ಮೊದಲಿಗೆ 15 ಜನ ಹರಿಗೋಲು ಮಾಲೀಕರಿಗೆ ಪರವಾನಗಿ ನೀಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದು, ಸಾಣಾಪುರ ಗ್ರಾಮದಲ್ಲಿ ಎಲ್ಲರಿಗೂ ಅನುಮತಿ ನೀಡಬೇಕು ಎಂದು ದುಂಬಾಲು ಬಿದ್ದಿದ್ದರು. ಅಧಿಕಾರಿಗಳು ಪರವಾನಗಿ ನೀಡುವ ಭರವಸೆ ನೀಡಿದ್ದರೂ ಅಕ್ರಮವಾಗಿ ಹರಿಗೋಲು ಹಾಕಲಾಗುತ್ತಿತ್ತು. ಈಗ ಅರಣ್ಯ ಇಲಾಖೆಯವರೇ ಜಪ್ತಿ ಮಾಡಿದ್ದಾರೆ.