<p><strong>ಕುಕುನೂರು</strong>: ಬರೀ ಜೋಳ, ತೊಗರಿ, ಹೆಸರು ಬೆಳೆದು ಹೇಳಿಕೊಳ್ಳುವಷ್ಟು ಲಾಭವಿಲ್ಲದ್ದರಿಂದ ತೋಟಗಾರಿಕೆ ಬೆಳೆಯತ್ತ ಮುಖ ಮಾಡಿದ ಶಿವಪ್ಪ ಅವರ ಕುಟುಂಬಕ್ಕೆ ಕೃಷಿ ಬದುಕಲ್ಲಿ ಬಾಳೆ ಬೆಳೆ ಹೊಸ ನಿರೀಕ್ಷೆ ಮೂಡಿಸಿದೆ.</p>.<p>ತಾಲ್ಲೂಕಿನ ಇಟಗಿ ಗ್ರಾಮ ಪಂಚಾಯತಿಯ ಕೃಷಿಕರಾದ ಶಿವಪ್ಪ ನಾಗಪ್ಪ ಹುಜರತ್ತಿ ಅವರು ತೋಟಗಾರಿಕೆ ಇಲಾಖೆಯ ಉದ್ಯೋಗ ಖಾತರಿ ಯೋಜನೆಯಡಿ 2020-21ರಲ್ಲಿ ಮೂರುವರೆ ಎಕರೆ ಭೂಮಿಯಲ್ಲಿ 2000 ಬಾಳೆ ಸಸಿ ಬೆಳೆದಿದ್ದಾರೆ.</p>.<p>ಇಗಾಗಲೇ ಒಂದು ಭಾರಿ ಕಟಾವು ಮಾಡಿ 35 ಟನ್ ಬಾಳೆ ಮಾರಾಟ ಮಾಡಿ ₹ 3 ಲಕ್ಷ ಆದಾಯ ಪಡೆದಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಕಟಾವು ಮಾಡುತ್ತಿದ್ದು, ಈ ಬಾರಿಯೂ ಬಂಪರ್ ಬೆಳೆ ಕೈಸಿಗಲಿದೆ. ಇವರು ತೋಟಗಾರಿಕೆ ಇಲಾಖೆಯಿಂದ ಅಂದಾಜು ವೆಚ್ಚ ₹ 1,05,702 ಗಳಲ್ಲಿ 320 ಮಾನವ ದಿನಗಳನ್ನು ಸೃಜಿಸಿ, ಸಸಿಗಳನ್ನು ಖರೀದಿಸಿ ಸಾಮಗ್ರಿ ಮತ್ತು ಕೂಲಿ ವೆಚ್ಛ ಸೇರಿ ₹ 1,05,702ಗಳ ಸೌಲಭ್ಯವನ್ನು ಪಡೆದಿದ್ದಾರೆ. ಈಗ ಎರಡನೇ ಬೆಳೆ ಕೈಗೆ ಬಂದಿದ್ದು, ರೈತನ ಮುಖದಲ್ಲಿ ಖುಷಿ ಮೂಡಿದೆ.</p>.<p>ಕೃಷಿಕ ಶಿವಪ್ಪ ಅವರು ಸಾವಯವ ಕೃಷಿ ಪದ್ಧತಿಯಲ್ಲಿ ಬಾಳೆ ಬೆಳೆಯುತ್ತಿದ್ದಾರೆ. ಇವರು ಯಾವುದೇ ರಾಸಾಯನಿಕ ಗೊಬ್ಬರದ ಮೊರೆ ಹೋಗದೆ, ಸಗಣಿ ಗೊಬ್ಬರ, ಕೊಟ್ಟಿಗೆ ಗೊಬ್ಬರ, ಜೀವಾಮೃತ, ಬಳಕೆ ಮಾಡುವ ಮೂಲಕ ಸಾವಯವ ಕೃಷಿ ಮಾಡುತ್ತಿದ್ದಾರೆ. ಈ ಮುಂಚೆ ಹೆಸರು, ಮೆಕ್ಕೆಜೋಳ, ತೊಗರಿ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದಾಗ ಇಷ್ಟೊಂದು ಲಾಭ ಇರಲಿಲ್ಲ. ಈಗ ಕೈತುಂಬ ಹಣ ಸಿಗುತ್ತಿದೆ ಎನ್ನುತ್ತಾರೆ ಶಿವಪ್ಪ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಕುನೂರು</strong>: ಬರೀ ಜೋಳ, ತೊಗರಿ, ಹೆಸರು ಬೆಳೆದು ಹೇಳಿಕೊಳ್ಳುವಷ್ಟು ಲಾಭವಿಲ್ಲದ್ದರಿಂದ ತೋಟಗಾರಿಕೆ ಬೆಳೆಯತ್ತ ಮುಖ ಮಾಡಿದ ಶಿವಪ್ಪ ಅವರ ಕುಟುಂಬಕ್ಕೆ ಕೃಷಿ ಬದುಕಲ್ಲಿ ಬಾಳೆ ಬೆಳೆ ಹೊಸ ನಿರೀಕ್ಷೆ ಮೂಡಿಸಿದೆ.</p>.<p>ತಾಲ್ಲೂಕಿನ ಇಟಗಿ ಗ್ರಾಮ ಪಂಚಾಯತಿಯ ಕೃಷಿಕರಾದ ಶಿವಪ್ಪ ನಾಗಪ್ಪ ಹುಜರತ್ತಿ ಅವರು ತೋಟಗಾರಿಕೆ ಇಲಾಖೆಯ ಉದ್ಯೋಗ ಖಾತರಿ ಯೋಜನೆಯಡಿ 2020-21ರಲ್ಲಿ ಮೂರುವರೆ ಎಕರೆ ಭೂಮಿಯಲ್ಲಿ 2000 ಬಾಳೆ ಸಸಿ ಬೆಳೆದಿದ್ದಾರೆ.</p>.<p>ಇಗಾಗಲೇ ಒಂದು ಭಾರಿ ಕಟಾವು ಮಾಡಿ 35 ಟನ್ ಬಾಳೆ ಮಾರಾಟ ಮಾಡಿ ₹ 3 ಲಕ್ಷ ಆದಾಯ ಪಡೆದಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಕಟಾವು ಮಾಡುತ್ತಿದ್ದು, ಈ ಬಾರಿಯೂ ಬಂಪರ್ ಬೆಳೆ ಕೈಸಿಗಲಿದೆ. ಇವರು ತೋಟಗಾರಿಕೆ ಇಲಾಖೆಯಿಂದ ಅಂದಾಜು ವೆಚ್ಚ ₹ 1,05,702 ಗಳಲ್ಲಿ 320 ಮಾನವ ದಿನಗಳನ್ನು ಸೃಜಿಸಿ, ಸಸಿಗಳನ್ನು ಖರೀದಿಸಿ ಸಾಮಗ್ರಿ ಮತ್ತು ಕೂಲಿ ವೆಚ್ಛ ಸೇರಿ ₹ 1,05,702ಗಳ ಸೌಲಭ್ಯವನ್ನು ಪಡೆದಿದ್ದಾರೆ. ಈಗ ಎರಡನೇ ಬೆಳೆ ಕೈಗೆ ಬಂದಿದ್ದು, ರೈತನ ಮುಖದಲ್ಲಿ ಖುಷಿ ಮೂಡಿದೆ.</p>.<p>ಕೃಷಿಕ ಶಿವಪ್ಪ ಅವರು ಸಾವಯವ ಕೃಷಿ ಪದ್ಧತಿಯಲ್ಲಿ ಬಾಳೆ ಬೆಳೆಯುತ್ತಿದ್ದಾರೆ. ಇವರು ಯಾವುದೇ ರಾಸಾಯನಿಕ ಗೊಬ್ಬರದ ಮೊರೆ ಹೋಗದೆ, ಸಗಣಿ ಗೊಬ್ಬರ, ಕೊಟ್ಟಿಗೆ ಗೊಬ್ಬರ, ಜೀವಾಮೃತ, ಬಳಕೆ ಮಾಡುವ ಮೂಲಕ ಸಾವಯವ ಕೃಷಿ ಮಾಡುತ್ತಿದ್ದಾರೆ. ಈ ಮುಂಚೆ ಹೆಸರು, ಮೆಕ್ಕೆಜೋಳ, ತೊಗರಿ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದಾಗ ಇಷ್ಟೊಂದು ಲಾಭ ಇರಲಿಲ್ಲ. ಈಗ ಕೈತುಂಬ ಹಣ ಸಿಗುತ್ತಿದೆ ಎನ್ನುತ್ತಾರೆ ಶಿವಪ್ಪ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>