ಗಂಗಾವತಿ: ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟಕ್ಕೆ ಶನಿವಾರ ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಅವರು ಸ್ಥಳೀಯ ಪಕ್ಷದ ಕಾರ್ಯಕರ್ತರೊಂದಿಗೆ ಭೇಟಿ ಆಂಜನೇಯನ ದರ್ಶನ ಪಡೆದರು.
ಶನಿವಾರ ಅಂಜನಾದ್ರಿ ಬೆಟ್ಟಕ್ಕೆ ಭಕ್ತರ ಭೇಟಿ ಹೆಚ್ಚಿರುವ ಕಾರಣ ಡಾ.ಬಸವರಾಜ ಅವರು ಅಂಜನಾದ್ರಿ ಬೆಟ್ಟದ ಹಿಂಬದಿಯ ವೇದಪಾಠ ಶಾಲೆಯ ಬಳಿಯ ಮೆಟ್ಟಿಲುಗಳ ಮೂಲಕ ಅಂಜನಾದ್ರಿ ಬೆಟ್ಟವೇರಿದರು.
ನಂತರ ಆಂಜನೇಯನಿಗೆ ಅರ್ಚರ ಮೂಲಕ ವಿಶೇಷ ಪೂಜೆ ಸಲ್ಲಿಸಿ, ಲೋಕಸಮರದಲ್ಲಿ ಗೆಲ್ಲಲು ಶಕ್ತಿ ನೀಡುವಂತೆ ಹರಕೆ ಹೊತ್ತರು. ಈ ವೇಳೆ ಬಿಜೆಪಿ ಕಾರ್ಯಕರ್ತರಾದ ಶಿವಕುಮಾರ, ಶ್ರೀನಿವಾಸ ದೂಳ, ಮಲ್ಲಿಕಾರ್ಜುನ ಸ್ವಾಮಿ, ವೀರೇಶ ಹನುಮನಹಳ್ಳಿ, ಸಾಯಿಕುಮಾರ, ರಾಜ ಆನೆಗೊಂದಿ ಪಾಲ್ಗೊಂಡಿದ್ದರು.