<p><strong>ಕೊಪ್ಪಳ: </strong>ಶಿಕ್ಷಕರ ಕಲಾ ಸಂಘದ ಪದಾಧಿಕಾರಿಗಳು ನಗರದ ಐತಿಹಾಸಿಕ ಕೊಪ್ಪಳ ಕೋಟೆ(ಕಿಲ್ಲೆ)ಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ಶಿಕ್ಷಕರ ದಿನ ಆಚರಿಸಿದರು.</p>.<p>ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಮಣ್ಣ ಶ್ಯಾವಿ,‘ಇತಿಹಾಸದ ಕುರಿತು ತಿಳಿದುಕೊಳ್ಳುವುರು ನಮ್ಮೆಲ್ಲರ ಕರ್ತವ್ಯ. ಇತಿಹಾಸವನ್ನು ತಿಳಿಯದವ ಇತಿಹಾಸವನ್ನು ಸೃಷ್ಟಿಸಲಾರ ಅನ್ನುವ ಮಾತಿನಂತೆ ಈ ಐತಿಹಾಸಿಕ ತಾಣದಲ್ಲಿ ನಾವಿಂದು ಶಿಕ್ಷಕರ ದಿನ ಆಚರಣೆ ಮಾಡಿದ್ದೇವೆ’ ಎಂದರು.</p>.<p>ಪ್ರಾಣೇಶ ಪೂಜಾರ ಮಾತನಾಡಿ,‘ಕಲಾಸಂಘದ ದಶಮಾನೋತ್ಸವ ಕಾರ್ಯಕ್ರಮಕ್ಕೆ ಉತ್ತಮ ನಾಟಕವೊಂದನ್ನು ಪ್ರದರ್ಶನ ಮಾಡಲು ಕಲಾಸಂಘ ಸಜ್ಜಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿ ನಾಟಕ ಪ್ರದರ್ಶನಕ್ಕೆ ಅವಕಾಶವಿರದ ಕಾರಣ, ಕೊಪ್ಪಳ ಕೋಟೆಯಲ್ಲಿ ಶ್ರಮದಾನ ಮಾಡುವ ಮೂಲಕ ಸರಳವಾಗಿ ಆಚರಣೆ ಮಾಡಲು ನಿರ್ಧರಿಸಿ ಆಚರಿಸಲಾಗುತ್ತಿದೆ’ ಎಂದು<br />ಹೇಳಿದರು.</p>.<p>ಸಹ ಗ್ರಂಥಪಾಲಕ ನಾಗರಾಜನಾಯಕ ಡಿ.ಡೊಳ್ಳಿನ ಮಾತನಾಡಿದರು.</p>.<p>ಮಕ್ಕಳಾದ ಪವನ ಪಿ.ಪೂಜಾರ, ಉದಯ ಎಮ್.ಡೊಳ್ಳಿನ, ಬೃಂದಾ, ಭೂಮಿಕಾ, ವಿದ್ಯಾರ್ಥಿಗಳಾದ ಜ್ಯೋತಿ, ಮಹೇಶ ಇದ್ದರು.</p>.<p>ಯೋಗಾನರಸಿಂಹ ಪಿ.ಕೆ. ರಂಗಗೀತೆಗಳನ್ನು ಹಾಡಿ, ಪ್ರಾರ್ಥಿಸಿದರು. ಯೋಗಪ್ಪ ನಿರೂಪಿಸಿದರು. ಸಂಗಮ್ಮ ಮಟ್ಟಿ ವಂದಿಸಿದರು.</p>.<p class="Briefhead"><strong>‘ಯುವಕರಿಂದ ಸ್ವಚ್ಛತಾ ಕಾರ್ಯ</strong></p>.<p>ಕೊಪ್ಪಳ: ನಗರದ ದೇವಾಂಗ ಮಠದ ಆವರಣದಲ್ಲಿ ಯುವ ಬ್ರಿಗೇಡ್ ತಂಡದ ಯುವಕರು ಭಾನುವಾರ ಸ್ವಚ್ಛತಾ ಕಾರ್ಯ<br />ಕೈಗೊಂಡರು.</p>.<p>ಮುಂದಿನ ವರ್ಷಕ್ಕೆ ಭಾರತ ಸ್ವಾತಂತ್ರ್ಯ ಗಳಿಸಿ 75 ವರ್ಷ ಆಗಲಿದೆ. ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದ ಬಿಗ್ರೇಡ್ನಿಂದ ರಾಜ್ಯದಾದ್ಯಂತ ‘ಸ್ವರಾಜ್ಯಕ್ಕೆ ಮುಕ್ಕಾಲು ನೂರು’ ಎಂಬ ಹಮ್ಮಿಕೊಳ್ಳಲಾಗುವುದು ಎಂದು ಬ್ರಿಗೇಡ್ನ ಪ್ರಮುಖರು ತಿಳಿಸಿದರು.</p>.<p>ರಾಜ್ಯದಲ್ಲಿ 75ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿಭಾನುವಾರ ಸ್ವಚ್ಛತಾ ಕಾರ್ಯ ನಡೆದಿದೆ. ಯುವಕರ ಈ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ತಿಳಿಸಿದರು.</p>.<p>ಜಿಲ್ಲಾ ಸಂಚಾಲಕ ವೀರೇಶ್ ಜಿ.ಕೆ. ಸೇರಿ 35ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ: </strong>ಶಿಕ್ಷಕರ ಕಲಾ ಸಂಘದ ಪದಾಧಿಕಾರಿಗಳು ನಗರದ ಐತಿಹಾಸಿಕ ಕೊಪ್ಪಳ ಕೋಟೆ(ಕಿಲ್ಲೆ)ಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ಶಿಕ್ಷಕರ ದಿನ ಆಚರಿಸಿದರು.</p>.<p>ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಮಣ್ಣ ಶ್ಯಾವಿ,‘ಇತಿಹಾಸದ ಕುರಿತು ತಿಳಿದುಕೊಳ್ಳುವುರು ನಮ್ಮೆಲ್ಲರ ಕರ್ತವ್ಯ. ಇತಿಹಾಸವನ್ನು ತಿಳಿಯದವ ಇತಿಹಾಸವನ್ನು ಸೃಷ್ಟಿಸಲಾರ ಅನ್ನುವ ಮಾತಿನಂತೆ ಈ ಐತಿಹಾಸಿಕ ತಾಣದಲ್ಲಿ ನಾವಿಂದು ಶಿಕ್ಷಕರ ದಿನ ಆಚರಣೆ ಮಾಡಿದ್ದೇವೆ’ ಎಂದರು.</p>.<p>ಪ್ರಾಣೇಶ ಪೂಜಾರ ಮಾತನಾಡಿ,‘ಕಲಾಸಂಘದ ದಶಮಾನೋತ್ಸವ ಕಾರ್ಯಕ್ರಮಕ್ಕೆ ಉತ್ತಮ ನಾಟಕವೊಂದನ್ನು ಪ್ರದರ್ಶನ ಮಾಡಲು ಕಲಾಸಂಘ ಸಜ್ಜಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿ ನಾಟಕ ಪ್ರದರ್ಶನಕ್ಕೆ ಅವಕಾಶವಿರದ ಕಾರಣ, ಕೊಪ್ಪಳ ಕೋಟೆಯಲ್ಲಿ ಶ್ರಮದಾನ ಮಾಡುವ ಮೂಲಕ ಸರಳವಾಗಿ ಆಚರಣೆ ಮಾಡಲು ನಿರ್ಧರಿಸಿ ಆಚರಿಸಲಾಗುತ್ತಿದೆ’ ಎಂದು<br />ಹೇಳಿದರು.</p>.<p>ಸಹ ಗ್ರಂಥಪಾಲಕ ನಾಗರಾಜನಾಯಕ ಡಿ.ಡೊಳ್ಳಿನ ಮಾತನಾಡಿದರು.</p>.<p>ಮಕ್ಕಳಾದ ಪವನ ಪಿ.ಪೂಜಾರ, ಉದಯ ಎಮ್.ಡೊಳ್ಳಿನ, ಬೃಂದಾ, ಭೂಮಿಕಾ, ವಿದ್ಯಾರ್ಥಿಗಳಾದ ಜ್ಯೋತಿ, ಮಹೇಶ ಇದ್ದರು.</p>.<p>ಯೋಗಾನರಸಿಂಹ ಪಿ.ಕೆ. ರಂಗಗೀತೆಗಳನ್ನು ಹಾಡಿ, ಪ್ರಾರ್ಥಿಸಿದರು. ಯೋಗಪ್ಪ ನಿರೂಪಿಸಿದರು. ಸಂಗಮ್ಮ ಮಟ್ಟಿ ವಂದಿಸಿದರು.</p>.<p class="Briefhead"><strong>‘ಯುವಕರಿಂದ ಸ್ವಚ್ಛತಾ ಕಾರ್ಯ</strong></p>.<p>ಕೊಪ್ಪಳ: ನಗರದ ದೇವಾಂಗ ಮಠದ ಆವರಣದಲ್ಲಿ ಯುವ ಬ್ರಿಗೇಡ್ ತಂಡದ ಯುವಕರು ಭಾನುವಾರ ಸ್ವಚ್ಛತಾ ಕಾರ್ಯ<br />ಕೈಗೊಂಡರು.</p>.<p>ಮುಂದಿನ ವರ್ಷಕ್ಕೆ ಭಾರತ ಸ್ವಾತಂತ್ರ್ಯ ಗಳಿಸಿ 75 ವರ್ಷ ಆಗಲಿದೆ. ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದ ಬಿಗ್ರೇಡ್ನಿಂದ ರಾಜ್ಯದಾದ್ಯಂತ ‘ಸ್ವರಾಜ್ಯಕ್ಕೆ ಮುಕ್ಕಾಲು ನೂರು’ ಎಂಬ ಹಮ್ಮಿಕೊಳ್ಳಲಾಗುವುದು ಎಂದು ಬ್ರಿಗೇಡ್ನ ಪ್ರಮುಖರು ತಿಳಿಸಿದರು.</p>.<p>ರಾಜ್ಯದಲ್ಲಿ 75ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿಭಾನುವಾರ ಸ್ವಚ್ಛತಾ ಕಾರ್ಯ ನಡೆದಿದೆ. ಯುವಕರ ಈ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ತಿಳಿಸಿದರು.</p>.<p>ಜಿಲ್ಲಾ ಸಂಚಾಲಕ ವೀರೇಶ್ ಜಿ.ಕೆ. ಸೇರಿ 35ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>