ತಾವರಗೇರಾ: ಇಲ್ಲಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಶುಕ್ರವಾರ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ನೆರವೇರಿಸುವ ಮೂಲಕ ಪರಿಷತ್ತಿನ 73 ನೇ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು.
ನಗರ ಘಟಕದ ಅಧ್ಯಕ್ಷ ಶಂಭುನಗೌಡ ಪಾಟೀಲ, ಕಾರ್ಯಾಧ್ಯಕ್ಷ ಸುರೇಶ ಗುಡದೂರು, ನಗರ ಘಟಕದ ಕಾರ್ಯದರ್ಶಿ ನಾಗರಾಜ ಗುಡದೂರು, ಶಿವಕುಮಾರ ದುಮತಿ, ಶ್ರೀಧರ ದಂಡಿನ್, ರವಿಕುಮಾರ, ಅಮರೇಶ, ಭೀಮೇಶ, ಪ್ರವೀಣ ಮತ್ತು ಸಂಘಟನೆ ಸದಸ್ಯರು ಸೇರಿದಂತೆ ಹಲವರು ಇದ್ದರು.