ನಿರ್ಮಾಪಕರಾದ ಅನೀಲಕುಮಾರ ಹಾಗೂ ಕೃಷ್ಣ ಮೇಗೂರು ಮಾತನಾಡಿ, ‘ಸ್ಥಳೀಯ ಪ್ರತಿಭಾವಂತರಾದ ಶರಣ ಬಿಜಕಲ್, ಚನ್ನುಗೌಡ, ವೀರೇಶ ಕತ್ತಿ, ಶರಣಪ್ಪ ಬುಕ್ಕನಟ್ಟಿ, ಮುಸ್ತಾಪಾ, ಮಂಜುನಾಥ್ ಮಂಗಳೂರು, ವಿಶ್ವನಾಥ್ ಪತ್ತಾರ, ವೆಂಕಿ, ಶರಣು ಅಪ್ಪು, ತಿಮ್ಮಣ್ಣ, ಸಾತ್ವಿಕ್ ಹಿರೇಮಠ, ಲೀಲಾವತಿ, ಶೃತಿ, ಅನಿಲ್ಕುಮಾರ್, ಮೂರ್ತಿ, ವೆಂಕಟೇಶ್, ನಂದಕುಮಾರ್, ಭರತ್, ಕಾರ್ತಿಕೇಯ ಚಿತ್ರದಲ್ಲಿದ್ದಾರೆ. ಒಂದೂವರೆ ತಾಸಿನ ಚಲನಚಿತ್ರ ಇದಾಗಿದ್ದು, ಒಂದೂವರೆ ವರ್ಷದಿಂದ ಕಾರಟಗಿ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ರಾಗಸಂಯೋಜನೆ ವಿರಾಗ್ ಬೆನಕನಾಳ, ಹಿನ್ನೆಲೆ ಸಂಗೀತ ಫಯಾಜ್ ಕುಷ್ಟಗಿ, ಸಂಕಲನ ಸಮೀರ್ ಕುಲಕರ್ಣಿ, ಛಾಯಾಗ್ರಹಣ ಅಶೋಕ್ ಕಾಶೆಟ್ಟಿಯವರದ್ದಾಗಿದೆ’ ಎಂದರು.