ಇಲ್ಲಿ ಶುಕ್ರವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು ‘ಮುಖ್ಯಮಂತ್ರಿಯಾಗಿದ್ದವರಿಗೆ ನಿಶ್ಚಿತ ಕ್ಷೇತ್ರವಿಲ್ಲ ಎನ್ನುವುದು ಪ್ರತಿಪಕ್ಷಗಳ ಅಪಪ್ರಚಾರದ ತಂತ್ರದ ಭಾಗ. ರಾಜ್ಯದ ಎಲ್ಲಾ ಕ್ಷೇತ್ರಗಳಿಂದಲೂ ಅವರಿಗೆ ಆಹ್ವಾನಿವಿದೆ. ಕೊಪ್ಪಳದಿಂದಲೂ ಸ್ಪರ್ಧೆ ಮಾಡುವಂತೆ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ. ವರುಣಾ ಕ್ಷೇತ್ರಕ್ಕೆ ಯಾವಾಗಲೂ ಮುಕ್ತ ಆಹ್ವಾನ ಇದ್ದೇ ಇರುತ್ತದೆ’ ಎಂದರು.