ಚಿರತೆ ಸೆರೆಗಾಗಿ ವಾರದಿಂದ ಶ್ರಮಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು ವಿವಿಧೆಡೆ ಏಳು ಬೋನ್ಗಳನ್ನು ಇಟ್ಟಿದ್ದು, ಟ್ರ್ಯಾಪ್ ಕ್ಯಾಮೆರಾಗಳನ್ನೂ ಅಳವಡಿಸಿದ್ದಾರೆ. ಆದರೆ, ಅದು ಸೆರೆ ಸಿಗದಿರುವುದು ಸಣಾಪುರ, ಜಂಗ್ಲಿ ರಂಗಾಪುರ, ಹನುಮನಹಳ್ಳಿ, ರಾಂಪುರ ಹಾಗೂ ಮಲ್ಲಾಪುರ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ.