<p><strong>ಗಂಗಾವತಿ:</strong> ಗಂಗಾವತಿ ನಗರದಿಂದ ಹುಲಿಗಿ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ನಿರ್ಮಿಸಿದ ಅವೈಜ್ಞಾನಿಕ ರಸ್ತೆ ಉಬ್ಬುಗಳು ವಾಹನ ಸಂಚಾರಕ್ಕೆ ಕಂಟಕವಾಗಿ ಪರಿಣಮಿಸಿವೆ.</p>.<p>ಗಂಗಾವತಿ-ಹುಲಗಿ ಮಾರ್ಗದಲ್ಲಿ ಬರುವ ಪ್ರತಿ ಗ್ರಾಮದಲ್ಲಿ ಅವೈಜ್ಞಾನಿಕವಾಗಿ 5 ರಿಂದ 6 ರಸ್ತೆ ಉಬ್ಬುಗಳನ್ನು ಹಾಕಿದ್ದು, ಇದರಿಂದ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಅಲ್ಲದೆ, ಈ ಮಾರ್ಗದ ಪ್ರಯಾಣ ತುಂಬಾ ಪ್ರಯಾಸಕರವಾಗಿದೆ.</p>.<p>ಈ ಮಾರ್ಗದಲ್ಲಿ ಈಗಾಗಲೇ ಸಾಕಷ್ಟು ಅಪಘಾತಗಳು ಸಂಭವಿಸಿವೆ. ಅಪಘಾತ ನಿಯಂತ್ರಿಸಲು ಹಾಕಿರುವ ರಸ್ತೆ ಉಬ್ಬುಗಳಿಂದಲೇ ಹೆಚ್ಚು ಅಪಘಾತಗಳಾಗುತ್ತಿವೆ. ಕೆಲವೊಮ್ಮೆ ರಸ್ತೆ ಉಬ್ಬು ಕಾಣದೆ ಹತ್ತಿರ ಹೋಗಿ, ಬ್ರೇಕ್ ಹಾಕಿದಾಗ ಹಿಂದಿನ ವಾಹನಗಳು ಡಿಕ್ಕಿ ಹೊಡೆದ ಘಟನೆಗಳು ನಡೆದಿವೆ.</p>.<p>ರಸ್ತೆ ಉಬ್ಬುಗಳನ್ನು ಎಷ್ಟು ಎತ್ತರಕ್ಕೆ ಹಾಕಬೇಕು, ಎಲ್ಲಿ ಹಾಕಬೇಕು, ಹಾಕಿದ ನಂತರ ಯಾವ ಸೂಚನೆಗಳು ಪಾಲಿಸಬೇಕು ಎನ್ನುವ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಅವೈಜ್ಞಾನಿಕವಾಗಿ ರಸ್ತೆ ಉಬ್ಬುಗಳನ್ನು ಹಾಕಿರುವುದರಿಂದ ವಾಹನ ಸವಾರರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.</p>.<p><strong>100 ರಸ್ತೆ ಉಬ್ಬುಗಳು:</strong>ಗಂಗಾವತಿ ನಗರದಿಂದ ಹುಲಿಗೆ ಗ್ರಾಮಕ್ಕೆ ತೆರಳುವ ಶಿವಪುರ ರಸ್ತೆ ಹಾಗೂ ಅಗಳಕೇರಾ ರಸ್ತೆ ಮಾರ್ಗದಲ್ಲಿ 100 ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದೆ. ಸಂಗಾಪುರ ಗ್ರಾಮವೊಂದರಲ್ಲಿ 10, ಸಾಣಾಪುರ ಗ್ರಾಮದಲ್ಲಿ 7 ರಸ್ತೆ ಉಬ್ಬುಗಳಿವೆ. ಇನ್ನೂ ಪ್ರತಿ ಗ್ರಾಮದಲ್ಲಿ 5-6 ಉಬ್ಬುಗಳಿವೆ.</p>.<p><strong>ಸಾರಿಗೆ ಬಸ್ಗಳ ಪ್ಲೇಟ್ ಕಟ್:</strong>ಹುಲಿಗಿ-ಗಂಗಾವತಿ ಮಾರ್ಗದಲ್ಲಿ ಸಾಕಷ್ಟು ಸಾರಿಗೆ ಬಸ್ಗಳು ಸಂಚರಿಸುತ್ತವೆ. ಕೆಲ ಬಾರಿ ರಸ್ತೆ ಉಬ್ಬುಗಳಿಗೆ ಬಸ್ನ ನಂಬರ್ ಪ್ಲೇಟ್ ತಗುಲಿ ಮುರಿದ ಘಟನೆಗಳು ನಡೆದಿವೆ.</p>.<p><strong>ಆಸ್ಪತ್ರೆ ತಲುಪಲು ಪ್ರಯಾಸ</strong>: ಹುಲಿಗಿ, ಹರ್ಲಾಪುರ, ಬಸಾಪುರ, ಸಾಣಾಪುರ, ಚಿಕ್ಕರಾಂಪುರ ಗ್ರಾಮದ ಜನರು ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿಗೆ ತೆರಳಬೇಕಾಗುತ್ತದೆ. ತುರ್ತಾಗಿ ಜೀವ ಉಳಿಸಿಕೊಳ್ಳಲು ಗಂಗಾವತಿಗೆ ಹೋಗಬೇಕಾದ ಪರಿಸ್ಥಿತಿ ಎದುರಾದರೆ, ಆ ವ್ಯಕ್ತಿ ರಸ್ತೆ ಉಬ್ಬುಗಳನ್ನು ದಾಟಿ ಸಕಾಲದಲ್ಲಿ ಆಸ್ಪತ್ರೆಗೆ ತೆರಳಲು ಈ ರಸ್ತೆ ಉಬ್ಬುಗಳು ಅಡ್ಡಿಯಾಗಿ ಪರಿಣಮಿಸಿವೆ.</p>.<p><strong>ಅವಾಂತರಕ್ಕೆ ಕಾದ ರಸ್ತೆ ಉಬ್ಬುಗಳು:</strong> ಗಂಗಾವತಿ-ಹುಲಿಗಿ ಮಾರ್ಗದಲ್ಲಿ ಸಾಕಷ್ಟು ತಿರುವುಗಳಿದ್ದು, ಈ ಮಾರ್ಗದ ಮೂಲಕವೇ ಕೊಪ್ಪಳ, ಹೊಸಪೇಟೆ, ಹಂಪಿ, ಬಳ್ಳಾರಿಗೆ ಹೋಗಬಹುದು. ಈ ಮಾರ್ಗದಲ್ಲಿ ಬಸ್, ಲಾರಿ, ಟ್ರ್ಯಾಕ್ಟರ್, ಬೈಕ್, ಕಾರು, ಲಾರಿಗಳ ಸಂಚಾರ ಹೆಚ್ಚಿದ್ದು ರಸ್ತೆ ಉಬ್ಬುಗಳ ಬಳಿ ವೇಗ ನಿಯಂತ್ರಿಸಲಾಗದೆ ಒಂದಲ್ಲ ಒಂದು ರೀತಿಯ ಅಪಘಾತಗಳು ಸಂಭವಿಸುತ್ತಲೆ ಇರುತ್ತವೆ.</p>.<p>ಶಾಲೆ, ದೇವಸ್ಥಾನ, ಬ್ಯಾಂಕ್, ಗ್ರಾಮ ಪಂಚಾಯಿತಿಗಳಿಂದ ನಿರ್ದಿಷ್ಟ ಮೀಟರ್ ವ್ಯಾಪ್ತಿಯಲ್ಲಿ ರಸ್ತೆ ಉಬ್ಬುಗಳು ನಿರ್ಮಿಸಲು ಅವಕಾಶ ಇರುತ್ತದೆ. ಇಂತಹ ಯಾವುದೇ ನಿಯಮಗಳು ಈ ಮಾರ್ಗಕ್ಕೆ ಅನ್ವಯವಾಗಿಲ್ಲ ಎಂದು ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>*<br />ಅವೈಜ್ಞಾನಿಕ ರಸ್ತೆ ಉಬ್ಬುಗಳಿಂದ ಆದ ಅಪಘಾತಗಳ ಕುರಿತು ಸಾಕಷ್ಟು ದೂರುಗಳು ಬಂದಿವೆ. ಉಬ್ಬುಗಳ ತೆರವಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಶೀಘ್ರ ತೆರವುಗೊಳಿಸಲಾಗುವುದು<br /><em><strong>-ರಾಜಪ್ಪ, ಸಹಾಯಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ ಗಂಗಾವತಿ</strong></em></p>.<p><em><strong>*</strong></em><br />ಹುಲಿಗಿ ಗ್ರಾಮದಿಂದ ಗಂಗಾವತಿ 34 ಕಿ.ಮೀ ಇದ್ದು, ಈ ರಸ್ತೆ ಮಾರ್ಗದಲ್ಲಿನ ಉಬ್ಬುಗಳನ್ನು ದಾಟಿ ಗಂಗಾವತಿ ಹೋಗಬೇಕಾದರೆ 2 ಗಂಟೆ ಸಮಯ ಹಿಡಯುತ್ತದೆ.<br /><em><strong>-ಸೈಫರ್ ರೆಹಮಾನ್, ಬೈಕ್ ಸವಾರ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ:</strong> ಗಂಗಾವತಿ ನಗರದಿಂದ ಹುಲಿಗಿ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ನಿರ್ಮಿಸಿದ ಅವೈಜ್ಞಾನಿಕ ರಸ್ತೆ ಉಬ್ಬುಗಳು ವಾಹನ ಸಂಚಾರಕ್ಕೆ ಕಂಟಕವಾಗಿ ಪರಿಣಮಿಸಿವೆ.</p>.<p>ಗಂಗಾವತಿ-ಹುಲಗಿ ಮಾರ್ಗದಲ್ಲಿ ಬರುವ ಪ್ರತಿ ಗ್ರಾಮದಲ್ಲಿ ಅವೈಜ್ಞಾನಿಕವಾಗಿ 5 ರಿಂದ 6 ರಸ್ತೆ ಉಬ್ಬುಗಳನ್ನು ಹಾಕಿದ್ದು, ಇದರಿಂದ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಅಲ್ಲದೆ, ಈ ಮಾರ್ಗದ ಪ್ರಯಾಣ ತುಂಬಾ ಪ್ರಯಾಸಕರವಾಗಿದೆ.</p>.<p>ಈ ಮಾರ್ಗದಲ್ಲಿ ಈಗಾಗಲೇ ಸಾಕಷ್ಟು ಅಪಘಾತಗಳು ಸಂಭವಿಸಿವೆ. ಅಪಘಾತ ನಿಯಂತ್ರಿಸಲು ಹಾಕಿರುವ ರಸ್ತೆ ಉಬ್ಬುಗಳಿಂದಲೇ ಹೆಚ್ಚು ಅಪಘಾತಗಳಾಗುತ್ತಿವೆ. ಕೆಲವೊಮ್ಮೆ ರಸ್ತೆ ಉಬ್ಬು ಕಾಣದೆ ಹತ್ತಿರ ಹೋಗಿ, ಬ್ರೇಕ್ ಹಾಕಿದಾಗ ಹಿಂದಿನ ವಾಹನಗಳು ಡಿಕ್ಕಿ ಹೊಡೆದ ಘಟನೆಗಳು ನಡೆದಿವೆ.</p>.<p>ರಸ್ತೆ ಉಬ್ಬುಗಳನ್ನು ಎಷ್ಟು ಎತ್ತರಕ್ಕೆ ಹಾಕಬೇಕು, ಎಲ್ಲಿ ಹಾಕಬೇಕು, ಹಾಕಿದ ನಂತರ ಯಾವ ಸೂಚನೆಗಳು ಪಾಲಿಸಬೇಕು ಎನ್ನುವ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಅವೈಜ್ಞಾನಿಕವಾಗಿ ರಸ್ತೆ ಉಬ್ಬುಗಳನ್ನು ಹಾಕಿರುವುದರಿಂದ ವಾಹನ ಸವಾರರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.</p>.<p><strong>100 ರಸ್ತೆ ಉಬ್ಬುಗಳು:</strong>ಗಂಗಾವತಿ ನಗರದಿಂದ ಹುಲಿಗೆ ಗ್ರಾಮಕ್ಕೆ ತೆರಳುವ ಶಿವಪುರ ರಸ್ತೆ ಹಾಗೂ ಅಗಳಕೇರಾ ರಸ್ತೆ ಮಾರ್ಗದಲ್ಲಿ 100 ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದೆ. ಸಂಗಾಪುರ ಗ್ರಾಮವೊಂದರಲ್ಲಿ 10, ಸಾಣಾಪುರ ಗ್ರಾಮದಲ್ಲಿ 7 ರಸ್ತೆ ಉಬ್ಬುಗಳಿವೆ. ಇನ್ನೂ ಪ್ರತಿ ಗ್ರಾಮದಲ್ಲಿ 5-6 ಉಬ್ಬುಗಳಿವೆ.</p>.<p><strong>ಸಾರಿಗೆ ಬಸ್ಗಳ ಪ್ಲೇಟ್ ಕಟ್:</strong>ಹುಲಿಗಿ-ಗಂಗಾವತಿ ಮಾರ್ಗದಲ್ಲಿ ಸಾಕಷ್ಟು ಸಾರಿಗೆ ಬಸ್ಗಳು ಸಂಚರಿಸುತ್ತವೆ. ಕೆಲ ಬಾರಿ ರಸ್ತೆ ಉಬ್ಬುಗಳಿಗೆ ಬಸ್ನ ನಂಬರ್ ಪ್ಲೇಟ್ ತಗುಲಿ ಮುರಿದ ಘಟನೆಗಳು ನಡೆದಿವೆ.</p>.<p><strong>ಆಸ್ಪತ್ರೆ ತಲುಪಲು ಪ್ರಯಾಸ</strong>: ಹುಲಿಗಿ, ಹರ್ಲಾಪುರ, ಬಸಾಪುರ, ಸಾಣಾಪುರ, ಚಿಕ್ಕರಾಂಪುರ ಗ್ರಾಮದ ಜನರು ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿಗೆ ತೆರಳಬೇಕಾಗುತ್ತದೆ. ತುರ್ತಾಗಿ ಜೀವ ಉಳಿಸಿಕೊಳ್ಳಲು ಗಂಗಾವತಿಗೆ ಹೋಗಬೇಕಾದ ಪರಿಸ್ಥಿತಿ ಎದುರಾದರೆ, ಆ ವ್ಯಕ್ತಿ ರಸ್ತೆ ಉಬ್ಬುಗಳನ್ನು ದಾಟಿ ಸಕಾಲದಲ್ಲಿ ಆಸ್ಪತ್ರೆಗೆ ತೆರಳಲು ಈ ರಸ್ತೆ ಉಬ್ಬುಗಳು ಅಡ್ಡಿಯಾಗಿ ಪರಿಣಮಿಸಿವೆ.</p>.<p><strong>ಅವಾಂತರಕ್ಕೆ ಕಾದ ರಸ್ತೆ ಉಬ್ಬುಗಳು:</strong> ಗಂಗಾವತಿ-ಹುಲಿಗಿ ಮಾರ್ಗದಲ್ಲಿ ಸಾಕಷ್ಟು ತಿರುವುಗಳಿದ್ದು, ಈ ಮಾರ್ಗದ ಮೂಲಕವೇ ಕೊಪ್ಪಳ, ಹೊಸಪೇಟೆ, ಹಂಪಿ, ಬಳ್ಳಾರಿಗೆ ಹೋಗಬಹುದು. ಈ ಮಾರ್ಗದಲ್ಲಿ ಬಸ್, ಲಾರಿ, ಟ್ರ್ಯಾಕ್ಟರ್, ಬೈಕ್, ಕಾರು, ಲಾರಿಗಳ ಸಂಚಾರ ಹೆಚ್ಚಿದ್ದು ರಸ್ತೆ ಉಬ್ಬುಗಳ ಬಳಿ ವೇಗ ನಿಯಂತ್ರಿಸಲಾಗದೆ ಒಂದಲ್ಲ ಒಂದು ರೀತಿಯ ಅಪಘಾತಗಳು ಸಂಭವಿಸುತ್ತಲೆ ಇರುತ್ತವೆ.</p>.<p>ಶಾಲೆ, ದೇವಸ್ಥಾನ, ಬ್ಯಾಂಕ್, ಗ್ರಾಮ ಪಂಚಾಯಿತಿಗಳಿಂದ ನಿರ್ದಿಷ್ಟ ಮೀಟರ್ ವ್ಯಾಪ್ತಿಯಲ್ಲಿ ರಸ್ತೆ ಉಬ್ಬುಗಳು ನಿರ್ಮಿಸಲು ಅವಕಾಶ ಇರುತ್ತದೆ. ಇಂತಹ ಯಾವುದೇ ನಿಯಮಗಳು ಈ ಮಾರ್ಗಕ್ಕೆ ಅನ್ವಯವಾಗಿಲ್ಲ ಎಂದು ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>*<br />ಅವೈಜ್ಞಾನಿಕ ರಸ್ತೆ ಉಬ್ಬುಗಳಿಂದ ಆದ ಅಪಘಾತಗಳ ಕುರಿತು ಸಾಕಷ್ಟು ದೂರುಗಳು ಬಂದಿವೆ. ಉಬ್ಬುಗಳ ತೆರವಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಶೀಘ್ರ ತೆರವುಗೊಳಿಸಲಾಗುವುದು<br /><em><strong>-ರಾಜಪ್ಪ, ಸಹಾಯಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ ಗಂಗಾವತಿ</strong></em></p>.<p><em><strong>*</strong></em><br />ಹುಲಿಗಿ ಗ್ರಾಮದಿಂದ ಗಂಗಾವತಿ 34 ಕಿ.ಮೀ ಇದ್ದು, ಈ ರಸ್ತೆ ಮಾರ್ಗದಲ್ಲಿನ ಉಬ್ಬುಗಳನ್ನು ದಾಟಿ ಗಂಗಾವತಿ ಹೋಗಬೇಕಾದರೆ 2 ಗಂಟೆ ಸಮಯ ಹಿಡಯುತ್ತದೆ.<br /><em><strong>-ಸೈಫರ್ ರೆಹಮಾನ್, ಬೈಕ್ ಸವಾರ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>