<p><strong>ಗಂಗಾವತಿ:</strong> ತಾಲ್ಲೂಕಿನ ಸಾರ್ವಜನಿಕರು ಕೊರೊನಾ ಸಂಕಷ್ಟ ತೊಲಗಿಸು ವಿಘ್ನೇಶ್ವರ ಎಂದು ಬೇಡಿಕೊಳ್ಳುತ್ತಾ, ಗುರುವಾರ ನಗರದ ಗಾಂಧಿ ಸರ್ಕಲ್ ಮಾರುಕಟ್ಟೆಯಲ್ಲಿ ಗಣೇಶ ಹಬ್ಬದ ಪೂಜಾ ಸಾಮಗ್ರಿಗಳ ಖರೀದಿಯನ್ನು ಜೋರಾಗಿ ಮಾಡಿದರು.</p>.<p>ಕೊರೊನಾ 3ನೇ ಸಂಭಾವ್ಯ ಅಲೆ ಆತಂಕದ ಹಿನ್ನಲೆಯಲ್ಲೆ, ರಾಜ್ಯ ಸರ್ಕಾರ ಷರತ್ತುಗಳನ್ವಯ ಗಣೇಶ ಹಬ್ಬ ಆಚರಣೆಗೆ ಅನುಮತಿ ನೀಡಿದ್ದು, ತಾಲ್ಲೂಕಿನಲ್ಲಿ ಚತುರ್ಥಿಗೆ ಒಂದು ದಿನ ಬಾಕಿ ಇರುವಾಗಲೇ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಬೆಲೆ ತುಸು ಏರಿಕೆಯಾಗಿದೆ.</p>.<p>ಶ್ರಾವಣ ನಂತರದ ಮೊದಲ ಹಬ್ಬ ಗಣೇಶ ಚತುರ್ಥಿ ಆಗಿದ್ದು, ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಗಣೇಶ ಹಬ್ಬ ಸ್ವಲ್ಪ ಮೆರಗು ಪಡೆದಿದೆ. ಕೋವಿಡ್ ಮಾರ್ಗಸೂಚಿಗಳ ಅನ್ವಯ ಹಬ್ಬದ ಆಚರಣೆಗೆ ಅವಕಾಶ ಒದಗಿ ಬಂದಿದ್ದು, ನಗರದಲ್ಲಿ ಪುಟ್ಟ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಮಾರಾಟ ಭರಾಟೆ ಹೆಚ್ಚಾಗಿದೆ.</p>.<p>ತಾಲ್ಲೂಕಿನ ಆನೆಗುಂದಿ, ಮಲ್ಲಾಪುರ, ಸಂಗಾಪುರ, ಹಿರೇ ಜಂತಕಲ್, ಬಸಾಪಟ್ಟಣ, ದಾಸನಾಳ, ಮರಳಿ ಹಾಗೂ ನಗರದ ಗುಂಡಮ್ಮ ಕ್ಯಾಂಪ್, ಜಯನಗರ, ಮುರಾರಿ ಕ್ಯಾಂಪ್, ಲಕ್ಷ್ಮಿ ಕ್ಯಾಂಪ್ ಸೇರಿದಂತೆ ಇತರೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಂಡಳಿ ಮತ್ತು ಸಾವರ್ಜನಿಕರುಗಣೇಶ ಮೂರ್ತಿ ಖರೀದಿಗಾಗಿ ಮುಗಿಬಿದ್ದರು.</p>.<p>ಹಬ್ಬದ ಅಂಗವಾಗಿ ನಗರದ ಗಾಂಧಿವೃತ್ತ, ಮಹಾವೀರ ಸರ್ಕಲ್, ಗುಂಡಮ್ಮ ಕ್ಯಾಂಪ್ ಗಳಲ್ಲಿ ಗಣೇಶ ಹಬ್ಬಕ್ಕೆ ಬೇಕಾಗುವ ಹಣ್ಣು, ಹೂವು, ಡೆಕೊರೇಷನ್ ಸಾಮಗ್ರಿಗಳನ್ನು ತಳ್ಳು ಗಾಡಿಯ ಮೇಲೆ ಇಟ್ಟು ಮಾರಾಟ ಮಾಡುವ ದೃಶ್ಯಗಳು ಕಂಡು ಬಂದವು.</p>.<p>ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಸೇಬು ₹ 150, ಆರಂಜ್ಗೆ ₹ 50, ಸಿತಾಫಲ ₹ 70, ಡಜನ್ ಬಾಳೆ ಹಣ್ಣಿಗೆ ₹ 60 ಹಾಗೂ ಸಣ್ಣ ಗಾತ್ರ ಬಿಲ್ಪತ್ರಿ, ಸಪೋಟಾ, ಮೊಸಂಬಿ, ಸಿತಾಫಲ, ಬೆಳವಳ ಕಾಯಿ ಒಂದಕ್ಕೆ ₹ 20, ಮಾವಿನ ಎಲೆಕಟ್ಟೆಗೆ ₹ 20, ಜೋಡಿ ಬಾಳೆದಿಂಡು ₹ 150 ರಿಂದ ₹ 200 ರಷ್ಟು ದರ ತುಟ್ಟಿಯಾಗಿದ್ದರು, ವಸ್ತುಗಳ ಖರೀದಿ ಜೋರಾಗಿ ನಡೆಯಿತು.</p>.<p>ಪೂಜಾ ಕಾರ್ಯಕ್ರಮಕ್ಕೆ ಹೂವುಗಳು ಮುಖ್ಯವಾಗಿದ್ದು, ಮಾರುಕಟ್ಟೆಯಲ್ಲಿ ಗುಲಾಬಿ ಹೂವಿನ ಮಾಲೆ ₹ 500, ಸೆವಂತಿ, ಚೆಂಡು ಹೂವು ಮೊಳಕ್ಕೆ ₹ 40, ಜರ್ಬಾರ ಒಂದಕ್ಕೆ ₹ 20, ಒಂದು ಕೆ.ಜಿ ಮಲ್ಲಿಗೆ ₹ 800 ರಂತೆ ಮಾರಾಟ ಮಾಡಲಾಯಿತು.</p>.<p>ಕೋವಿಡ್ನಿಂದ ಸಾಕಷ್ಟು ಜನರು ಆರ್ಥಿಕ ಸಂಕಷ್ಟ ಎದುರುಸುತ್ತಿದ್ದು, ಹಬ್ಬ ಆಚರಣೆಗೆ ಜನರಲ್ಲಿ ಉತ್ಸಾಹ ಕಾಣುತ್ತಿಲ್ಲ. ಎಲ್ಲಾ ವಸ್ತುಗಳು ದುಬಾರಿಯಾಗಿದ್ದು, ಸಾಕಷ್ಟು ಮಂದಿ ಖರೀದಿಯಿಂದ ದೂರ ಉಳಿದಿದ್ದಾರೆ. ಈ ಬಾರಿ ಶೇ 30ರಷ್ಟು ಜನರು ಕೂಡ ಹೂವು ಖರೀದಿ ಆಸಕ್ತಿ ತೋರುತ್ತಿಲ್ಲ ಎಂದು ಹೂವಿನ ವ್ಯಾಪಾರಸ್ಥ ಶಂಕ್ರಪ್ಪ ಹೂಗಾರ ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ:</strong> ತಾಲ್ಲೂಕಿನ ಸಾರ್ವಜನಿಕರು ಕೊರೊನಾ ಸಂಕಷ್ಟ ತೊಲಗಿಸು ವಿಘ್ನೇಶ್ವರ ಎಂದು ಬೇಡಿಕೊಳ್ಳುತ್ತಾ, ಗುರುವಾರ ನಗರದ ಗಾಂಧಿ ಸರ್ಕಲ್ ಮಾರುಕಟ್ಟೆಯಲ್ಲಿ ಗಣೇಶ ಹಬ್ಬದ ಪೂಜಾ ಸಾಮಗ್ರಿಗಳ ಖರೀದಿಯನ್ನು ಜೋರಾಗಿ ಮಾಡಿದರು.</p>.<p>ಕೊರೊನಾ 3ನೇ ಸಂಭಾವ್ಯ ಅಲೆ ಆತಂಕದ ಹಿನ್ನಲೆಯಲ್ಲೆ, ರಾಜ್ಯ ಸರ್ಕಾರ ಷರತ್ತುಗಳನ್ವಯ ಗಣೇಶ ಹಬ್ಬ ಆಚರಣೆಗೆ ಅನುಮತಿ ನೀಡಿದ್ದು, ತಾಲ್ಲೂಕಿನಲ್ಲಿ ಚತುರ್ಥಿಗೆ ಒಂದು ದಿನ ಬಾಕಿ ಇರುವಾಗಲೇ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಬೆಲೆ ತುಸು ಏರಿಕೆಯಾಗಿದೆ.</p>.<p>ಶ್ರಾವಣ ನಂತರದ ಮೊದಲ ಹಬ್ಬ ಗಣೇಶ ಚತುರ್ಥಿ ಆಗಿದ್ದು, ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಗಣೇಶ ಹಬ್ಬ ಸ್ವಲ್ಪ ಮೆರಗು ಪಡೆದಿದೆ. ಕೋವಿಡ್ ಮಾರ್ಗಸೂಚಿಗಳ ಅನ್ವಯ ಹಬ್ಬದ ಆಚರಣೆಗೆ ಅವಕಾಶ ಒದಗಿ ಬಂದಿದ್ದು, ನಗರದಲ್ಲಿ ಪುಟ್ಟ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಮಾರಾಟ ಭರಾಟೆ ಹೆಚ್ಚಾಗಿದೆ.</p>.<p>ತಾಲ್ಲೂಕಿನ ಆನೆಗುಂದಿ, ಮಲ್ಲಾಪುರ, ಸಂಗಾಪುರ, ಹಿರೇ ಜಂತಕಲ್, ಬಸಾಪಟ್ಟಣ, ದಾಸನಾಳ, ಮರಳಿ ಹಾಗೂ ನಗರದ ಗುಂಡಮ್ಮ ಕ್ಯಾಂಪ್, ಜಯನಗರ, ಮುರಾರಿ ಕ್ಯಾಂಪ್, ಲಕ್ಷ್ಮಿ ಕ್ಯಾಂಪ್ ಸೇರಿದಂತೆ ಇತರೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಂಡಳಿ ಮತ್ತು ಸಾವರ್ಜನಿಕರುಗಣೇಶ ಮೂರ್ತಿ ಖರೀದಿಗಾಗಿ ಮುಗಿಬಿದ್ದರು.</p>.<p>ಹಬ್ಬದ ಅಂಗವಾಗಿ ನಗರದ ಗಾಂಧಿವೃತ್ತ, ಮಹಾವೀರ ಸರ್ಕಲ್, ಗುಂಡಮ್ಮ ಕ್ಯಾಂಪ್ ಗಳಲ್ಲಿ ಗಣೇಶ ಹಬ್ಬಕ್ಕೆ ಬೇಕಾಗುವ ಹಣ್ಣು, ಹೂವು, ಡೆಕೊರೇಷನ್ ಸಾಮಗ್ರಿಗಳನ್ನು ತಳ್ಳು ಗಾಡಿಯ ಮೇಲೆ ಇಟ್ಟು ಮಾರಾಟ ಮಾಡುವ ದೃಶ್ಯಗಳು ಕಂಡು ಬಂದವು.</p>.<p>ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಸೇಬು ₹ 150, ಆರಂಜ್ಗೆ ₹ 50, ಸಿತಾಫಲ ₹ 70, ಡಜನ್ ಬಾಳೆ ಹಣ್ಣಿಗೆ ₹ 60 ಹಾಗೂ ಸಣ್ಣ ಗಾತ್ರ ಬಿಲ್ಪತ್ರಿ, ಸಪೋಟಾ, ಮೊಸಂಬಿ, ಸಿತಾಫಲ, ಬೆಳವಳ ಕಾಯಿ ಒಂದಕ್ಕೆ ₹ 20, ಮಾವಿನ ಎಲೆಕಟ್ಟೆಗೆ ₹ 20, ಜೋಡಿ ಬಾಳೆದಿಂಡು ₹ 150 ರಿಂದ ₹ 200 ರಷ್ಟು ದರ ತುಟ್ಟಿಯಾಗಿದ್ದರು, ವಸ್ತುಗಳ ಖರೀದಿ ಜೋರಾಗಿ ನಡೆಯಿತು.</p>.<p>ಪೂಜಾ ಕಾರ್ಯಕ್ರಮಕ್ಕೆ ಹೂವುಗಳು ಮುಖ್ಯವಾಗಿದ್ದು, ಮಾರುಕಟ್ಟೆಯಲ್ಲಿ ಗುಲಾಬಿ ಹೂವಿನ ಮಾಲೆ ₹ 500, ಸೆವಂತಿ, ಚೆಂಡು ಹೂವು ಮೊಳಕ್ಕೆ ₹ 40, ಜರ್ಬಾರ ಒಂದಕ್ಕೆ ₹ 20, ಒಂದು ಕೆ.ಜಿ ಮಲ್ಲಿಗೆ ₹ 800 ರಂತೆ ಮಾರಾಟ ಮಾಡಲಾಯಿತು.</p>.<p>ಕೋವಿಡ್ನಿಂದ ಸಾಕಷ್ಟು ಜನರು ಆರ್ಥಿಕ ಸಂಕಷ್ಟ ಎದುರುಸುತ್ತಿದ್ದು, ಹಬ್ಬ ಆಚರಣೆಗೆ ಜನರಲ್ಲಿ ಉತ್ಸಾಹ ಕಾಣುತ್ತಿಲ್ಲ. ಎಲ್ಲಾ ವಸ್ತುಗಳು ದುಬಾರಿಯಾಗಿದ್ದು, ಸಾಕಷ್ಟು ಮಂದಿ ಖರೀದಿಯಿಂದ ದೂರ ಉಳಿದಿದ್ದಾರೆ. ಈ ಬಾರಿ ಶೇ 30ರಷ್ಟು ಜನರು ಕೂಡ ಹೂವು ಖರೀದಿ ಆಸಕ್ತಿ ತೋರುತ್ತಿಲ್ಲ ಎಂದು ಹೂವಿನ ವ್ಯಾಪಾರಸ್ಥ ಶಂಕ್ರಪ್ಪ ಹೂಗಾರ ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>