ಬಿರುಬೇಸಿಗೆ ಮುಗಿದು ಮುಂಗಾರು ಸಮೀಪಿಸುತ್ತಿದೆ. ಜಿಲ್ಲೆಯ ಬಹುತೇಕ ಕಡೆ ಶುದ್ಧ ಕುಡಿಯುವ ನೀರಿನ ಸಮಸ್ಯೆಯಿಂದಾಗಿ ವಾಂತಿ ಭೇದಿ ಪ್ರಕರಣಗಳು ವರದಿಯಾಗುತ್ತಿದ್ದು ಕೆಲವು ಕಡೆ ನೀರಿಲ್ಲ. ಇದ್ದರೂ ಶುದ್ಧವಾಗಿಲ್ಲ. ಪೂರೈಕೆ ಸಮಸ್ಯೆಯಿಂದಾಗಿ ಜನ ನಿತ್ಯ ಪರದಾಡುವಂತಾಗಿದೆ.
ಗ್ರಾಮದಲ್ಲಿರುವ ಏಕೈಕ ಬೋರ್ವೆಲ್ನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಬರುವ ನೀರು ಗ್ರಾಮಸ್ಥರಿಗೆ ಸಾಲುವುದಿಲ್ಲ. ಶಾಲೆಯಲ್ಲಿ ಬಿಸಿಯೂಟ ತಯಾರಿಸಲು ಹಾಗೂ ವಿದ್ಯಾರ್ಥಿಗಳಿಗೆ ಕುಡಿಯಲು ಸಮಸ್ಯೆಯಾಗಿದೆ ಇನ್ನೂ ಎರಡ್ಮೂರು ಬೋರ್ವೆಲ್ ಕೊರೆಯಿಸಿ ಕೊಡಬೇಕು.
ಶೇಕ್ ಮಲಿಕಸಾಬ್, ಅಧ್ಯಕ್ಷ, ಚಿಕ್ಕಖೇಡ ಎಸ್ ಡಿಎಂಸಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ
ತಾಲ್ಲೂಕಿನ ಒಂದೊಂದು ಊರಿನಲ್ಲಿ ಎರಡು ಶುದ್ದ ಕುಡಿಯುವ ನೀರಿನ ಘಟಕಗಳಿವೆ ಯೋಗ್ಯವಲ್ಲದ ನೀರಿನ ಮೂಲಗಳನ್ನು ಬಂದ್ ಮಾಡಿಸಿ ಯೋಗ್ಯವಾದ ನೀರಿನ ಮೂಲಗಳನ್ನು ಬಳಕೆ ಮಾಡಲು ಸೂಚಿಸಲಾಗಿದೆ.
ಚಂದ್ರಶೇಖರ ಕಂದಕೂರು, ಪ್ರಬಾರ ಇಒ ತಾ.ಪಂ. ಕನಕಗಿರಿ
ಶುದ್ದ ಕುಡಿಯುವ ನೀರಿನ ಘಟಕದ ನೀರು ಸಂಗ್ರಹದ ಟ್ಯಾಂಕ್ ಪ್ಲಾಸ್ಟಿಕ್ನಲ್ಲಿದೆ. ಅದರ ಬದಲಾಗಿ ಸ್ಟೀಲ್ ಟ್ಯಾಂಕ್ ಮಾಡಲು ಹೇಳಿದರೂ ಅಧಿಕಾರಿಗಳು ಗಮನ ಹರಿಸಲಿಲ್ಲ. ನೀರು ಶುದ್ದೀಕರಿಸುವ ಯಂತ್ರ ಕಳಪೆ ಮಟ್ಟದ್ದಾಗಿದೆ.