ಸಂಘಕ್ಕೆ ಈಗಿರುವ ತಾತ್ಕಾಲಿಕ ಕಟ್ಟಡದಲ್ಲಿ ಹುಡ್ಕೊ ಕಾಲೊನಿ ನಿವಾಸಿಗಳು ಸ್ವ ಸಹಕಾರ ಸಂಘದ ಫಲಕ ಹಾಕಿದ್ದಾರೆ. ಕೇಳಿದರೆ ಬಿಟ್ಟುಕೊಡಬೇಕಾಗುತ್ತದೆ. ಜಿಲ್ಲಾಡಳಿತ ಮೊದಲು ನಿವೇಶನ ಕೊಡಬೇಕು
ಶ್ರೀಧರ ಪೊಲೀಸ್ ಪಾಟೀಲ್ ನಿವೃತ್ತ ಯೋಧರ ಸಂಘದ ಉಪಾಧ್ಯಕ್ಷ
ಸಂಘಕ್ಕೆ ಸ್ವಂತ ಕಟ್ಟಡವಾಗಬೇಕು ಎಂದು ಬಹುವರ್ಷಗಳ ಬೇಡಿಕೆಗೆ ಸ್ಪಂದನೆ ಲಭಿಸಿಲ್ಲ. ದೇಶವೇ ಯೋಧರನ್ನು ಗೌರವದಿಂದ ಕಾಣುತ್ತಿದೆ. ನಮ್ಮವರ ಬೇಕು ಬೇಡ ಕೇಳಿಸಿಕೊಳ್ಳಲು ಒಂದು ಕಟ್ಟಡವೂ ಇಲ್ಲ
ಮಾರುತಿ ಗೊಂದಿ,ನಿವೃತ್ತ ಸೈನಿಕರ ಸಂಘದ ಜಿಲ್ಲಾಧ್ಯಕ್ಷ
ನಾನು ಕೊಪ್ಪಳಕ್ಕೆ ಬಂದ ಬಳಿಕ ಮಾಜಿ ಸೈನಿಕರು ಯಾವುದೇ ಮನವಿ ಸಲ್ಲಿಸಿಲ್ಲ. ಮನವಿ ಕೊಟ್ಟರೆ ಸಾಧ್ಯವಿರುವ ಅವಕಾಶದಲ್ಲಿ ಸೌಲಭ್ಯ ಕಲ್ಪಿಸಿಕೊಡುವೆ