<p><strong>ದೋಟಿಹಾಳ (ಕುಷ್ಟಗಿ):</strong> ತಾಲ್ಲೂಕಿನ ದೋಟಿಹಾಳ ಗ್ರಾಮದ ಗಜಾನನ ಗ್ರಾಹಕರ ಸಹಕಾರ ಸಂಘದ 58ನೇ ವಾರ್ಷಿಕ ಮಹಾಸಭೆ ನಡೆಯಿತು.</p>.<p>2020-21ನೇ ಸಾಲಿನ ವರದಿ ಮಂಡಿಸಿದ ಸಂಘದ ಕಾರ್ಯದರ್ಶಿ ಈಶ್ವರಸ್ವಾಮಿ ದೇವಾಂಗಮಠ, ಸಂಘದಲ್ಲಿ 174 ಸದಸ್ಯರಿದ್ದು ₹ 20,098 ಷೇರು ಹಣ, ಸರ್ಕಾರದ ₹ 23,000 ಪಾಲು ಧನ ಹಾಗೂ ₹ 12,500 ಸಹಾಯಧನ ಇರುತ್ತದೆ ಎಂದು ವಿವರಿಸಿದರು.</p>.<p>ಸಂಘದ ಮೂಲಕ ಸಾರ್ವಜನಿಕರಿಗೆ ಪಡಿತರ ಆಹಾರ ಧಾನ್ಯ ವಿತರಣೆ ಮಾಡುತ್ತಿದ್ದು ಪ್ರಸಕ್ತ ವರ್ಷ ₹ 1,57,493 ಲಕ್ಷ ಮೊತ್ತದ ಆಹಾರಧಾನ್ಯ ಖರೀದಿಸಲಾಗಿದ್ದು ಅದರಲ್ಲಿ ₹ 1,63,870 ಲಕ್ಷ ಮೊತ್ತದ ಪಡಿತರ ಆಹಾರಧಾನ್ಯವನ್ನು ಮಾರಾಟ ಮಾಡಲಾಗಿದೆ. ಇದರಿಂದ ₹ 41,381 ವ್ಯವಹಾರಿಕ ಲಾಭವಾಗಿದ್ದು ಎಲ್ಲಾ ಖರ್ಚು ವೆಚ್ಚಗಳನ್ನು ಕಳೆದು ₹ 1,24,489 ಲಕ್ಷ ನಿವ್ವಳ ಲಾಭವಾಗಿದೆ ಎಂದು ಹೇಳಿದರು.</p>.<p>ಅಧ್ಯಕ್ಷ ಪಂಪಾಪತಿ ಅರಳಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸುರೇಶ ಮಾಳಗಿ, ಮಲ್ಲಪ್ಪ ಮೇದಿಕೇರಿ, ಶ್ರೀನಿವಾಸ ಕಂಟ್ಲಿ, ವೆಂಕಟೇಶ ರಾಯಚೂರ, ವಿರುಪಾಕ್ಷಪ್ಪ ಪತ್ತಾರ, ಅಕ್ಬರಸಾಬ್ ತಾವರಗೇರಾ, ಹಿರೆಣ್ಯಪ್ಪ ಸಕ್ರಿ ಹಾಗೂ ಸಂಘದ ಆಡಳಿತ ಮಂಡಳಿ ನಿರ್ದೇಶಕರು, ಷೇರುದಾರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೋಟಿಹಾಳ (ಕುಷ್ಟಗಿ):</strong> ತಾಲ್ಲೂಕಿನ ದೋಟಿಹಾಳ ಗ್ರಾಮದ ಗಜಾನನ ಗ್ರಾಹಕರ ಸಹಕಾರ ಸಂಘದ 58ನೇ ವಾರ್ಷಿಕ ಮಹಾಸಭೆ ನಡೆಯಿತು.</p>.<p>2020-21ನೇ ಸಾಲಿನ ವರದಿ ಮಂಡಿಸಿದ ಸಂಘದ ಕಾರ್ಯದರ್ಶಿ ಈಶ್ವರಸ್ವಾಮಿ ದೇವಾಂಗಮಠ, ಸಂಘದಲ್ಲಿ 174 ಸದಸ್ಯರಿದ್ದು ₹ 20,098 ಷೇರು ಹಣ, ಸರ್ಕಾರದ ₹ 23,000 ಪಾಲು ಧನ ಹಾಗೂ ₹ 12,500 ಸಹಾಯಧನ ಇರುತ್ತದೆ ಎಂದು ವಿವರಿಸಿದರು.</p>.<p>ಸಂಘದ ಮೂಲಕ ಸಾರ್ವಜನಿಕರಿಗೆ ಪಡಿತರ ಆಹಾರ ಧಾನ್ಯ ವಿತರಣೆ ಮಾಡುತ್ತಿದ್ದು ಪ್ರಸಕ್ತ ವರ್ಷ ₹ 1,57,493 ಲಕ್ಷ ಮೊತ್ತದ ಆಹಾರಧಾನ್ಯ ಖರೀದಿಸಲಾಗಿದ್ದು ಅದರಲ್ಲಿ ₹ 1,63,870 ಲಕ್ಷ ಮೊತ್ತದ ಪಡಿತರ ಆಹಾರಧಾನ್ಯವನ್ನು ಮಾರಾಟ ಮಾಡಲಾಗಿದೆ. ಇದರಿಂದ ₹ 41,381 ವ್ಯವಹಾರಿಕ ಲಾಭವಾಗಿದ್ದು ಎಲ್ಲಾ ಖರ್ಚು ವೆಚ್ಚಗಳನ್ನು ಕಳೆದು ₹ 1,24,489 ಲಕ್ಷ ನಿವ್ವಳ ಲಾಭವಾಗಿದೆ ಎಂದು ಹೇಳಿದರು.</p>.<p>ಅಧ್ಯಕ್ಷ ಪಂಪಾಪತಿ ಅರಳಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸುರೇಶ ಮಾಳಗಿ, ಮಲ್ಲಪ್ಪ ಮೇದಿಕೇರಿ, ಶ್ರೀನಿವಾಸ ಕಂಟ್ಲಿ, ವೆಂಕಟೇಶ ರಾಯಚೂರ, ವಿರುಪಾಕ್ಷಪ್ಪ ಪತ್ತಾರ, ಅಕ್ಬರಸಾಬ್ ತಾವರಗೇರಾ, ಹಿರೆಣ್ಯಪ್ಪ ಸಕ್ರಿ ಹಾಗೂ ಸಂಘದ ಆಡಳಿತ ಮಂಡಳಿ ನಿರ್ದೇಶಕರು, ಷೇರುದಾರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>