ಗಂಗಾವತಿ: ನಗರದ ಹಿರೇಜಂತಕಲ್ ಸಮೀಪದ ಪ್ರಸನ್ನ ಪಂಪಾ ವಿರುಪಾಕ್ಷೇಶ್ವರ ದೇವಸ್ಥಾನದ ಹುಂಡಿ ಹಣ ಎಣಿಕೆ ಕಾರ್ಯ ಶನಿವಾರ ನಡೆಯಿತು.
ತಹಶೀಲ್ದಾರ್ ಯು.ನಾಗರಾಜ ಮಾತನಾಡಿ, ಎರಡು ವರ್ಷಗಳಿಂದ ಈ ದೇವಸ್ಥಾನದ ಹುಂಡಿ ಹಣ ಎಣಿಕೆ ಮಾಡಿರಲಿಲ್ಲ. ಇತ್ತೀಚಿಗೆ ಗಂಗಾವತಿ ತಾಲ್ಲೂಕಿನ ದೇವಸ್ಥಾನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಅದರಿಂದ ತಪ್ಪಿಸಲು ಕೋವಿಡ್ ಮಾರ್ಗಸೂಚಿ ನಿಯಮಗಳ ಪ್ರಕಾರ ಹುಂಡಿ ಹಣ ಎಣಿಕೆ ಮಾಡಲಾಯಿತು ಎಂದರು.
ಈ ವೇಳೆ ಪ್ರಸನ್ನ ಪಂಪಾ ವಿರುಪಾಕ್ಷೇಶ್ವರ ದೇವಸ್ಥಾನ ಹುಂಡಿಯಲ್ಲಿ ಒಟ್ಟು ₹ 1,29,530 ಸಂಗ್ರಹವಾಗಿದೆ. ಈ ಹಿಂದೆ ಫೆಬ್ರವರಿ 22, 2019 ರಂದು ಪ್ರಸನ್ನ ಪಂಪಾ ವಿರುಪಾಕ್ಷೇಶ್ವರ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಕೆ ಮಾಡಿದ್ದ ವೇಳೆಯಲ್ಲಿ ಒಟ್ಟು ₹ 58,380 ಸಂಗ್ರಹವಾಗಿತ್ತು ಎಂದರು.
ಗ್ರೇಡ್ 2 ತಹಶೀಲ್ದಾರ್ ವಿ.ಎಚ್.ಹೊರಪೇಟಿ, ದೇವಸ್ಥಾನದ ಕಾರ್ಯದರ್ಶಿ ಮಂಜುನಾಥ ಹಿರೇಮಠ, ಗಂಗಾವತಿ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ, ಅಭೀಷೆಕ, ಮಹಾಲಕ್ಷ್ಮೀ, ಕಾವ್ಯ ಇದ್ದರು.