<p><strong>ಮುನಿರಾಬಾದ್</strong>: ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಯಾತ್ರಾ ಸ್ಥಳ, ಶಕ್ತಿಪೀಠ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದ ಹುಂಡಿ ಎಣಿಕೆ ಮಾಡಲಾಗಿದ್ದು ನಗದು ಸಂಗ್ರಹ ಕೋಟಿ ದಾಟಿದೆ.</p>.<p>ಬುಧವಾರ ಮತ್ತು ಗುರುವಾರ ಎರಡು ದಿನ ನಡೆದ ಹುಂಡಿ ಎಣಿಕೆಯಲ್ಲಿ ಒಟ್ಟು ₹ 1,11,43, 435 ನಗದು ಸಂಗ್ರಹವಾಗಿದ್ದು, ಇದರ ಜೊತೆಗೆ 333 ಗ್ರಾಂ ಚಿನ್ನ ಮತ್ತು 11.3 ಕಿಲೋ ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಇದು 54 ದಿನಗಳ ಸಂಗ್ರಹವಾಗಿದೆ ಎಂದು ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಮಾಹಿತಿ ನೀಡಿದರು.</p>.<p><strong>ಹುಣ್ಣಿಮೆಯ ದಿನ ಜನಸಾಗರ:</strong> </p><p>ಶಕ್ತಿ ದೇವತೆಯ ಆರಾಧನೆ ಮತ್ತು ದರ್ಶನಕ್ಕೆ ಹುಣ್ಣಿಮೆ ಪ್ರಶಸ್ತವಾದ ದಿನ ಎಂಬುದು ನಂಬಿಕೆ. ಅದರಂತೆ ಗೌರಿ ಹುಣ್ಣಿಮೆ ಮತ್ತು ಹೊಸ್ತಿಲ ಹುಣ್ಣಿಮೆಯ ದಿನ ಎರಡರಿಂದ ಮೂರು ಲಕ್ಷ ಭಕ್ತರು ದೇವಿಯ ದರ್ಶನಕ್ಕೆ ಬಂದಿದ್ದರು. ಕಾರ್ತಿಕ ದೀಪೋತ್ಸವಕ್ಕೆ ಕೂಡ ಸಾವಿರಾರು ಭಕ್ತರು ಬಂದಿದ್ದರು.</p>.<p><strong>ಹುಂಡಿಗೆ ಶಕ್ತಿ ತುಂಬಿದ ಶಕ್ತಿ ಯೋಜನೆ:</strong> </p><p>ರಾಜ್ಯ ಸರ್ಕಾರವು ಮಹಿಳೆಯರ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದು, ಮಹಿಳೆಯರ ದೇವಸ್ಥಾನ, ಪ್ರವಾಸಿ ತಾಣಗಳ ದರ್ಶನ ಗಣನೀಯವಾಗಿ ಏರಿಕೆಯಾಗಿದೆ.</p>.<p><strong>ಅಂಜನಾದ್ರಿಯ ಸೆರಗು:</strong> </p><p>ಈಚೆಗೆ ಪ್ರಸಿದ್ಧಿ ಪಡೆದಿರುವ ಗಂಗಾವತಿ ಬಳಿಯ ಅಂಜನಾದ್ರಿ ಬೆಟ್ಟಕ್ಕೆ ಲಕ್ಷಾಂತರ ಹನುಮ ಮಾಲಾಧಾರಿಗಳು ಭೇಟಿ ನೀಡಿದ್ದರು. ಇದೇ ಮಾರ್ಗದಲ್ಲಿ ಸಾಗಿದ ಪಾದಯಾತ್ರಿಗಳು ಮತ್ತು ಭಕ್ತರಿಗೆ ಹುಲಿಗೆಮ್ಮ ದೇವಸ್ಥಾನದಲ್ಲಿ ಕೂಡ ಊಟದ ವ್ಯವಸ್ಥೆ ಮಾಡಲಾಗಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುನಿರಾಬಾದ್</strong>: ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಯಾತ್ರಾ ಸ್ಥಳ, ಶಕ್ತಿಪೀಠ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದ ಹುಂಡಿ ಎಣಿಕೆ ಮಾಡಲಾಗಿದ್ದು ನಗದು ಸಂಗ್ರಹ ಕೋಟಿ ದಾಟಿದೆ.</p>.<p>ಬುಧವಾರ ಮತ್ತು ಗುರುವಾರ ಎರಡು ದಿನ ನಡೆದ ಹುಂಡಿ ಎಣಿಕೆಯಲ್ಲಿ ಒಟ್ಟು ₹ 1,11,43, 435 ನಗದು ಸಂಗ್ರಹವಾಗಿದ್ದು, ಇದರ ಜೊತೆಗೆ 333 ಗ್ರಾಂ ಚಿನ್ನ ಮತ್ತು 11.3 ಕಿಲೋ ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಇದು 54 ದಿನಗಳ ಸಂಗ್ರಹವಾಗಿದೆ ಎಂದು ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಮಾಹಿತಿ ನೀಡಿದರು.</p>.<p><strong>ಹುಣ್ಣಿಮೆಯ ದಿನ ಜನಸಾಗರ:</strong> </p><p>ಶಕ್ತಿ ದೇವತೆಯ ಆರಾಧನೆ ಮತ್ತು ದರ್ಶನಕ್ಕೆ ಹುಣ್ಣಿಮೆ ಪ್ರಶಸ್ತವಾದ ದಿನ ಎಂಬುದು ನಂಬಿಕೆ. ಅದರಂತೆ ಗೌರಿ ಹುಣ್ಣಿಮೆ ಮತ್ತು ಹೊಸ್ತಿಲ ಹುಣ್ಣಿಮೆಯ ದಿನ ಎರಡರಿಂದ ಮೂರು ಲಕ್ಷ ಭಕ್ತರು ದೇವಿಯ ದರ್ಶನಕ್ಕೆ ಬಂದಿದ್ದರು. ಕಾರ್ತಿಕ ದೀಪೋತ್ಸವಕ್ಕೆ ಕೂಡ ಸಾವಿರಾರು ಭಕ್ತರು ಬಂದಿದ್ದರು.</p>.<p><strong>ಹುಂಡಿಗೆ ಶಕ್ತಿ ತುಂಬಿದ ಶಕ್ತಿ ಯೋಜನೆ:</strong> </p><p>ರಾಜ್ಯ ಸರ್ಕಾರವು ಮಹಿಳೆಯರ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದು, ಮಹಿಳೆಯರ ದೇವಸ್ಥಾನ, ಪ್ರವಾಸಿ ತಾಣಗಳ ದರ್ಶನ ಗಣನೀಯವಾಗಿ ಏರಿಕೆಯಾಗಿದೆ.</p>.<p><strong>ಅಂಜನಾದ್ರಿಯ ಸೆರಗು:</strong> </p><p>ಈಚೆಗೆ ಪ್ರಸಿದ್ಧಿ ಪಡೆದಿರುವ ಗಂಗಾವತಿ ಬಳಿಯ ಅಂಜನಾದ್ರಿ ಬೆಟ್ಟಕ್ಕೆ ಲಕ್ಷಾಂತರ ಹನುಮ ಮಾಲಾಧಾರಿಗಳು ಭೇಟಿ ನೀಡಿದ್ದರು. ಇದೇ ಮಾರ್ಗದಲ್ಲಿ ಸಾಗಿದ ಪಾದಯಾತ್ರಿಗಳು ಮತ್ತು ಭಕ್ತರಿಗೆ ಹುಲಿಗೆಮ್ಮ ದೇವಸ್ಥಾನದಲ್ಲಿ ಕೂಡ ಊಟದ ವ್ಯವಸ್ಥೆ ಮಾಡಲಾಗಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>