ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕೊಪ್ಪಳ | ಗವಿಸಿದ್ಧೇಶ್ವರ ಮಠದ ಜಾತ್ರೆ: ಮಹಾರಥೋತ್ಸವ, ಮಹಾಸಂಗಮ

ಗವಿಮಠದ ಜಾತ್ರೆಗೆ ಲಕ್ಷಾಂತರ ಭಕ್ತರು ಸಾಕ್ಷಿ, ಎಲ್ಲರಿಗೂ ಅಚ್ಚುಕಟ್ಟು ದಾಸೋಹ ವ್ಯವಸ್ಥೆ, ಬೆಳಿಗ್ಗೆಯಿಂದಲೇ ಜನಸಾಗರ
ಪ್ರಮೋದ ಕುಲಕರ್ಣಿ
Published : 16 ಜನವರಿ 2025, 4:50 IST
Last Updated : 16 ಜನವರಿ 2025, 4:50 IST
ಫಾಲೋ ಮಾಡಿ
Comments
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗವಿಮಠ ಜಾತ್ರೆಯಲ್ಲಿ ಪಲ್ಲಕ್ಕಿ ಹೊತ್ತರು
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗವಿಮಠ ಜಾತ್ರೆಯಲ್ಲಿ ಪಲ್ಲಕ್ಕಿ ಹೊತ್ತರು
ಗವಿಮಠಕ್ಕೆ ಬಂದ ಭಕ್ತರಿಗೆ ಮಾಡಲಾಗಿದ್ದು ಪ್ರಸಾದದ ವ್ಯವಸ್ಥೆ
ಗವಿಮಠಕ್ಕೆ ಬಂದ ಭಕ್ತರಿಗೆ ಮಾಡಲಾಗಿದ್ದು ಪ್ರಸಾದದ ವ್ಯವಸ್ಥೆ
ಕುಂಭಮೇಳವನ್ನೂ ಮೀರಿಸುವಂತೆ ಕೊಪ್ಪಳದ ಜಾತ್ರೆ ನಡೆಯುತ್ತದೆ. ಇಲ್ಲಿನ ಭಕ್ತರು ಗವಿಸಿದ್ಧೇಶ್ವರ ಪ್ರತಿರೂಪ. ಈಗಿನ ಸ್ವಾಮೀಜಿಯ ಸರಳತೆ ನಮ್ಮಲ್ಲಿ ಆಧ್ಯಾತ್ಮದ ಸಂಚಾರ ಮೂಡಿಸುತ್ತದೆ.
ಸಿದ್ಧಲಿಂಗ ಸ್ವಾಮೀಜಿ ತುಮಕೂರಿನ ಸಿದ್ಧಗಂಗಾ ಮಠ
12 ವರ್ಷಗಳಿಗೆಒಮ್ಮ ಕುಂಭಮೇಳ ನಡೆದರೆ ಕೊಪ್ಪಳದಲ್ಲಿ ಪ್ರತಿವರ್ಷವೂ ದಕ್ಷಿಣ ಭಾರತದ ಕುಂಭಮೇಳ ನಡೆಯುತ್ತದೆ. ಇಲ್ಲಿ ಅರಿವಿನ ಜಾತ್ರೆ ಸಮಾನತೆ ಸಹಬಾಳ್ವೆ ಕಾಣುತ್ತಿದ್ದೇವೆ.
ರಾಜಶೇಖರ ಹಿಟ್ನಾಳ ಸಂಸದ
ಗವಿಮಠ ಉತ್ತರ ಕರ್ನಾಟಕದಲ್ಲಿ ವಿಶೇಷವಾದ ಪುಣ್ಯಸ್ಥಳವಾಗಿದೆ. ಗವಿಸಿದ್ಧೇಶ್ವರರ ಆದರ್ಶ ಎಲ್ಲರೂ ಪಾಲಿಸಬೇಕು. ಈಗಿನ ಸ್ವಾಮೀಜಿ ಎಲ್ಲರ ಬದುಕಿಗೂ ಮಾದರಿ.
ಶಿವರಾಜ ತಂಗಡಗಿ ಜಿಲ್ಲಾ ಉಸ್ತುವಾರಿ ಸಚಿವ
ವರ್ಷದಿಂದ ವರ್ಷಕ್ಕೆ ಜಾತ್ರೆಯ ವೈವಿಧ್ಯಮಯ ಬದಲಾವಣೆ ಕಾಡುತ್ತೇವೆ. ಅಪಾರ ಸಂಖ್ಯೆಯಲ್ಲಿ ಸೇರಿದ ಭಕ್ತರು ಭಕ್ತಿ ಭಾವ ಮೆರೆದ ಎಲ್ಲರಿಗೂ ಒಳ್ಳೆಯದಾಗಲಿ.
ಅಮರೇಗೌಡ ಬಯ್ಯಾಪುರ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ
ಅನೇಕ ಕಡೆ ಬಹಳಷ್ಟು ಜಾತ್ರೆಗಳು ನಡೆಯುತ್ತವೆ. ಅಲ್ಲಿ ವಿಐಪಿಗಳನ್ನು ನೋಡಲು ಜನ ಬರುತ್ತಾರೆ. ಆದರೆ ಇಲ್ಲಿ ಅತಿ ಗಣ್ಯ ವ್ಯಕ್ತಿಗಳು ಜನರನ್ನೇ ನೋಡಲು ಬರುತ್ತಾರಲ್ಲ ಅದೇ ವಿಶೇಷ.
ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಗವಿಮಠ
ಲಕ್ಷಾಂತರ ಜನ ಸಂಗಮ; ಗಾಢ ಮೌನ!
ರಥೋತ್ಸವ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರೂ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ‘ನಾನು ಒಂದೆರೆಡು ಮಾತುಗಳನ್ನಾಡಲೇ’ ಎಂದಾಗ ಜನ ಗಾಢ ಮೌನಕ್ಕೆ ಜಾರಿದರು. ‘ಬದುಕು ದೇವರು ನಮಗೆ ಕೊಟ್ಟ ಉಡುಗೊರೆಯಾಗಿದ್ದು ಈಗಿನ ಉಡುಗೊರೆಯನ್ನು ಚೆನ್ನಾಗಿ ಬಳಸಿಕೊಂಡರೆ ಮಾತ್ರ ಮತ್ತೊಂದು ಬದುಕಿನ ಉಡುಗೊರೆ ನೀಡುತ್ತಾನೆ. ಮನುಷ್ಯನಿಗೆ ಜೀವನ ಕೊಟ್ಟಿದ್ದಕ್ಕೆ ನಾವು ಬದುಕುವ ರೀತಿ ಕಂಡು ದೇವರೇ ಸಂತೋಷಪಡುವ ರೀತಿಯಲ್ಲಿ ಇರಬೇಕು’ ಎಂದರು. ’ಮನೆ ಕಟ್ಟುವಾಗ ಎಲ್ಲ ದಾಖಲೆಗಳನ್ನು ಇಟ್ಟುಕೊಂಡು ಬ್ಯಾಂಕ್‌ನವರು ಸಾಲ ಕೊಡುತ್ತಾರೆ. ಆದರೆ ನಿಮ್ಮಿಂದ ಯಾವ ಗ್ಯಾರಂಟಿಯನ್ನೂ ಪಡೆದುಕೊಳ್ಳದೇ ದೇವರು ಬದುಕು ಕೊಟ್ಟಿದ್ದಾರೆ. ಸೂರ್ಯ ಚಂದ್ರ ಎಂದೂ ವಿದ್ಯುತ್‌ ಬಿಲ್‌ ಕೇಳಿಲ್ಲ. ಸೈಕಲ್‌ ಗಾಲಿ ಪಂಚರ್‌ ಆದರೆ ಗಾಳಿ ತುಂಬಿಸುತ್ತೀರಿ. ದೇಹಕ್ಕೆ ನವರಂಧ್ರಗಳು ಇದ್ದರೂ ನೀವು ಪಂಚರ್‌ ಆಗುತ್ತೀರಿ. ನಿಸರ್ಗ ಸಂತೋಷವಾಗಿದ್ದರೂ ಮನುಷ್ಯ ಮಾತ್ರ ಅಳುವುದು ಬಿಟ್ಟಿಲ್ಲ. ಎಷ್ಟೇ ಸಂಕಷ್ಟ ಎದುರಾದರೂ ಕೊರಗಬಾರದು. ಭರವಸೆಯೇ ಬದುಕು ಆಗಬೇಕು’ ಎಂದು ಹೇಳಿದರು.
ಪಲ್ಲಕ್ಕಿ ಹೊತ್ತು ವಿಜಯೇಂದ್ರ ಭಕ್ತಿ ಅರ್ಪಣೆ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಲಕ್ಷಾಂತರ ಜನರ ನಡುವೆ ಮಹಾರಥೋತ್ಸವದ ವೇಳೆ ಪಲ್ಲಕ್ಕಿ ಹೊತ್ತು ಭಕ್ತಿ ಸಮರ್ಪಿಸಿದರು. ಈ ವೇಳೆ ಮಾತನಾಡಿ ‘ಗವಿಸಿದ್ದೇಶ್ವರ ಜಾತ್ರೆಗೆ ಬರಬೇಕು ಎನ್ನುವ ಅಪೇಕ್ಷೆಯಿತ್ತು. ಅದು ಈಗ ಈಡೇರಿದೆ. ಜಗತ್ತಿನ ಯಾವುದೇ ಪವಿತ್ರ ಸ್ಥಳದಲ್ಲಿ ಇಂತಹ ದೃಶ್ಯ ನೋಡಲು ಸಾಧ್ಯವಿಲ್ಲ. ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವುದು ಸೌಭಾಗ್ಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT