ಶುಕ್ರವಾರ, 14 ನವೆಂಬರ್ 2025
×
ADVERTISEMENT
ADVERTISEMENT

ಕೊಪ್ಪಳ: ಎರಡನೇ ಬೆಳೆಗೆ ನೀರು ಬಿಡದಿದ್ದರೆ ಜಲಾಶಯಕ್ಕೆ ಧುಮುಕುವ ಎಚ್ಚರಿಕೆ

ಬಿಜೆಪಿಯ ನಾಲ್ಕು ಜಿಲ್ಲೆಗಳ ಮುಖಂಡರ ಸಭೆ; ₹52 ಕೋಟಿ ಅವ್ಯವಹಾರದ ಆರೋಪ
Published : 14 ನವೆಂಬರ್ 2025, 6:09 IST
Last Updated : 14 ನವೆಂಬರ್ 2025, 6:09 IST
ಫಾಲೋ ಮಾಡಿ
Comments
ನೀರಾವರಿ ಸಚಿವ ಡಿ.ಕೆ.ಶಿವಕುಮಾರ ಐಸಿಸಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ಬೇಸಿಗೆ ಬೆಳೆಗೆ ನೀರು ಕೊಡಬಾರದು ಮೊದಲೇ ತೀರ್ಮಾನಿಸಿದ್ದಾರೆ. ಇಚ್ಛಾಶಕ್ತಿ ಪ್ರದರ್ಶಿಸಿದರೆ ನೀರು ಕೊಡುವುದು ಕಷ್ಟವೇನಲ್ಲ.
ಕೆ. ವಿರೂಪಾಕ್ಷಪ್ಪ ಮಾಜಿ ಸಂಸದ
ತುಂಗಭದ್ರಾದ ಕ್ರಸ್ಟ್‌ಗೇಟ್‌ಗಳನ್ನು ಬದಲಿಸುವಂತೆ ಜಲಾಶಯಗಳ ಸುರಕ್ಷಿತಾ ತಜ್ಞ ಕನ್ನಯ್ಯನಾಯ್ಡು ಏ. 4ರಂದೇ ಪತ್ರ ಬರೆದರೂ ರಾಜ್ಯ ಸರ್ಕಾರ ಕಿಮ್ಮತ್ತು ಕೊಟ್ಟಿಲ್ಲ. ಎಲ್ಲ ಗೇಟ್‌ಗಳನ್ನು ಸಿದ್ಧಪಡಿಸಿದರೆ ನಾಲ್ಕು ತಿಂಗಳಲ್ಲಿ ಅಳವಡಿಸಬಹುದು.  
ತಿಪ್ಪೇರುದ್ರಸ್ವಾಮಿ ಮುನಿರಾಬಾದ್‌ ಕಾಡಾ ಮಾಜಿ ಅಧ್ಯಕ್ಷ
ಎರಡನೇ ಬೆಳೆಗೆ ನೀರು ನೀಡಬೇಕು ಎಂಬುದು ರೈತರ ಬೇಡಿಕೆ. ಜಲಾಶಯದ ಸಂರಕ್ಷಣೆಯೂ ಮುಖ್ಯವಾಗಿದೆ. ಐಸಿಸಿ ಸಭೆಯಲ್ಲಿ ರೈತರ ಅಭಿಪ್ರಾಯ ಮತ್ತು ಸರ್ಕಾರ ತೀರ್ಮಾನ ನೋಡಿಕೊಂಡು ಬಿಜೆಪಿ ಮುಂದಿನ ನಡೆಯ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. 
ದೊಡ್ಡನಗೌಡ ಪಾಟೀಲ್ ಶಾಸಕ
ಮೆಕ್ಕೆಜೋಳಕ್ಕೆ ಉತ್ತಮ ಇಳುವರಿ ಬಂದಿದೆ. ಕೇಂದ್ರ ಸರ್ಕಾರ ₹2400 ಬೆಂಬಲ ಬೆಲೆ ನಿಗದಿ ಪಡಿಸಿದೆ. ಮಾರುಕಟ್ಟೆ ಬೆಲೆ ₹1600 ಇದೆ. ರಾಜ್ಯ ಸರ್ಕಾರ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕು.
ಬಿ. ಶ್ರೀರಾಮುಲು ಮಾಜಿ ಸಚಿವ
‘ರಾಯರಡ್ಡಿ ರಾಜ್ಯದ ಗೃಹ ಸಚಿವರನ್ನು ನೋಡಲಿ’
ಕೊಪ್ಪಳ: 'ದೆಹಲಿಯಲ್ಲಿ ನಡೆದ ಸ್ಫೋಟಕ್ಕಾಗಿ ಗೃಹ ಸಚಿವ ಅಮಿತ್‌ ಶಾ ಅವರ ರಾಜೀನಾಮೆ ಕೇಳುವ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ತಮ್ಮದೇ ಸರ್ಕಾರದ ಗೃಹ ಸಚಿವ ಪರಮೇಶ್ವರ ಅವರ ಕಾರ್ಯ ವೈಖರಿ ನೋಡಲಿ ಎಂದು ಮಾಜಿ ಸಚಿವರಾದ ಹಾಲಪ್ಪ ಆಚಾರ್‌ ಹಾಗೂ ಬಿ. ಶ್ರೀರಾಮಲು ಹೇಳಿದರು. ‘ಪರಪ್ಪರ ಅಗ್ರಹಾರದಲ್ಲಿ ಭಯೋತ್ಪಾದಕರು ನೃತ್ಯ ಮಾಡುತ್ತಿದ್ದಾರೆ. ರಾಜ್ಯದ ಗೃಹ ಮಂತ್ರಿ ಏನು ಮಾಡುತ್ತಿದ್ದಾರೆ’ ಎಂದು ರಾಮುಲು ಪ್ರಶ್ನಿಸಿದರೆ ‘ದೆಹಲಿಯಲ್ಲಿ ಸ್ಫೋಟ ನಡೆದ 24 ತಾಸಿನ ಒಳಗೆ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಕೇಂದ್ರದ ನಾಯಕರು ರಾಜ್ಯದವರಿಂದ ಕೇಳಿ ಕಲಿಯುವಂಥದ್ದು ಏನೂ ಇಲ್ಲ. ದೇಶದ ಸುರಕ್ಷತೆ ವಿಷಯದಲ್ಲಿಯೂ ರಾಯರಡ್ಡಿ ನೀಚ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಹಾಲಪ್ಪ ಆಚಾರ್‌ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT