<p><strong>ಕೊಪ್ಪಳ</strong>: ‘ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಕುಕನೂರು ಪೊಲೀಸ್ ಠಾಣೆಗೆ ಕಕ್ಷಿದಾರರೊಂದಿಗೆ ತೆರಳಿದ್ದಾಗ ಸಬ್ ಇನ್ಸ್ಪೆಕ್ಟರ್ ಟಿ.ಗುರುರಾಜ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರು’ ಎಂದು ರಾಯಚೂರು ಮೂಲದ ವಕೀಲ ಸುನಿಲಕುಮಾರ ಪೊಲೀಸಪಾಟೀಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.</p>.<p>ಘಟನೆ ಖಂಡಿಸಿರುವ ಜಿಲ್ಲಾ ವಕೀಲರ ಸಂಘದ ಸದಸ್ಯರೂ ಎಸ್ಪಿಗೆ ಮಾಹಿತಿ ನೀಡಿದ್ದು, ‘ಟಿ.ಗುರುರಾಜ ಅವರು ಇತರೆ ವಕೀಲರೊಂದಿಗೂ ಇದೇ ರೀತಿ ದುರ್ವರ್ತನೆ ತೋರಿದ್ದಾರೆ’ ಎಂದು ವಿವರಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ, ಉಪಾಧ್ಯಕ್ಷ ಬಿ.ವಿ. ಸಜ್ಜನ, ವಕೀಲರಾದ ಪ್ರಕಾಶ ಹಾದಿಮನಿ, ಹನುಮಂತರಾವ್, ಸುನೀಲಕುಮಾರ, ಬಸವರಾಜ ಗಡಾದ ಇತರರು ಇದ್ದರು.</p>.<p>‘ಕುಕನೂರು ಪೊಲೀಸ್ ಠಾಣೆಗೆ ಬಂದಿದ್ದ ವಕೀಲ ಮತ್ತು ಅವರ ಸಂಬಂಧಿಕರು ಎದುರುದಾರ ಮಹಿಳೆಯೊಂದಿಗೆ ಠಾಣೆ ಆವರಣದಲ್ಲಿ ಅನುಚಿತವಾಗಿ ವರ್ತಿಸಿದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. </p>.<p>ಈ ಮಧ್ಯೆ ವಕೀಲರ ಮೇಲೆ ಕಲಂ 92 ಪೊಲೀಸ್ ಕಾಯ್ದೆ ಅನ್ವಯ ಗುನ್ನೆ ದಾಖಲಿಸಿಕೊಂಡಿರುವ ಕುಕನೂರು ಪೊಲೀಸರು ಸೆ.1 ರಂದು ಯಲಬುರ್ಗಾ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರಾಗುವಂತೆ ವಕೀಲ ಸುನಿಲಕುಮಾರ ಅವರಿಗೆ ಆ.31 ರಂದು ನೋಟಿಸ್ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ</strong>: ‘ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಕುಕನೂರು ಪೊಲೀಸ್ ಠಾಣೆಗೆ ಕಕ್ಷಿದಾರರೊಂದಿಗೆ ತೆರಳಿದ್ದಾಗ ಸಬ್ ಇನ್ಸ್ಪೆಕ್ಟರ್ ಟಿ.ಗುರುರಾಜ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರು’ ಎಂದು ರಾಯಚೂರು ಮೂಲದ ವಕೀಲ ಸುನಿಲಕುಮಾರ ಪೊಲೀಸಪಾಟೀಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.</p>.<p>ಘಟನೆ ಖಂಡಿಸಿರುವ ಜಿಲ್ಲಾ ವಕೀಲರ ಸಂಘದ ಸದಸ್ಯರೂ ಎಸ್ಪಿಗೆ ಮಾಹಿತಿ ನೀಡಿದ್ದು, ‘ಟಿ.ಗುರುರಾಜ ಅವರು ಇತರೆ ವಕೀಲರೊಂದಿಗೂ ಇದೇ ರೀತಿ ದುರ್ವರ್ತನೆ ತೋರಿದ್ದಾರೆ’ ಎಂದು ವಿವರಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ, ಉಪಾಧ್ಯಕ್ಷ ಬಿ.ವಿ. ಸಜ್ಜನ, ವಕೀಲರಾದ ಪ್ರಕಾಶ ಹಾದಿಮನಿ, ಹನುಮಂತರಾವ್, ಸುನೀಲಕುಮಾರ, ಬಸವರಾಜ ಗಡಾದ ಇತರರು ಇದ್ದರು.</p>.<p>‘ಕುಕನೂರು ಪೊಲೀಸ್ ಠಾಣೆಗೆ ಬಂದಿದ್ದ ವಕೀಲ ಮತ್ತು ಅವರ ಸಂಬಂಧಿಕರು ಎದುರುದಾರ ಮಹಿಳೆಯೊಂದಿಗೆ ಠಾಣೆ ಆವರಣದಲ್ಲಿ ಅನುಚಿತವಾಗಿ ವರ್ತಿಸಿದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. </p>.<p>ಈ ಮಧ್ಯೆ ವಕೀಲರ ಮೇಲೆ ಕಲಂ 92 ಪೊಲೀಸ್ ಕಾಯ್ದೆ ಅನ್ವಯ ಗುನ್ನೆ ದಾಖಲಿಸಿಕೊಂಡಿರುವ ಕುಕನೂರು ಪೊಲೀಸರು ಸೆ.1 ರಂದು ಯಲಬುರ್ಗಾ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರಾಗುವಂತೆ ವಕೀಲ ಸುನಿಲಕುಮಾರ ಅವರಿಗೆ ಆ.31 ರಂದು ನೋಟಿಸ್ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>