ಇಗಾಗಲೇ ಒಂದು ಭಾರಿ ಕಟಾವು ಮಾಡಿ 35 ಟನ್ ಬಾಳೆ ಮಾರಾಟ ಮಾಡಿ ₹ 3 ಲಕ್ಷ ಆದಾಯ ಪಡೆದಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಕಟಾವು ಮಾಡುತ್ತಿದ್ದು, ಈ ಬಾರಿಯೂ ಬಂಪರ್ ಬೆಳೆ ಕೈಸಿಗಲಿದೆ. ಇವರು ತೋಟಗಾರಿಕೆ ಇಲಾಖೆಯಿಂದ ಅಂದಾಜು ವೆಚ್ಚ ₹ 1,05,702 ಗಳಲ್ಲಿ 320 ಮಾನವ ದಿನಗಳನ್ನು ಸೃಜಿಸಿ, ಸಸಿಗಳನ್ನು ಖರೀದಿಸಿ ಸಾಮಗ್ರಿ ಮತ್ತು ಕೂಲಿ ವೆಚ್ಛ ಸೇರಿ ₹ 1,05,702ಗಳ ಸೌಲಭ್ಯವನ್ನು ಪಡೆದಿದ್ದಾರೆ. ಈಗ ಎರಡನೇ ಬೆಳೆ ಕೈಗೆ ಬಂದಿದ್ದು, ರೈತನ ಮುಖದಲ್ಲಿ ಖುಷಿ ಮೂಡಿದೆ.