ಅಳವಂಡಿ: ‘ಸಣ್ಣ ನೀರಾವರಿ ಇಲಾಖೆಯಿಂದ ಅಳವಂಡಿ-ತಳಕಲ್ ಮಾರ್ಗ ಮಧ್ಯೆದ ಹಳ್ಳದಲ್ಲಿ ಬಾಂದಾರ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದಕ್ಕೆ ಮಣ್ಣು ಮಿಶ್ರಿತ ಮರಳು ಬಳಸಲಾಗುತ್ತಿದೆ. ಗುಣಮಟ್ಟದಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು’ ಎಂದು ಗ್ರಾಮಸ್ಥರು ಸಂಸದ ಸಂಗಣ್ಣ ಕರಡಿ ಅವರನ್ನು ಒತ್ತಾಯಿಸಿದರು.
ಸೇತುವೆ ಕಾಮಗಾರಿ ಕಾಟಾಚಾರಕ್ಕೆ ಎಂಬಂತೆ ನಡೆಯುತ್ತಿದೆ. ಉತ್ಕೃಷ್ಟ ಮರಳು, ಸಿಮೆಂಟ್ ಬಳಸಿ ಸೇತುವೆ ನಿರ್ಮಿಸಿದರೆ ಬಹು ದಿನಗಳದವರೆಗೆ ತಾಳಿಕೆ ಬರುತ್ತದೆ. ಸಂಬಂಧಿಸಿದ ಗುತ್ತಿಗೆದಾರರು, ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.
ಗ್ರಾಮದ ಮುಖಂಡರಾದವಸಂತ ನಾಗರಳ್ಳಿ, ಮಲ್ಲಪ್ಪ ಬೆಣಕಲ್, ಚಂದ್ರಪ್ಪ ಜಂತ್ಲಿ, ಜಗದೀಶ, ಮಂಜುನಾಥ ಜಂತ್ಲಿ ಹಾಗೂ ಮಹಮದ್ ಸಾಬ್ ಕಿಲ್ಲೇದ ಇದ್ದರು. ಮನವಿ ಸ್ವೀಕರಿಸಿದ ಸಂಸದರು ಸ್ಥಳಕ್ಕೆ ಭೇಟಿ ನೀಡಿಸಂಬಂಧಿಸಿದ ಅಧಿಕಾರಿಗಳ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.