<p><strong>ಕೊಪ್ಪಳ</strong>: ಜಿಲ್ಲೆಯ ಅಲ್ಲಲ್ಲಿ ಒಣಬೇಸಾಯ ಕೃಷಿಯಲ್ಲಿ ಒಣ ಮೆಣಸಿನಕಾಯಿ ಬೆಳೆದಿದ್ದ ರೈತರಿಗೆ ಈ ಬಾರಿ ಇಳುವರಿ ಕಡಿಮೆಯಾಗಿದ್ದು, ಬೆಲೆಯೂ ಕಳೆದ ವರ್ಷಕ್ಕಿಂತ ಸಾಕಷ್ಟು ಇಳಿಕೆಯಾಗಿದೆ. ಇದು ರೈತರನ್ನು ಸಂಕಷ್ಟಕ್ಕೆ ಒಳಗಾಗುವಂತೆ ಮಾಡಿದೆ.</p>.<p>ಕುಷ್ಟಗಿ, ಯಲಬುರ್ಗಾ ಹಾಗೂ ಕೊಪ್ಪಳ ತಾಲ್ಲೂಕುಗಳ ವ್ಯಾಪ್ತಿಯ ಕೆಲ ಭಾಗದಲ್ಲಿ ಒಟ್ಟು 500 ಹೆಕ್ಟೇರ್ ಪ್ರದೇಶದಲ್ಲಿ ಒಣ ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಒಂದು ಸಾವಿರ ರೈತರು ಈ ಬೆಳೆ ಬೆಳೆಯುತ್ತಿದ್ದಾರೆ. ವಾರ್ಷಿಕ 4,000 ಟನ್ ಉತ್ಪಾದನೆ ಆಗುತ್ತಿದೆ. ಈ ವರ್ಷ ಅವಧಿಪೂರ್ವದಲ್ಲಿಯೇ ರೋಗಬಾಧೆ ಕಾಣಿಸಿಕೊಂಡಿದೆ. ಹಿಂದಿನ ಮೂರು ವರ್ಷಗಳಿಂದ ಬೆಲೆ ಕುಸಿಯುತ್ತಲೇ ಬಂದಿರುವ ಕಾರಣ ಬೇರೆ ಬೆಳೆಗಳ ನಡುವೆ ಅಲ್ಲಲ್ಲಿ ಮಾತ್ರ ಮೆಣಸಿನಕಾಯಿ ಬೆಳೆಯುತ್ತಿದ್ದಾರೆ.</p>.<p>ಮಿಶ್ರ ಬೆಳೆಯ ನಡುವೆಯೂ ಮೊದಲು ಪ್ರತಿ ಎಕರೆಗೆ ಕನಿಷ್ಠ ಮೂರು ಕ್ವಿಂಟಲ್ನಷ್ಟು ಫಸಲು ಪಡೆಯುತ್ತಿದ್ದ ರೈತರಿಗೆ ಈ ವರ್ಷ ಒಂದೂವರೆಯಿಂದ ಎರಡು ಕ್ವಿಂಟಲ್ ಮಾತ್ರ ಫಸಲು ಬಂದಿದೆ. ಎಲೆ ಮುಟುರು ರೋಗ ವ್ಯಾಪಕವಾಗಿ ಬಾಧಿಸುತ್ತಿದೆ. ಈ ರೋಗದ ಲಕ್ಷಣಗಳು ಆರಂಭದಲ್ಲಿ ಗೊತ್ತಾಗುವುದಿಲ್ಲ. ಮೂರ್ನಾಲ್ಕು ವಾರಗಳ ಬಳಿಕ ರೈತರಿಗೆ ಗೊತ್ತಾಗುತ್ತದೆ. ಅಷ್ಟರೊಳಗೆ ಬೆಳೆ ಹಾಳಾಗಿರುತ್ತದೆ. ಮುಟುರು ರೋಗದಿಂದ ಎಲೆ ಹಳದಿ ಹಾಗೂ ಕಪ್ಪಾಗುವುದು ಆಗುತ್ತಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ.</p>.<p>ಕುಷ್ಟಗಿ ತಾಲ್ಲೂಕಿನ ಮೇಗೂರು ಗ್ರಾಮದ ಈಶ್ವರಗೌಡ ಹುಡೇದ ಎಂಬ ರೈತ ತಮ್ಮ ಎರಡು ಎಕರೆ ಭೂಮಿಯಲ್ಲಿ ಉಳ್ಳಾಗಡ್ಡಿ ಜೊತೆ ಒಣಮೆಣಸಿನಕಾಯಿ ಮಿಶ್ರ ಬೆಳೆಯಾಗಿ ಬೆಳೆದಿದ್ದರು. ಕಳೆದ ವರ್ಷ ಕೂಡ ಬೆಳೆದು ಪ್ರತಿ ಎಕರೆಗೆ ನಾಲ್ಕು ಕ್ವಿಂಟಲ್ನಷ್ಟು ಇಳುವರಿ ಪಡೆದಿದ್ದರು. ಈ ವರ್ಷ ಫಸಲು ಶೇ 50ರಷ್ಟು ಕುಸಿತವಾಗಿದೆ. ಜಿಲ್ಲೆಯ ಮೆಣಸಿನಕಾಯಿ ಬೆಳೆಯುವ ರೈತರಿಗೆ ಹುಬ್ಬಳ್ಳಿ ಹಾಗೂ ಬ್ಯಾಡಗಿಯೇ ಪ್ರಮುಖ ಮಾರುಕಟ್ಟೆ. ಈ ಬೆಳೆ ಬೆಳೆದು ಹಿಂದೆ ಸಾಕಷ್ಟು ಲಾಭ ಪಡೆದಿದ್ದ ರೈತರು ಈ ವರ್ಷ ಕೈ ಸುಟ್ಟುಕೊಳ್ಳುವಂತಾಗಿದೆ. ಜಿಲ್ಲೆಯ ಬಹುತೇಕ ರೈತರದ್ದು ಇದೇ ಪರಿಸ್ಥಿತಿ.</p>.<p>‘ಮುಂಗಾರು ಸಮಯದಲ್ಲಿ ಮಳೆ ಜಾಸ್ತಿಯಾಗಿದ್ದರಿಂದ ರೋಗದ ಸಮಸ್ಯೆ ಕಾಡಿ ಇಳುವರಿ ಕಡಿಮೆಯಾಯಿತು. ಬ್ಯಾಡಗಿ ಹಾಗೂ ಕಡ್ಡಿ ತಳಿಯನ್ನು ಈ ಭಾಗದ ರೈತರು ಹೆಚ್ಚಾಗಿ ಬೆಳೆಯುತ್ತೇವೆ. ಎರಡ್ಮೂರು ವರ್ಷಗಳ ಹಿಂದೆ ಪ್ರತಿ ಕ್ವಿಂಟಲ್ ₹40 ಸಾವಿರಕ್ಕೆ ಮಾರಾಟ ಮಾಡಿದ ಮೆಣಸಿನಕಾಯಿ ಈಗ ಕೇವಲ ₹18 ಸಾವಿರ ಬೆಲೆಯಿದೆ. ಮೊದಲಿನ ಗುಣಮಟ್ಟವಿದ್ದರೂ ಖರೀದಿದಾರರು ಮುಂದೆ ಬರುತ್ತಿಲ್ಲ’ ಎಂದು ಈಶ್ವರಗೌಡ ಹುಡೇದ ಬೇಸರ ವ್ಯಕ್ತಪಡಿಸಿದರು.</p>.<div><blockquote>ಒಣ ಮೆಣಸಿನಕಾಯಿ ಫಸಲು ಬಂದ ಪ್ರತಿಬಾರಿಯೂ ಪ್ರತಿ ಕ್ವಿಂಟಲ್ಗೆ ₹50 ಸಾವಿರದ ತನಕ ಮಾರಾಟ ಮಾಡಿದ್ದೇನೆ. ಈಗ ರೋಗದ ಸಮಸ್ಯೆಯಿಂದೆ ₹22 ಸಾವಿರಕ್ಕೆ ಬೆಲೆ ಇಳಿದಿದೆ.</blockquote><span class="attribution"> ಶರಣಗೌಡ ಪೊಲೀಸ್ ಪಾಟೀಲ ಮೇಗೂರು ರೈತ ಕುಷ್ಟಗಿ ತಾಲ್ಲೂಕು</span></div>.<div><blockquote>ಒಣ ಮೆಣಸಿನಕಾಯಿ ಬೆಲೆ ಹಾಗೂ ಇಳುವರಿ ವ್ಯಾಪಕವಾಗಿ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಬೆಳೆಯುವವರ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿದೆ.</blockquote><span class="attribution">ಕೃಷ್ಣ ಸಿ. ಉಕ್ಕುಂದ ತೋಟಗಾರಿಕಾ ಇಲಾಖೆ ಉಪನಿರ್ದೇಶಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ</strong>: ಜಿಲ್ಲೆಯ ಅಲ್ಲಲ್ಲಿ ಒಣಬೇಸಾಯ ಕೃಷಿಯಲ್ಲಿ ಒಣ ಮೆಣಸಿನಕಾಯಿ ಬೆಳೆದಿದ್ದ ರೈತರಿಗೆ ಈ ಬಾರಿ ಇಳುವರಿ ಕಡಿಮೆಯಾಗಿದ್ದು, ಬೆಲೆಯೂ ಕಳೆದ ವರ್ಷಕ್ಕಿಂತ ಸಾಕಷ್ಟು ಇಳಿಕೆಯಾಗಿದೆ. ಇದು ರೈತರನ್ನು ಸಂಕಷ್ಟಕ್ಕೆ ಒಳಗಾಗುವಂತೆ ಮಾಡಿದೆ.</p>.<p>ಕುಷ್ಟಗಿ, ಯಲಬುರ್ಗಾ ಹಾಗೂ ಕೊಪ್ಪಳ ತಾಲ್ಲೂಕುಗಳ ವ್ಯಾಪ್ತಿಯ ಕೆಲ ಭಾಗದಲ್ಲಿ ಒಟ್ಟು 500 ಹೆಕ್ಟೇರ್ ಪ್ರದೇಶದಲ್ಲಿ ಒಣ ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಒಂದು ಸಾವಿರ ರೈತರು ಈ ಬೆಳೆ ಬೆಳೆಯುತ್ತಿದ್ದಾರೆ. ವಾರ್ಷಿಕ 4,000 ಟನ್ ಉತ್ಪಾದನೆ ಆಗುತ್ತಿದೆ. ಈ ವರ್ಷ ಅವಧಿಪೂರ್ವದಲ್ಲಿಯೇ ರೋಗಬಾಧೆ ಕಾಣಿಸಿಕೊಂಡಿದೆ. ಹಿಂದಿನ ಮೂರು ವರ್ಷಗಳಿಂದ ಬೆಲೆ ಕುಸಿಯುತ್ತಲೇ ಬಂದಿರುವ ಕಾರಣ ಬೇರೆ ಬೆಳೆಗಳ ನಡುವೆ ಅಲ್ಲಲ್ಲಿ ಮಾತ್ರ ಮೆಣಸಿನಕಾಯಿ ಬೆಳೆಯುತ್ತಿದ್ದಾರೆ.</p>.<p>ಮಿಶ್ರ ಬೆಳೆಯ ನಡುವೆಯೂ ಮೊದಲು ಪ್ರತಿ ಎಕರೆಗೆ ಕನಿಷ್ಠ ಮೂರು ಕ್ವಿಂಟಲ್ನಷ್ಟು ಫಸಲು ಪಡೆಯುತ್ತಿದ್ದ ರೈತರಿಗೆ ಈ ವರ್ಷ ಒಂದೂವರೆಯಿಂದ ಎರಡು ಕ್ವಿಂಟಲ್ ಮಾತ್ರ ಫಸಲು ಬಂದಿದೆ. ಎಲೆ ಮುಟುರು ರೋಗ ವ್ಯಾಪಕವಾಗಿ ಬಾಧಿಸುತ್ತಿದೆ. ಈ ರೋಗದ ಲಕ್ಷಣಗಳು ಆರಂಭದಲ್ಲಿ ಗೊತ್ತಾಗುವುದಿಲ್ಲ. ಮೂರ್ನಾಲ್ಕು ವಾರಗಳ ಬಳಿಕ ರೈತರಿಗೆ ಗೊತ್ತಾಗುತ್ತದೆ. ಅಷ್ಟರೊಳಗೆ ಬೆಳೆ ಹಾಳಾಗಿರುತ್ತದೆ. ಮುಟುರು ರೋಗದಿಂದ ಎಲೆ ಹಳದಿ ಹಾಗೂ ಕಪ್ಪಾಗುವುದು ಆಗುತ್ತಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ.</p>.<p>ಕುಷ್ಟಗಿ ತಾಲ್ಲೂಕಿನ ಮೇಗೂರು ಗ್ರಾಮದ ಈಶ್ವರಗೌಡ ಹುಡೇದ ಎಂಬ ರೈತ ತಮ್ಮ ಎರಡು ಎಕರೆ ಭೂಮಿಯಲ್ಲಿ ಉಳ್ಳಾಗಡ್ಡಿ ಜೊತೆ ಒಣಮೆಣಸಿನಕಾಯಿ ಮಿಶ್ರ ಬೆಳೆಯಾಗಿ ಬೆಳೆದಿದ್ದರು. ಕಳೆದ ವರ್ಷ ಕೂಡ ಬೆಳೆದು ಪ್ರತಿ ಎಕರೆಗೆ ನಾಲ್ಕು ಕ್ವಿಂಟಲ್ನಷ್ಟು ಇಳುವರಿ ಪಡೆದಿದ್ದರು. ಈ ವರ್ಷ ಫಸಲು ಶೇ 50ರಷ್ಟು ಕುಸಿತವಾಗಿದೆ. ಜಿಲ್ಲೆಯ ಮೆಣಸಿನಕಾಯಿ ಬೆಳೆಯುವ ರೈತರಿಗೆ ಹುಬ್ಬಳ್ಳಿ ಹಾಗೂ ಬ್ಯಾಡಗಿಯೇ ಪ್ರಮುಖ ಮಾರುಕಟ್ಟೆ. ಈ ಬೆಳೆ ಬೆಳೆದು ಹಿಂದೆ ಸಾಕಷ್ಟು ಲಾಭ ಪಡೆದಿದ್ದ ರೈತರು ಈ ವರ್ಷ ಕೈ ಸುಟ್ಟುಕೊಳ್ಳುವಂತಾಗಿದೆ. ಜಿಲ್ಲೆಯ ಬಹುತೇಕ ರೈತರದ್ದು ಇದೇ ಪರಿಸ್ಥಿತಿ.</p>.<p>‘ಮುಂಗಾರು ಸಮಯದಲ್ಲಿ ಮಳೆ ಜಾಸ್ತಿಯಾಗಿದ್ದರಿಂದ ರೋಗದ ಸಮಸ್ಯೆ ಕಾಡಿ ಇಳುವರಿ ಕಡಿಮೆಯಾಯಿತು. ಬ್ಯಾಡಗಿ ಹಾಗೂ ಕಡ್ಡಿ ತಳಿಯನ್ನು ಈ ಭಾಗದ ರೈತರು ಹೆಚ್ಚಾಗಿ ಬೆಳೆಯುತ್ತೇವೆ. ಎರಡ್ಮೂರು ವರ್ಷಗಳ ಹಿಂದೆ ಪ್ರತಿ ಕ್ವಿಂಟಲ್ ₹40 ಸಾವಿರಕ್ಕೆ ಮಾರಾಟ ಮಾಡಿದ ಮೆಣಸಿನಕಾಯಿ ಈಗ ಕೇವಲ ₹18 ಸಾವಿರ ಬೆಲೆಯಿದೆ. ಮೊದಲಿನ ಗುಣಮಟ್ಟವಿದ್ದರೂ ಖರೀದಿದಾರರು ಮುಂದೆ ಬರುತ್ತಿಲ್ಲ’ ಎಂದು ಈಶ್ವರಗೌಡ ಹುಡೇದ ಬೇಸರ ವ್ಯಕ್ತಪಡಿಸಿದರು.</p>.<div><blockquote>ಒಣ ಮೆಣಸಿನಕಾಯಿ ಫಸಲು ಬಂದ ಪ್ರತಿಬಾರಿಯೂ ಪ್ರತಿ ಕ್ವಿಂಟಲ್ಗೆ ₹50 ಸಾವಿರದ ತನಕ ಮಾರಾಟ ಮಾಡಿದ್ದೇನೆ. ಈಗ ರೋಗದ ಸಮಸ್ಯೆಯಿಂದೆ ₹22 ಸಾವಿರಕ್ಕೆ ಬೆಲೆ ಇಳಿದಿದೆ.</blockquote><span class="attribution"> ಶರಣಗೌಡ ಪೊಲೀಸ್ ಪಾಟೀಲ ಮೇಗೂರು ರೈತ ಕುಷ್ಟಗಿ ತಾಲ್ಲೂಕು</span></div>.<div><blockquote>ಒಣ ಮೆಣಸಿನಕಾಯಿ ಬೆಲೆ ಹಾಗೂ ಇಳುವರಿ ವ್ಯಾಪಕವಾಗಿ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಬೆಳೆಯುವವರ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿದೆ.</blockquote><span class="attribution">ಕೃಷ್ಣ ಸಿ. ಉಕ್ಕುಂದ ತೋಟಗಾರಿಕಾ ಇಲಾಖೆ ಉಪನಿರ್ದೇಶಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>