ಗಂಗಾವತಿ: ಗಾಂಧಿನಗರದವಡೆಯರ ಓಣಿಯ 18 ವರ್ಷದ ನಿವಾಸಿಯೊಬ್ಬರಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.
ಸೋಂಕಿತ ವ್ಯಕ್ತಿಯುತಂದೆಯೊಂದಿಗೆ ಮನೆಯಲ್ಲಿ ಒಬ್ಬನೇ ವಾಸಿಸುತ್ತಿದ್ದ. ಸೋಂಕಿತ ವ್ಯಕ್ತಿಯನ್ನು ಕೊಪ್ಪಳಕ್ಕೆ ಕರೆದೊಯ್ಯಲಾಗಿದೆ. ಅಲ್ಲಿಐಸೋಲೇಶನ್ ವಾರ್ಡ್ಗೆ ದಾಖಲಿಸಿ,ಚಿಕಿತ್ಸೆ ಕೊಡಲಾಗುತ್ತಿದೆ.
ಸೋಂಕಿತ ವ್ಯಕ್ತಿಯ ತಂದೆಗೆ ಮನೆಯಿಂದ ಹೊರಗೆ ಹೋಗದಂತೆ ನಿರ್ಬಂಧಿಸಲಾಗಿದೆ. ಇವರುಗಂಗಾವತಿಯ 21ನೇ ವಾರ್ಡ್ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಸೋಂಕು ಪತ್ತೆಯಾದ ಯುವಕನಿದ್ದ ಮನೆಯ ಸುತ್ತಲಿನ 100 ಮೀ ಸುತ್ತಳತೆಯಲ್ಲಿಸೀಲ್ಡೌನ್ ಮಾಡಲುತಾಲ್ಲೂಕು ಆಡಳಿತ ನಿರ್ಧರಿಸಿದೆ.ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸುವ ಸಾಧ್ಯತೆಯ ಬಗ್ಗೆಯೂ ಅಧಿಕಾರಿಗಳು ಚರ್ಚಿಸುತ್ತಿದ್ದಾರೆ.
ಸೋಂಕಿತ ಯುವಕತಮಿಳುನಾಡು ಮೂಲದ ಬಟ್ಟೆ ವ್ಯಾಪಾರಿಯಾಗಿದ್ದು, ಲಾಕಡೌನ್ಸಂದಭದಲ್ಲಿ ಬೆಂಗಳೂರಿನಲ್ಲಿದ್ದ ಎನ್ನಲಾಗಿದೆ.ವಾರದ ಹಿಂದಷ್ಟೇ ಈತನಗರಕ್ಕೆ ಆಗಮಿಸಿದ್ದ.