<p><strong>ಹನುಮಸಾಗರ</strong>: ತಾಲ್ಲೂಕಿನಲ್ಲಿ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ ವೇಗವಾಗಿ ಸಾಗುತ್ತಿದ್ದು ಗ್ರಾಮೀಣ ಪ್ರದೇಶಗಳ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಶುಕ್ರವಾರವಾದ ನಾಲ್ಕನೇ ದಿನವೂ ಸಮೀಕ್ಷೆ ಚುರುಕುವಾಗಿ ನಡೆಯಿತು.</p>.<p>ತಹಶೀಲ್ದಾರ್ ಮನೆ ಮನೆಗೆ ತೆರಳಿ ಸಮೀಕ್ಷಕರ ಕಾರ್ಯ ವೀಕ್ಷಿಸಿದರು.</p>.<p>‘ಸಮೀಕ್ಷೆಗೆ ಜನರು ಉತ್ಸಾಹದಿಂದ ಸಹಕರಿಸುತ್ತಿರುವುದು ಶ್ಲಾಘನೀಯ. ಈ ರೀತಿಯ ಸಹಭಾಗಿತ್ವವು ಮುಂದಿನ ಅಭಿವೃದ್ಧಿಗೆ ದಾರಿಯಾಗಿದೆ’ ಕುಷ್ಟಗಿ ತಹಶೀಲ್ದಾರ ಅಶೋಕ ಶಿಗ್ಗಾಂವಿ ಅಭಿಪ್ರಾಯಪಟ್ಟರು.</p>.<p>‘ಗ್ರಾಮ ಪಂಚಾಯಿತಿಗಳು ಮತ್ತು ಸ್ಥಳೀಯ ಆಡಳಿತದಿಂದ ನಡೆದ ಜಾಗೃತಿ ಅಭಿಯಾನ ಫಲಶ್ರುತಿಯಾಗಿ ಜನ ಅಗತ್ಯ ದಾಖಲೆಗಳನ್ನು ಸಿದ್ಧವಾಗಿ ಇಟ್ಟುಕೊಂಡಿದ್ದಾರೆ. ಮನೆಗೆ ಭೇಟಿ ನೀಡುತ್ತಿದ್ದಂತೆಯೇ ಅವರು ಸ್ಪಂದಿಸುತ್ತಿರುವುದು ಸಮೀಕ್ಷೆಗೆ ವೇಗ ನೀಡುತ್ತಿದೆ’ ಎಂದು ಸಮೀಕ್ಷಕರು ಪ್ರಜಾವಾಣಿಗೆ ಮಾಹಿತಿ ನೀಡಿದರು.</p>.<p>ಮಳೆ ಸೇರಿ ಇತ್ಯಾದಿ ಸವಾಲುಗಳ ನಡುವೆಯೂ ಸಮೀಕ್ಷಕರು ಉತ್ಸಾಹದಿಂದ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ.</p>.<p>ಈ ಸಂದರ್ಭದಲ್ಲಿ ಶರಣಯ್ಯ, ಅಭಿಷೇಕ, ಲೇಂಕಪ್ಪ, ವೀರನಗೌಡ ಸ್ಥಳದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹನುಮಸಾಗರ</strong>: ತಾಲ್ಲೂಕಿನಲ್ಲಿ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ ವೇಗವಾಗಿ ಸಾಗುತ್ತಿದ್ದು ಗ್ರಾಮೀಣ ಪ್ರದೇಶಗಳ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಶುಕ್ರವಾರವಾದ ನಾಲ್ಕನೇ ದಿನವೂ ಸಮೀಕ್ಷೆ ಚುರುಕುವಾಗಿ ನಡೆಯಿತು.</p>.<p>ತಹಶೀಲ್ದಾರ್ ಮನೆ ಮನೆಗೆ ತೆರಳಿ ಸಮೀಕ್ಷಕರ ಕಾರ್ಯ ವೀಕ್ಷಿಸಿದರು.</p>.<p>‘ಸಮೀಕ್ಷೆಗೆ ಜನರು ಉತ್ಸಾಹದಿಂದ ಸಹಕರಿಸುತ್ತಿರುವುದು ಶ್ಲಾಘನೀಯ. ಈ ರೀತಿಯ ಸಹಭಾಗಿತ್ವವು ಮುಂದಿನ ಅಭಿವೃದ್ಧಿಗೆ ದಾರಿಯಾಗಿದೆ’ ಕುಷ್ಟಗಿ ತಹಶೀಲ್ದಾರ ಅಶೋಕ ಶಿಗ್ಗಾಂವಿ ಅಭಿಪ್ರಾಯಪಟ್ಟರು.</p>.<p>‘ಗ್ರಾಮ ಪಂಚಾಯಿತಿಗಳು ಮತ್ತು ಸ್ಥಳೀಯ ಆಡಳಿತದಿಂದ ನಡೆದ ಜಾಗೃತಿ ಅಭಿಯಾನ ಫಲಶ್ರುತಿಯಾಗಿ ಜನ ಅಗತ್ಯ ದಾಖಲೆಗಳನ್ನು ಸಿದ್ಧವಾಗಿ ಇಟ್ಟುಕೊಂಡಿದ್ದಾರೆ. ಮನೆಗೆ ಭೇಟಿ ನೀಡುತ್ತಿದ್ದಂತೆಯೇ ಅವರು ಸ್ಪಂದಿಸುತ್ತಿರುವುದು ಸಮೀಕ್ಷೆಗೆ ವೇಗ ನೀಡುತ್ತಿದೆ’ ಎಂದು ಸಮೀಕ್ಷಕರು ಪ್ರಜಾವಾಣಿಗೆ ಮಾಹಿತಿ ನೀಡಿದರು.</p>.<p>ಮಳೆ ಸೇರಿ ಇತ್ಯಾದಿ ಸವಾಲುಗಳ ನಡುವೆಯೂ ಸಮೀಕ್ಷಕರು ಉತ್ಸಾಹದಿಂದ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ.</p>.<p>ಈ ಸಂದರ್ಭದಲ್ಲಿ ಶರಣಯ್ಯ, ಅಭಿಷೇಕ, ಲೇಂಕಪ್ಪ, ವೀರನಗೌಡ ಸ್ಥಳದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>