ಕುಂಭಮೇಳವನ್ನೂ ಮೀರಿಸುವಂತೆ ಕೊಪ್ಪಳದ ಜಾತ್ರೆ ನಡೆಯುತ್ತದೆ. ಇಲ್ಲಿನ ಭಕ್ತರು ಗವಿಸಿದ್ಧೇಶ್ವರ ಪ್ರತಿರೂಪ. ಈಗಿನ ಸ್ವಾಮೀಜಿಯ ಸರಳತೆ ನಮ್ಮಲ್ಲಿ ಆಧ್ಯಾತ್ಮದ ಸಂಚಾರ ಮೂಡಿಸುತ್ತದೆ.ಸಿದ್ಧಲಿಂಗ ಸ್ವಾಮೀಜಿ ತುಮಕೂರಿನ ಸಿದ್ಧಗಂಗಾ ಮಠ
12 ವರ್ಷಗಳಿಗೆಒಮ್ಮ ಕುಂಭಮೇಳ ನಡೆದರೆ ಕೊಪ್ಪಳದಲ್ಲಿ ಪ್ರತಿವರ್ಷವೂ ದಕ್ಷಿಣ ಭಾರತದ ಕುಂಭಮೇಳ ನಡೆಯುತ್ತದೆ. ಇಲ್ಲಿ ಅರಿವಿನ ಜಾತ್ರೆ ಸಮಾನತೆ ಸಹಬಾಳ್ವೆ ಕಾಣುತ್ತಿದ್ದೇವೆ.ರಾಜಶೇಖರ ಹಿಟ್ನಾಳ ಸಂಸದ
ಗವಿಮಠ ಉತ್ತರ ಕರ್ನಾಟಕದಲ್ಲಿ ವಿಶೇಷವಾದ ಪುಣ್ಯಸ್ಥಳವಾಗಿದೆ. ಗವಿಸಿದ್ಧೇಶ್ವರರ ಆದರ್ಶ ಎಲ್ಲರೂ ಪಾಲಿಸಬೇಕು. ಈಗಿನ ಸ್ವಾಮೀಜಿ ಎಲ್ಲರ ಬದುಕಿಗೂ ಮಾದರಿ.ಶಿವರಾಜ ತಂಗಡಗಿ ಜಿಲ್ಲಾ ಉಸ್ತುವಾರಿ ಸಚಿವ
ವರ್ಷದಿಂದ ವರ್ಷಕ್ಕೆ ಜಾತ್ರೆಯ ವೈವಿಧ್ಯಮಯ ಬದಲಾವಣೆ ಕಾಡುತ್ತೇವೆ. ಅಪಾರ ಸಂಖ್ಯೆಯಲ್ಲಿ ಸೇರಿದ ಭಕ್ತರು ಭಕ್ತಿ ಭಾವ ಮೆರೆದ ಎಲ್ಲರಿಗೂ ಒಳ್ಳೆಯದಾಗಲಿ.ಅಮರೇಗೌಡ ಬಯ್ಯಾಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ
ಅನೇಕ ಕಡೆ ಬಹಳಷ್ಟು ಜಾತ್ರೆಗಳು ನಡೆಯುತ್ತವೆ. ಅಲ್ಲಿ ವಿಐಪಿಗಳನ್ನು ನೋಡಲು ಜನ ಬರುತ್ತಾರೆ. ಆದರೆ ಇಲ್ಲಿ ಅತಿ ಗಣ್ಯ ವ್ಯಕ್ತಿಗಳು ಜನರನ್ನೇ ನೋಡಲು ಬರುತ್ತಾರಲ್ಲ ಅದೇ ವಿಶೇಷ.ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಗವಿಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.