ಒಂದು ಎಕರೆಯಲ್ಲಿ 200 ಗಂಧದ ಮರ, 200 ಸಾಗವಾನಿಮರ, ಮಾವು, ನೇರಳೆ, ಕರಿಬೇವು, ಚಿಕ್ಕೂ, ಬಾಳೆ ಸೇರಿದಂತೆ 400ಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ. ಇವೆಲ್ಲವೂ ಸಾವಯವ ಕೃಷಿಗಳ ಮೂಲಕ ಬೆಳೆಯಲಾಗಿದೆ ಎಂದು ರೈತ ಜಡೇಸ್ವಾಮಿ ತೋಟದ ವಿಶೇಷತೆಯನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಗವಿಸಿದ್ಧೇಶ್ವರ ಬಾಳೆ ತೋಟಕ್ಕೂ ಭೇಟಿ ನೀಡಿ, ಅಧ್ಯಯನ ಮಾಡಲಾಯಿತು.