<p><strong>ತಾವರಗೇರಾ:</strong> ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ಕಳೆದ ಒಂದು ತಿಂಗಳಿನಿಂದ ಗ್ಯಾಸ್ ಸರಬರಾಜು ಇಲ್ಲದ ಕಾರಣ ಕಟ್ಟಿಗೆ ಒಲೆಯಲ್ಲಿ ಬಿಸಿಯೂಟ ತಯಾರಿಸಲಾಗುತ್ತಿದೆ.</p>.<p>ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ ಕುಷ್ಟಗಿ ಭಾರತ್ ಗ್ಯಾಸ್ ಏಜನ್ಸಿಯಿಂದ ಸಮರ್ಪಕವಾಗಿ ಸಿಲಿಂಡರ್ ಸರಬರಾಜು ಆಗದ ಕಾರಣ ಸಮಸ್ಯೆಯಾಗಿದೆ.</p>.<p><a href="https://www.prajavani.net/tags/karnataka-floods-2019" target="_blank">ನೆರೆ ಹಾವಳಿ</a>ಯಿಂದ ಗ್ಯಾಸ್ ಏಜನ್ಸಿಗೆ ಮಂಗಳೂರಿನಿಂದ ಸಿಲಿಂಡರ್ ಸರಬರಾಜು ಆಗುವಲ್ಲಿ ವ್ಯತ್ಯಯವಾಗುತ್ತಿದೆ ಎನ್ನಲಾಗಿದೆ.</p>.<p>ಒಂದು ತಿಂಗಳಿನಿಂದ ಸಿಲಿಂಡರ್ ಇಲ್ಲದ ಕಾರಣ ಕಟ್ಟಿಗೆ ಒಲೆ ಬಳಸಿ ವಿದ್ಯಾರ್ಥಿಗಳಿಗೆ ಆಹಾರ ತಯಾರಿಸಲಾಗುತ್ತಿದೆ ಎಂದು ಬಸವಣ್ಣನ ಕ್ಯಾಂಪ್ ಶಾಲೆ ಅಡುಗೆ ತಯಾರಕರಾದ ಹನಮವ್ವ, ಲಕ್ಷ್ಮವ್ವ, ಶಾಂತವ್ವ ತಿಳಿಸಿದರು.</p>.<p>ಕೆಲವು ಶಾಲೆಗಳಲ್ಲಿ ಸಿಲಿಂಡರ್ ಇಲ್ಲದ ಕಾರಣ ಕಟ್ಟಿಗೆಯಿಂದ ಅಡುಗೆ ತಯಾರಿಸುವುದು ಗಮನಕ್ಕೆ ಇದೆ. ಸಿಲಿಂಡರ್ ಪೂರೈಕೆ ವ್ಯತ್ಯವಾಗಿದ್ದು, ಸಮಸ್ಯೆ ಪರಿಹಾರ ಮಾಡಲಾಗುವುದು ಎಂದು ತಾಲ್ಲೂಕು ಅಕ್ಷರ ದಾಸೋಹ ಅಧಿಕಾರಿ ಶರಣಪ್ಪ ಕೆ. ಹೇಳಿದರು.</p>.<p>ಹೋಬಳಿ ವ್ಯಾಪ್ತಿಯ ಗಡಿ ಗ್ರಾಮಗಳಿಗೆ ಕುಷ್ಟಗಿ ದೂರವಾಗುತ್ತಿದ್ದು, ಸಿಲಿಂಡರ್ಗೆ 1 ಕಿ.ಮೀ.ಗೆ ₹1.60 ಹೆಚ್ಚುವರಿ ನೀಡಬೇಕು. ತಾವರಗೇರಾ ಗ್ಯಾಸ್ ಏಜೆನ್ಸಿಗೆ ವರ್ಗಾವಣೆ ಮಾಡಿದರೆ ಸೂಕ್ತ ಎಂದು ಶಿಕ್ಷಕರೊಬ್ಬರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಾವರಗೇರಾ:</strong> ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ಕಳೆದ ಒಂದು ತಿಂಗಳಿನಿಂದ ಗ್ಯಾಸ್ ಸರಬರಾಜು ಇಲ್ಲದ ಕಾರಣ ಕಟ್ಟಿಗೆ ಒಲೆಯಲ್ಲಿ ಬಿಸಿಯೂಟ ತಯಾರಿಸಲಾಗುತ್ತಿದೆ.</p>.<p>ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ ಕುಷ್ಟಗಿ ಭಾರತ್ ಗ್ಯಾಸ್ ಏಜನ್ಸಿಯಿಂದ ಸಮರ್ಪಕವಾಗಿ ಸಿಲಿಂಡರ್ ಸರಬರಾಜು ಆಗದ ಕಾರಣ ಸಮಸ್ಯೆಯಾಗಿದೆ.</p>.<p><a href="https://www.prajavani.net/tags/karnataka-floods-2019" target="_blank">ನೆರೆ ಹಾವಳಿ</a>ಯಿಂದ ಗ್ಯಾಸ್ ಏಜನ್ಸಿಗೆ ಮಂಗಳೂರಿನಿಂದ ಸಿಲಿಂಡರ್ ಸರಬರಾಜು ಆಗುವಲ್ಲಿ ವ್ಯತ್ಯಯವಾಗುತ್ತಿದೆ ಎನ್ನಲಾಗಿದೆ.</p>.<p>ಒಂದು ತಿಂಗಳಿನಿಂದ ಸಿಲಿಂಡರ್ ಇಲ್ಲದ ಕಾರಣ ಕಟ್ಟಿಗೆ ಒಲೆ ಬಳಸಿ ವಿದ್ಯಾರ್ಥಿಗಳಿಗೆ ಆಹಾರ ತಯಾರಿಸಲಾಗುತ್ತಿದೆ ಎಂದು ಬಸವಣ್ಣನ ಕ್ಯಾಂಪ್ ಶಾಲೆ ಅಡುಗೆ ತಯಾರಕರಾದ ಹನಮವ್ವ, ಲಕ್ಷ್ಮವ್ವ, ಶಾಂತವ್ವ ತಿಳಿಸಿದರು.</p>.<p>ಕೆಲವು ಶಾಲೆಗಳಲ್ಲಿ ಸಿಲಿಂಡರ್ ಇಲ್ಲದ ಕಾರಣ ಕಟ್ಟಿಗೆಯಿಂದ ಅಡುಗೆ ತಯಾರಿಸುವುದು ಗಮನಕ್ಕೆ ಇದೆ. ಸಿಲಿಂಡರ್ ಪೂರೈಕೆ ವ್ಯತ್ಯವಾಗಿದ್ದು, ಸಮಸ್ಯೆ ಪರಿಹಾರ ಮಾಡಲಾಗುವುದು ಎಂದು ತಾಲ್ಲೂಕು ಅಕ್ಷರ ದಾಸೋಹ ಅಧಿಕಾರಿ ಶರಣಪ್ಪ ಕೆ. ಹೇಳಿದರು.</p>.<p>ಹೋಬಳಿ ವ್ಯಾಪ್ತಿಯ ಗಡಿ ಗ್ರಾಮಗಳಿಗೆ ಕುಷ್ಟಗಿ ದೂರವಾಗುತ್ತಿದ್ದು, ಸಿಲಿಂಡರ್ಗೆ 1 ಕಿ.ಮೀ.ಗೆ ₹1.60 ಹೆಚ್ಚುವರಿ ನೀಡಬೇಕು. ತಾವರಗೇರಾ ಗ್ಯಾಸ್ ಏಜೆನ್ಸಿಗೆ ವರ್ಗಾವಣೆ ಮಾಡಿದರೆ ಸೂಕ್ತ ಎಂದು ಶಿಕ್ಷಕರೊಬ್ಬರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>