<p><strong>ಕೊಪ್ಪಳ</strong>: ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ ಅವರ ಕಥೆಯಾಧರಿತ ಮತ್ತು ಅವಿನಾಶ ಚವ್ಹಾಣ ಅವರ ನಿರ್ದೇಶನದಲ್ಲಿ ನಿರ್ಮಾಣಗೊಂಡ ‘ಗೌಡ್ರ ಋಣ’ ಕಿರುಚಿತ್ರ ಯೂಟ್ಯೂಬ್ನಲ್ಲಿ ಕೇವಲ 10 ದಿನದಲ್ಲಿ ಸುಮಾರು 2 ಮಿಲಿಯನ್ಗೂ ಅಧಿಕ ಜನ ವೀಕ್ಷಿಸಿದ ನಿಮಿತ್ತ ನಗರದ ಪ್ರವಾಸಿ ಮಂದಿರದಲ್ಲಿ ಕೇಕ್ ಕತ್ತರಿಸಿ, ಸಂಭ್ರಮ ಆಚರಿಸಲಾಯಿತು.</p>.<p>ಸಾಹಿತಿ ಪ್ರೊ.ಅಲ್ಲಪ್ರಭು ಬೆಟ್ಟದೂರು ಮಾತನಾಡಿ,‘ಈ ಕಿರುಚಿತ್ರ ಅಸ್ಪೃಶ್ಯತೆ ಆಚರಣೆ ವಿರುದ್ಧ ಮೌನದ ಮೂಲಕ ಪಾತ್ರಧಾರಿಗಳು ಉತ್ತರ ಕೊಟ್ಟಿದ್ದಾರೆ. ಹಳ್ಳಿಯಲ್ಲಿ ನಡೆಯುವ ದಿನನಿತ್ಯದ ಸಹಜ ಕ್ರಿಯೆಗಳಲ್ಲಿ ಹೇಗೆ ಶೋಷಣೆ, ದರ್ಪ ಅಡಗಿದೆ ಎಂಬುದನ್ನು ಈ ಚಿತ್ರ ತೋರುತ್ತದೆ’ ಎಂದರು.</p>.<p>ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜಶೇಖರ ಅಂಗಡಿ ಮಾತನಾಡಿ,‘ಕೊಪ್ಪಳ ಭಾಗದವರು ಕಿರುಚಿತ್ರ ನಿರ್ಮಾಣ ಕ್ರಿಯೆಯಲ್ಲಿ ಒಲವು ತೋರುತ್ತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಜಿಲ್ಲೆಯಲ್ಲಿ ಅನೇಕ ಕಿರುಚಿತ್ರಗಳು ನಿರ್ಮಾಣಗೊಳ್ಳುತ್ತಿರುವುದು ಸಂತಸದ ಸಂಗತಿ’ ಎಂದರು.</p>.<p>ಡಾ.ಸಿದ್ಧಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಚಿತ್ರ ನಿರ್ದೇಶಕ ಅವಿನಾಶ ಚವ್ಹಾಣ ಯೂಟ್ಯೂಬ್ನಲ್ಲಿ ಚಿತ್ರ ವೀಕ್ಷಿಸಿದ ಅಂಕಿ-ಸಂಖ್ಯೆಗಳನ್ನು ನೀಡಿದರು.</p>.<p>ಕಲಾವಿದರಾದ ದುರುಗಪ್ಪ, ರೇಣುಕಮ್ಮ, ಹರ್ಷಿತಾ, ಬಾಲನಟ ವೈಭವ್ ಎಸ್.ಅಳವಂಡಿ ಹಾಗೂ ವಚನಾರಾಜ್ ಬಿ. ಕೊಪ್ಪಳ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ</strong>: ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ ಅವರ ಕಥೆಯಾಧರಿತ ಮತ್ತು ಅವಿನಾಶ ಚವ್ಹಾಣ ಅವರ ನಿರ್ದೇಶನದಲ್ಲಿ ನಿರ್ಮಾಣಗೊಂಡ ‘ಗೌಡ್ರ ಋಣ’ ಕಿರುಚಿತ್ರ ಯೂಟ್ಯೂಬ್ನಲ್ಲಿ ಕೇವಲ 10 ದಿನದಲ್ಲಿ ಸುಮಾರು 2 ಮಿಲಿಯನ್ಗೂ ಅಧಿಕ ಜನ ವೀಕ್ಷಿಸಿದ ನಿಮಿತ್ತ ನಗರದ ಪ್ರವಾಸಿ ಮಂದಿರದಲ್ಲಿ ಕೇಕ್ ಕತ್ತರಿಸಿ, ಸಂಭ್ರಮ ಆಚರಿಸಲಾಯಿತು.</p>.<p>ಸಾಹಿತಿ ಪ್ರೊ.ಅಲ್ಲಪ್ರಭು ಬೆಟ್ಟದೂರು ಮಾತನಾಡಿ,‘ಈ ಕಿರುಚಿತ್ರ ಅಸ್ಪೃಶ್ಯತೆ ಆಚರಣೆ ವಿರುದ್ಧ ಮೌನದ ಮೂಲಕ ಪಾತ್ರಧಾರಿಗಳು ಉತ್ತರ ಕೊಟ್ಟಿದ್ದಾರೆ. ಹಳ್ಳಿಯಲ್ಲಿ ನಡೆಯುವ ದಿನನಿತ್ಯದ ಸಹಜ ಕ್ರಿಯೆಗಳಲ್ಲಿ ಹೇಗೆ ಶೋಷಣೆ, ದರ್ಪ ಅಡಗಿದೆ ಎಂಬುದನ್ನು ಈ ಚಿತ್ರ ತೋರುತ್ತದೆ’ ಎಂದರು.</p>.<p>ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜಶೇಖರ ಅಂಗಡಿ ಮಾತನಾಡಿ,‘ಕೊಪ್ಪಳ ಭಾಗದವರು ಕಿರುಚಿತ್ರ ನಿರ್ಮಾಣ ಕ್ರಿಯೆಯಲ್ಲಿ ಒಲವು ತೋರುತ್ತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಜಿಲ್ಲೆಯಲ್ಲಿ ಅನೇಕ ಕಿರುಚಿತ್ರಗಳು ನಿರ್ಮಾಣಗೊಳ್ಳುತ್ತಿರುವುದು ಸಂತಸದ ಸಂಗತಿ’ ಎಂದರು.</p>.<p>ಡಾ.ಸಿದ್ಧಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಚಿತ್ರ ನಿರ್ದೇಶಕ ಅವಿನಾಶ ಚವ್ಹಾಣ ಯೂಟ್ಯೂಬ್ನಲ್ಲಿ ಚಿತ್ರ ವೀಕ್ಷಿಸಿದ ಅಂಕಿ-ಸಂಖ್ಯೆಗಳನ್ನು ನೀಡಿದರು.</p>.<p>ಕಲಾವಿದರಾದ ದುರುಗಪ್ಪ, ರೇಣುಕಮ್ಮ, ಹರ್ಷಿತಾ, ಬಾಲನಟ ವೈಭವ್ ಎಸ್.ಅಳವಂಡಿ ಹಾಗೂ ವಚನಾರಾಜ್ ಬಿ. ಕೊಪ್ಪಳ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>