪ್ರಕರಣಗಳೂ ಸೇರಿದಂತೆ ಒಟ್ಟಾರೆ 291 ಪ್ರಕರಣ ಸ್ಥಳದಲ್ಲೇ ಇತ್ಯರ್ಥಪಡಿಸಲಾಯಿತು.<br /> <br /> 45 ಪ್ರಕರಣಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿ ದಾಖಲೆಗಳ ಪರಿಶೀಲನೆಗೆ ಜಿಲ್ಲಾಧಿಕಾರಿ ಆದೇಶಿಸಿದರು. ಸಾಮಾಜಿಕ ಭದ್ರತಾ ಯೋಜನೆ ಅಡಿ ನಿವೃತ್ತಿ ವೇತನ ದೊರೆತಿಲ್ಲ ಎಂಬ ಒಂದು ದೂರಿಗೆ ಸಂಬಂಧಿಸಿದ ಅಧಿಕಾರಿಯೊಡನೆ ದೂರವಾಣಿ ಮೂಲಕವೇ ಮಾತನಾಡಿದ ಡಿ.ಸಿ, ಅರ್ಜಿದಾರರಿಗೆ ಅನುಕೂಲ ಮಾಡಿಕೊಟ್ಟರು.<br /> <br /> ತಮ್ಮ ಹಳ್ಳಿಗೇ ಜಿಲ್ಲಾಡಳಿತ ಬಂದು ಸ್ಥಳದಲ್ಲೇ ಸಮಸ್ಯೆಗಳನ್ನು ಪರಿಹರಿಸಿ ಕೊಟ್ಟದ್ದಕ್ಕೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು.<br /> <br /> ಹಲವಾರು ವರ್ಷಗಳಿಂದ ಪರಿಹಾರವಾಗದೆ ಉಳಿದಿದ್ದ ಕಂದಾಯ ಭೂಮಿ ದಾಖಲೆಗಳ ಸಮಸ್ಯೆಗಳನ್ನು ಗದ್ದಲ, -ಗೊಂದವಿಲ್ಲದೆ ಮುಕ್ತ ಹಾಗೂ ಪಾರದರ್ಶಕವಾಗಿ ದಾಖಲೆಗಳ ಆಧಾರದೊಂದಿಗೆ ಸಂಬಂಧಿಸಿದವರ ಸಮ್ಮುಖದಲ್ಲೇ ಇತ್ಯರ್ಥ ಪಡಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.<br /> <br /> ಕಂದಾಯ ಇಲಾಖೆಯಲ್ಲಿ ಇತ್ಯರ್ಥವಾಗದೆ ಉಳಿದಿದ್ದ ಪಹಣಿ ತಿದ್ದುಪಡಿ, ಫವತಿವಾರು ಖಾತೆ ಬದಲಾವಣೆ, ಖಾತೆ ಬದಲಾವಣೆ ಪ್ರಕರಣಗಳನ್ನು ಅದಾಲತ್ ಸಲುವಾಗಿ ಮೊದಲೇ ಸಿಬ್ಬಂದಿ ಗುರುತಿಸಿದ್ದರು. ಅವುಗಳನ್ನಷ್ಟೇ ಅದಾಲತ್ನಲ್ಲಿ ಇತ್ಯರ್ಥ ಪಡಿಸುವ ಕೆಲಸ ಸೋಮವಾರ ನಡೆಯಿತು.<br /> <br /> ಹೋಬಳಿ ಹಾಗೂ ಆಯಾ ಗ್ರಾಮ ಮಟ್ಟದ ಗ್ರಾಮಲೆಕ್ಕಿಗರು, ಕಂದಾಯ ನಿರೀಕ್ಷಕರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಕಡತಗಳ ಸಮೇತ ಹಾಜರಾಗಿದ್ದ ಪರಿಣಾಮ ಅದಾಲತ್ ಗೊಂದಲವಿಲ್ಲದೆ ನಡೆಯಿತು.<br /> <br /> ಹೆಚ್ಚುವರಿ ಜಿಲ್ಲಾಧಿಕಾರಿ ನವೀನ್ ಕುಮಾರ್ ರಾಜು, ಉಪವಿಭಾಗಾಧಿ ಕಾರಿ ಸಿ.ಎನ್.ಮಂಜುನಾಥ್, ತಹಶೀಲ್ದಾರ್ ನಾಗರಾಜ್ ಗೌಡ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಾನಕಿ ರಾಮ್, ಭೂ ದಾಖಲೆಗಳ ಸಹಾಯಕ ನಿರ್ದೇಶಕಿ ಮೋನಿಷಾ, ಹಕ್ಕು ದಾಖಲೆ-ಗಳ ಶಿರಸ್ತೇ ದಾರ್ ನಾಗರಾಜ್ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೋಲಾರ: ತಾಲ್ಲೂಕಿನ ನರಸಾಪುರ ಹೋಬಳಿಯ ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಎಂದಿನಂತೆ ತರಗತಿ ಪಾಠಗಳು ನಡೆಯಲಿಲ್ಲ. ಬದಲಿಗೆ ಗ್ರಾಮದ ಹಲವರ ಕಂದಾಯ ಭೂಮಿ ದಾಖಲೆಗಳ ಸಮಸ್ಯೆಗಳು ಪರಿಹಾರವಾದವು.<br /> <br /> ಮುಖ್ಯಶಿಕ್ಷಕರ ಸ್ಥಾನದಲ್ಲಿ ಜಿಲ್ಲಾಧಿಕಾರಿ ಡಿ.ಕೆ.ರವಿ ಇದ್ದರು. ವಿದ್ಯಾರ್ಥಿಗಳ ಸ್ಥಾನದಲ್ಲಿ ಹಳ್ಳಿಗರಿದ್ದರು. ಶೈಕ್ಷಣಿಕ ಚಟುವಟಿಕೆ ನಡೆಯುತ್ತಿದ್ದ ಸ್ಥಳದಲ್ಲಿ ಇದೇ ಮೊದಲ ಬಾರಿಗೆ ‘ಕಂದಾಯ ಅದಾಲತ್’ ನಡೆಯಿತು. ಕಂದಾಯ ಇಲಾಖೆ ಸಿಬ್ಬಂದಿಗೆ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಯ ಜವಾಬ್ದಾರಿಗಳ ನಿರ್ವಹಣೆ ಪಾಠಗಳನ್ನೂ ಹೇಳಿ-ಕೊಟ್ಟರು.<br /> <br /> ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಬೆಳ್ಳೂರಿನಲ್ಲಿ ನಡೆದರೆ, ಮಧ್ಯಾಹ್ನದ ಬಳಿಕ ಅದೇ ಹೋಬಳಿಯ ಚೌಡದೇನಹಳ್ಳಿಯ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಅದಾಲತ್ ನಡೆಯಿತು. ಪಹಣಿ ತಿದ್ದುಪಡಿಯ 161 ಪ್ರಕರಣಗಳೂ ಸೇರಿದಂತೆ ಒಟ್ಟಾರೆ 291 ಪ್ರಕರಣ ಸ್ಥಳದಲ್ಲೇ ಇತ್ಯರ್ಥಪಡಿಸಲಾಯಿತು.<br /> <br /> 45 ಪ್ರಕರಣಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿ ದಾಖಲೆಗಳ ಪರಿಶೀಲನೆಗೆ ಜಿಲ್ಲಾಧಿಕಾರಿ ಆದೇಶಿಸಿದರು. ಸಾಮಾಜಿಕ ಭದ್ರತಾ ಯೋಜನೆ ಅಡಿ ನಿವೃತ್ತಿ ವೇತನ ದೊರೆತಿಲ್ಲ ಎಂಬ ಒಂದು ದೂರಿಗೆ ಸಂಬಂಧಿಸಿದ ಅಧಿಕಾರಿಯೊಡನೆ ದೂರವಾಣಿ ಮೂಲಕವೇ ಮಾತನಾಡಿದ ಡಿ.ಸಿ, ಅರ್ಜಿದಾರರಿಗೆ ಅನುಕೂಲ ಮಾಡಿಕೊಟ್ಟರು.<br /> <br /> ತಮ್ಮ ಹಳ್ಳಿಗೇ ಜಿಲ್ಲಾಡಳಿತ ಬಂದು ಸ್ಥಳದಲ್ಲೇ ಸಮಸ್ಯೆಗಳನ್ನು ಪರಿಹರಿಸಿ ಕೊಟ್ಟದ್ದಕ್ಕೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು.<br /> <br /> ಹಲವಾರು ವರ್ಷಗಳಿಂದ ಪರಿಹಾರವಾಗದೆ ಉಳಿದಿದ್ದ ಕಂದಾಯ ಭೂಮಿ ದಾಖಲೆಗಳ ಸಮಸ್ಯೆಗಳನ್ನು ಗದ್ದಲ, -ಗೊಂದವಿಲ್ಲದೆ ಮುಕ್ತ ಹಾಗೂ ಪಾರದರ್ಶಕವಾಗಿ ದಾಖಲೆಗಳ ಆಧಾರದೊಂದಿಗೆ ಸಂಬಂಧಿಸಿದವರ ಸಮ್ಮುಖದಲ್ಲೇ ಇತ್ಯರ್ಥ ಪಡಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.<br /> <br /> ಕಂದಾಯ ಇಲಾಖೆಯಲ್ಲಿ ಇತ್ಯರ್ಥವಾಗದೆ ಉಳಿದಿದ್ದ ಪಹಣಿ ತಿದ್ದುಪಡಿ, ಫವತಿವಾರು ಖಾತೆ ಬದಲಾವಣೆ, ಖಾತೆ ಬದಲಾವಣೆ ಪ್ರಕರಣಗಳನ್ನು ಅದಾಲತ್ ಸಲುವಾಗಿ ಮೊದಲೇ ಸಿಬ್ಬಂದಿ ಗುರುತಿಸಿದ್ದರು. ಅವುಗಳನ್ನಷ್ಟೇ ಅದಾಲತ್ನಲ್ಲಿ ಇತ್ಯರ್ಥ ಪಡಿಸುವ ಕೆಲಸ ಸೋಮವಾರ ನಡೆಯಿತು.<br /> <br /> ಹೋಬಳಿ ಹಾಗೂ ಆಯಾ ಗ್ರಾಮ ಮಟ್ಟದ ಗ್ರಾಮಲೆಕ್ಕಿಗರು, ಕಂದಾಯ ನಿರೀಕ್ಷಕರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಕಡತಗಳ ಸಮೇತ ಹಾಜರಾಗಿದ್ದ ಪರಿಣಾಮ ಅದಾಲತ್ ಗೊಂದಲವಿಲ್ಲದೆ ನಡೆಯಿತು.<br /> <br /> ಹೆಚ್ಚುವರಿ ಜಿಲ್ಲಾಧಿಕಾರಿ ನವೀನ್ ಕುಮಾರ್ ರಾಜು, ಉಪವಿಭಾಗಾಧಿ ಕಾರಿ ಸಿ.ಎನ್.ಮಂಜುನಾಥ್, ತಹಶೀಲ್ದಾರ್ ನಾಗರಾಜ್ ಗೌಡ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಾನಕಿ ರಾಮ್, ಭೂ ದಾಖಲೆಗಳ ಸಹಾಯಕ ನಿರ್ದೇಶಕಿ ಮೋನಿಷಾ, ಹಕ್ಕು ದಾಖಲೆ-ಗಳ ಶಿರಸ್ತೇ ದಾರ್ ನಾಗರಾಜ್ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>