<p><strong>ಕೊಪ್ಪಳ:</strong> ತಾಲ್ಲೂಕಿನ ನಾಗೇಶನಹಳ್ಳಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆ ಮತ್ತು ಪ್ರೊ.ಬಿ.ಕೃಷ್ಣಪ್ಪ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಾಂಸ್ಕೃತಿಕ ಸಂಸ್ಥೆ ಮದಲಗಟ್ಟಿ ಸಂಯೋಗದಲ್ಲಿ ಜಾನಪದ ಹಾಗೂ ತತ್ವಪದ ಸಂಗೀತ ಕಾರ್ಯಕ್ರಮ ನಡೆಯಿತು.</p>.<p>ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ರಮೇಶ ಹೊಸಕೋಟಿ ಅವರು, ಮೂಲ ಜನಪದ, ತತ್ವಪದ ಹಾಗೂ ಕನ್ನಡ ಸಾಹಿತ್ಯಕ ವಿಚಾರಗಳ ಕುರಿತು ಹಾಗೂ ಅವುಗಳ ಪ್ರಚಲಿತ ಸ್ಥಾನಮಾನ, ಅವುಗಳ ಉಳಿವಿಗೆ ಮಾಡಬೇಕಾದ ಕಾರ್ಯಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.</p>.<p>ಇದಷ್ಟೇ ಅಲ್ಲದೇ ಗ್ರಾಮಿಣ ಭಾಗದಲ್ಲಿ ಇಂತಹ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ರಾಮಲಿಂಗಪ್ಪ ಕುಕನೂರು ಇವರ ಪಾತ್ರ ಬಹು ಮುಖ್ಯ, ಇಂತಹ ಕಲಾವಿದರನ್ನು ಗುರುತಿಸಿ ಅವರ ಕಾರ್ಯ ವೈಖರಿಯನ್ನು ಗುರುತಿಸುವುದು ಅತಿ ಅವಶ್ಯಕವಾಗಿದೆ ಎಂದರು.</p>.<p>ನಂತರ ರಾಮಲಿಂಗಪ್ಪ ಕುಕನೂರು ಮಾತನಾಡಿ, ತತ್ವಪದಗಳು, ವಚನಗಳು ಇವುಗಳು ಅನುಭವದ ನುಡಿಗಳು ಇವುಗಳಿಂದ ಸಮಾಜದಲ್ಲಿ ಅನೇಕ ಬದಲಾವಣೆ ಆಗಿರುವುದನ್ನು ಕಾಣಬಹುದು. ಹಿರಿಯರ ಹಾದಿಯಲ್ಲಿ ಸಾಗುವುದು ನಮ್ಮ ಧರ್ಮ, ಆಧುನಿಕ ಗೀತೆಗಳ ರಚನೆಯಲ್ಲಿ ಸಿಲುಕಿ ಇವುಗಳು ಕಾಣದಂತೆ ಮಾಯವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.</p>.<p>ತತ್ವಪದಗಳ ಗಾಯನ, ವಚನಪದಗಳ ಗಾಯನ ಹಾಗೂ ಮೂಲ ಜಾನಪದ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.</p>.<p>ನಾರಾಯಣಪ್ಪ ಬಕ್ಸದ್ˌ ಲಕ್ಷ್ಮಣ ಹೊಸಕೋಟಿˌ ಈರಪ್ಪ ಬಡಿಗೇರ್ˌ ಮಾದಿನಾಳಪ್ಪ, ಹುಲಗಪ್ಪ ಶಾಹಪುರ ಹಾಗೂ ಕಲಾಭಿಮಾನಿಗಳು ಸೇರಿದಂತೆ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ:</strong> ತಾಲ್ಲೂಕಿನ ನಾಗೇಶನಹಳ್ಳಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆ ಮತ್ತು ಪ್ರೊ.ಬಿ.ಕೃಷ್ಣಪ್ಪ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಾಂಸ್ಕೃತಿಕ ಸಂಸ್ಥೆ ಮದಲಗಟ್ಟಿ ಸಂಯೋಗದಲ್ಲಿ ಜಾನಪದ ಹಾಗೂ ತತ್ವಪದ ಸಂಗೀತ ಕಾರ್ಯಕ್ರಮ ನಡೆಯಿತು.</p>.<p>ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ರಮೇಶ ಹೊಸಕೋಟಿ ಅವರು, ಮೂಲ ಜನಪದ, ತತ್ವಪದ ಹಾಗೂ ಕನ್ನಡ ಸಾಹಿತ್ಯಕ ವಿಚಾರಗಳ ಕುರಿತು ಹಾಗೂ ಅವುಗಳ ಪ್ರಚಲಿತ ಸ್ಥಾನಮಾನ, ಅವುಗಳ ಉಳಿವಿಗೆ ಮಾಡಬೇಕಾದ ಕಾರ್ಯಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.</p>.<p>ಇದಷ್ಟೇ ಅಲ್ಲದೇ ಗ್ರಾಮಿಣ ಭಾಗದಲ್ಲಿ ಇಂತಹ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ರಾಮಲಿಂಗಪ್ಪ ಕುಕನೂರು ಇವರ ಪಾತ್ರ ಬಹು ಮುಖ್ಯ, ಇಂತಹ ಕಲಾವಿದರನ್ನು ಗುರುತಿಸಿ ಅವರ ಕಾರ್ಯ ವೈಖರಿಯನ್ನು ಗುರುತಿಸುವುದು ಅತಿ ಅವಶ್ಯಕವಾಗಿದೆ ಎಂದರು.</p>.<p>ನಂತರ ರಾಮಲಿಂಗಪ್ಪ ಕುಕನೂರು ಮಾತನಾಡಿ, ತತ್ವಪದಗಳು, ವಚನಗಳು ಇವುಗಳು ಅನುಭವದ ನುಡಿಗಳು ಇವುಗಳಿಂದ ಸಮಾಜದಲ್ಲಿ ಅನೇಕ ಬದಲಾವಣೆ ಆಗಿರುವುದನ್ನು ಕಾಣಬಹುದು. ಹಿರಿಯರ ಹಾದಿಯಲ್ಲಿ ಸಾಗುವುದು ನಮ್ಮ ಧರ್ಮ, ಆಧುನಿಕ ಗೀತೆಗಳ ರಚನೆಯಲ್ಲಿ ಸಿಲುಕಿ ಇವುಗಳು ಕಾಣದಂತೆ ಮಾಯವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.</p>.<p>ತತ್ವಪದಗಳ ಗಾಯನ, ವಚನಪದಗಳ ಗಾಯನ ಹಾಗೂ ಮೂಲ ಜಾನಪದ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.</p>.<p>ನಾರಾಯಣಪ್ಪ ಬಕ್ಸದ್ˌ ಲಕ್ಷ್ಮಣ ಹೊಸಕೋಟಿˌ ಈರಪ್ಪ ಬಡಿಗೇರ್ˌ ಮಾದಿನಾಳಪ್ಪ, ಹುಲಗಪ್ಪ ಶಾಹಪುರ ಹಾಗೂ ಕಲಾಭಿಮಾನಿಗಳು ಸೇರಿದಂತೆ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>