ಪ್ರಾಕೃತಿಕವಾಗಿ ಸೊಬಗು ಹೊಂದಿರುವ ಅಂಜನಾದ್ರಿ ಭಾಗದ ಸುತ್ತಮುತ್ತಲಿನ ನೋಟ
ಕೊಪ್ಪಳ ತಾಲ್ಲೂಕಿನ ಬೈರಾಪುರದಲ್ಲಿರುವ ರಾಮದೇವರ ದೇವಸ್ಥಾನ
ರಾಮನ ಮೂರ್ತಿ
ರಾಮ ಹನುಮಂತ ಹಾಗೂ ಸುಗ್ರೀವ ಅವರ ಮಿಲನವಾಗಿದ್ದು ಕಿಷ್ಕಿಂಧೆ ಕ್ಷೇತ್ರದಲ್ಲಿ ಎನ್ನುವ ಕಾರಣಕ್ಕೆ ಈ ಕ್ಷೇತ್ರಕ್ಕೆ ಬಂದಿದ್ದೇವೆ. ಈ ಎಲ್ಲ ಕ್ಷೇತ್ರಗಳನ್ನು ಇನ್ನಷ್ಟು ಅಭಿವೃದ್ಧಿ ಮಾಡಬೇಕಾಗಿದೆ.
ವಿಷ್ಣುವ್ಯಾಸ್ ಭಕ್ತ
ವಾಲ್ಮೀಕಿ ರಾಮಾಯಣದ ಕಿಷ್ಕಿಂಧೆ ಕಾಂಡ ಅಧ್ಯಾಯದಲ್ಲಿ ರಾಮ ಕಿಷ್ಕಿಂಧೆ ಪ್ರದೇಶಕ್ಕೆ ಭೇಟಿ ನೀಡಿದ್ದ ಎನ್ನುವುದಕ್ಕೆ ಪೂರಕ ಹೋಲಿಕೆಗಳು ಇವೆ. ರಾಮಾಯಣದಲ್ಲಿ ಬರುವ ಕಿಷ್ಕಿಂಧೆ ಪ್ರದೇಶ ಗಂಗಾವತಿ ತಾಲ್ಲೂಕಿನದ್ದೇ ಎನ್ನಲು ಹುಲಿಗಿ ಬೆಳಗಾವಿ ಜಿಲ್ಲೆಯ ಶಿರಸಂಗಿಯಲ್ಲಿ ದೊರೆತ ಶಾಸನಗಳು ಸಾಕ್ಷಿಯಂತಿವೆ
ಸಿದ್ದಲಿಂಗಪ್ಪ ಕೊಟ್ನೆಕಲ್ ಕನ್ನಡ ಉಪನ್ಯಾಸಕ
ರಾಮನ ಹೆಜ್ಜೆಗಳನ್ನು ಗಂಗಾವತಿ ತಾಲ್ಲೂಕಿನ ಕಿಷ್ಕಿಂಧೆ ಪ್ರದೇಶದಲ್ಲಿ ನೋಡಲು ಸಾಕಷ್ಟು ಆಧಾರ ಗ್ರಂಥಗಳು ಸಿಗುತ್ತವೆ. ವಾಲ್ಮೀಕಿ ರಾಮಾಯಣ ಹನುಮಂತ ರಾಮ ಹಾಗೂ ಸೀತೆ ಕುರಿತ ಅಧಿಕೃತ ಗ್ರಂಥ. ರಾಮ ಪಂಪಾಸರೋವರಕ್ಕೆ ಬಂದಾಗ ವರ್ಣಿಸುವ ಸುಂದರ ಪರಿಸರ ಈಗಲೂ ಇದೆ. ರಾಮನ ಬಳಿ ಹನುಮಂತನ ಮಾತನಾಡುವ ಚಾಕಚಕ್ಯತೆ ವರ್ಣನೆ ಮಲಯ ಪರ್ವತದ ಭೌಗೋಳಿಕ ದಾಖಲೆಗಳು ಈಗಲೂ ಇವೆ