’ಎರಡು ಮಠದವರು ಸೇರಿ ಒಟ್ಟಿಗೆ ಪೂಜೆ, ಆರಾಧನೆ ಮಾಡುವಂತೆ ಹೇಳಲಾಗುತ್ತಿದ್ದು ಇದಕ್ಕೆ ರಾಯರ ಮಠದವರು ಒಪ್ಪಿದರೆ, ಉತ್ತಾರಾದಿ ಮಠದವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಜಿಲ್ಲಾಡಳಿತದ ವತಿಯಿಂದ ಒಟ್ಟಿಗೆ ಪೂಜೆ ನಡೆಸುವ ಕುರಿತು ಅಭಿಪ್ರಾಯ ತಿಳಿಸುವಂತೆ ಎರಡೂ ಮಠದವರಿಗೆ ಜು. 5ರ ವರೆಗೆ ಕಾಲಾವಕಾಶ ನೀಡಲಾಗಿದೆ. ಎರಡು ಮಠಗಳ ಮುಖ್ಯಸ್ಥರ ತೀರ್ಮಾನ ನೋಡಿಕೊಂಡು ಜಿಲ್ಲಾಡಳಿತ ಮುಂದಿನ ನಿರ್ಧಾರ ಕೈಗೊಳ್ಳಲಿದೆ’ ಎಂದರು.