<p><strong>ಕನಕಗಿರಿ: </strong>ಬಯಲು ಸೀಮೆ ಪ್ರದೇಶಕ್ಕೆ ಹೆಸರಾದ ಈ ಭಾಗದ ಗುಡ್ಡಗಳ ಕಡೆಗೆ ಪಯಣ ಬೆಳಸಿದರೆ ಸಾಕು, ಮಲೆನಾಡಿನ ಪರಿಸರ ಅನುಭವವಾಗುತ್ತದೆ. ಎಲ್ಲೆಡೆ ಹಚ್ಚ ಹಸಿರು ನೋಡುಗರನ್ನು ಕೈ ಬೀಸಿ ಕರೆಯುತ್ತದೆ.</p>.<p>ಸಾಮಾಜಿಕ ಅರಣ್ಯ ಇಲಾಖೆ ಹಾಗೂ ತಾಲ್ಲೂಕು ಪಂಚಾಯಿತಿಗಳ ಆಶ್ರಯದಲ್ಲಿ ನರೇಗಾ ಯೋಜನೆಯ ಹಣವನ್ನು ಬಳಸಿ ಈ ಭಾಗದ ಗುಡ್ಡ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲಾಗಿದೆ.</p>.<p>ಅರಣ್ಯ ಇಲಾಖೆಗೆ ಸೇರಿದ ಐದು ಗುಡ್ಡಗಳ ಪೈಕಿ 12 ಸಾವಿರ ಎಕರೆ ಪ್ರದೇಶದಲ್ಲಿ 15 ಅಡಿ ಉದ್ದ, 3 ಅಡಿ ಅಗಲ, 3 ಅಡಿ ಆಳ ಅಳತೆಯ 2000ಕ್ಕೂ ಹೆಚ್ಚು ಇಂಗು ಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ. 5000 ಕ್ಕೂ ಹೆಚ್ಚು ಗಿಡಮರಗಳು ಹಸಿರಾಗಿವೆ.<br />ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಮಣ್ಣು ಮತ್ತು ನೀರು ಸಂರಕ್ಷಣೆ (ಎಸ್ಎಂಸಿ) ಕಾಮಗಾರಿಯೇ ಇದಕ್ಕೆ ಪ್ರಮುಖ ಕಾರಣವಾಗಿದೆ.</p>.<p>ಕೊರೊನಾ ಸಂಕಷ್ಟದ ಸಮಯದಲ್ಲಿ ಕೂಲಿಕಾರರಿಗೆ ನರೇಗಾ ಕೆಲಸ ನೀಡಿದ ಪರಿಣಾಮ ಒಟ್ಟು 12,400 ಮಾನವ ದಿನಗಳ ಸೃಜನೆಯಿಂದ ಈ ಹಸಿರು ವಾತಾವರಣ ಸೃಷ್ಟಿಯಾಗಿದೆ.</p>.<p>ತಾಲ್ಲೂಕಿನ ಚಿಕ್ಕಮಾದಿನಾಳ, ಮುಸಲಾಪುರ, ಹುಲಿಹೈದರ, ಕರಡೋಣ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗುಡ್ಡಗಳು ಹಸಿರು ರೂಪ ಪಡೆದು ಕಂಗೊಳಿಸುತ್ತಿವೆ.</p>.<p>ಕಳೆದ ಎರಡು ವರ್ಷಗಳಿಂದಲೂ ತಾಲ್ಲೂಕು ಪಂಚಾಯಿತಿ, ಸಾಮಾಜಿಕ ಅರಣ್ಯ ಇಲಾಖೆ ಗಂಗಾವತಿ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಈ ಭಾಗದಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆ (ಎಸ್ಎಂಸಿ) ಕಾಮಗಾರಿಗೆ ಒತ್ತು ನೀಡಿದ ಪರಿಣಾಮ ಮಳೆ ನೀರು ಪೋಲಾಗುವುದನ್ನು ತಪ್ಪಿಸಲು ಟ್ರೆಂಚ್ಗಳನ್ನು(ಇಂಗು ಗುಂಡಿ) ತೆಗಿಸಿ ನೀರು ಸಂಗ್ರಹವಾಗುವಂತೆ ನೋಡಿಕೊಳ್ಳಲಾಗಿದೆ.</p>.<p>ತೆಗ್ಗುಗುಂಡಿಗಳಿಂದ ಭೂಮಿಯ ಅಂತರ್ಜಲ ಮಟ್ಟ ಸಹ ಹೆಚ್ಚಳವಾಗಿದೆ. ಸುತ್ತಮುತ್ತಲ್ಲಿನ ಗುಡ್ಡಗಳು ಹಸಿರುಮಯವಾಗಿವೆ ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಾದ ರಾಮು ನಾಯಕ, ನಾಗೇಶ ಪೂಜಾರ, ಶರಣೆಗೌಡ ಹಾಗೂ ರವೀಂದ್ರ ಕುಲಕರ್ಣಿ ತಿಳಿಸುತ್ತಾರೆ.</p>.<p>ಚಿಕ್ಕಮಾದಿನಾಳ ಗ್ರಾ.ಪಂ. ವ್ಯಾಪ್ತಿಯ ಬಂಕಾಪುರ ಗ್ರಾಮದಲ್ಲಿ 120 ಜನ ಕೂಲಿಕಾರರು 45 ದಿನ ಕೆಲಸ ಮಾಡಿ 830 ಟ್ರೆಂಚ್ ನಿರ್ಮಾಣ ಮಾಡಿದರೆ ನಾಗಲಾಪುರ ಗ್ರಾಮದಲ್ಲಿ 95 ಕೂಲಿಕಾರರು 20 ದಿನ ಕೆಲಸ ಮಾಡಿ 300 ಟ್ರೆಂಚ್ಗಳನ್ನು ನಿರ್ಮಾಣ ಮಾಡಿದ್ದಾರೆ.</p>.<p>ಕರಡೋಣ ಗ್ರಾ.ಪಂ ವ್ಯಾಪ್ತಿಯ ಉಮಳಿ ಕಾಟಾಪುರದಲ್ಲಿ 105 ಕೂಲಿಕಾರ್ಮಿಕರು 30 ದಿನ ಕೆಲಸ ಮಾಡಿ 400 ಟ್ರೆಂಚ್ಗಳನ್ನು ತೆಗೆದಿದ್ದರಿಂದ ಇಲ್ಲಿನ ಬೆಟ್ಟದಲ್ಲಿ ನೆಡುತೋಪು ಯೋಜನೆಯಡಿ ಹಾಕಿದ್ದ 8000 ಗಿಡಗಳಿಗೆ ಮರುಜೀವ ಬಂದಿದೆ.</p>.<p>ಹುಲಿಹೈದರ ಗ್ರಾ.ಪಂ. ವ್ಯಾಪ್ತಿಯ ಹೊಸಗುಡ್ಡದಲ್ಲಿ 95 ಕೂಲಿ ಕಾರ್ಮಿಕರು 20 ದಿನ ಕೆಲಸ ಮಾಡಿ 200 ಟ್ರೆಂಚ್ಗಳನ್ನು ತೋಡಿದ್ದಾರೆ.</p>.<p>ಎರಡು ದಿನಗಳ ಹಿಂದೆ ಈ ಭಾಗದಲ್ಲಿ ಉತ್ತಮ ಮಳೆ ಸುರಿದಿದೆ. ಆದ್ದರಿಂದ ಅವು ಭರ್ತಿಯಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಗಿರಿ: </strong>ಬಯಲು ಸೀಮೆ ಪ್ರದೇಶಕ್ಕೆ ಹೆಸರಾದ ಈ ಭಾಗದ ಗುಡ್ಡಗಳ ಕಡೆಗೆ ಪಯಣ ಬೆಳಸಿದರೆ ಸಾಕು, ಮಲೆನಾಡಿನ ಪರಿಸರ ಅನುಭವವಾಗುತ್ತದೆ. ಎಲ್ಲೆಡೆ ಹಚ್ಚ ಹಸಿರು ನೋಡುಗರನ್ನು ಕೈ ಬೀಸಿ ಕರೆಯುತ್ತದೆ.</p>.<p>ಸಾಮಾಜಿಕ ಅರಣ್ಯ ಇಲಾಖೆ ಹಾಗೂ ತಾಲ್ಲೂಕು ಪಂಚಾಯಿತಿಗಳ ಆಶ್ರಯದಲ್ಲಿ ನರೇಗಾ ಯೋಜನೆಯ ಹಣವನ್ನು ಬಳಸಿ ಈ ಭಾಗದ ಗುಡ್ಡ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲಾಗಿದೆ.</p>.<p>ಅರಣ್ಯ ಇಲಾಖೆಗೆ ಸೇರಿದ ಐದು ಗುಡ್ಡಗಳ ಪೈಕಿ 12 ಸಾವಿರ ಎಕರೆ ಪ್ರದೇಶದಲ್ಲಿ 15 ಅಡಿ ಉದ್ದ, 3 ಅಡಿ ಅಗಲ, 3 ಅಡಿ ಆಳ ಅಳತೆಯ 2000ಕ್ಕೂ ಹೆಚ್ಚು ಇಂಗು ಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ. 5000 ಕ್ಕೂ ಹೆಚ್ಚು ಗಿಡಮರಗಳು ಹಸಿರಾಗಿವೆ.<br />ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಮಣ್ಣು ಮತ್ತು ನೀರು ಸಂರಕ್ಷಣೆ (ಎಸ್ಎಂಸಿ) ಕಾಮಗಾರಿಯೇ ಇದಕ್ಕೆ ಪ್ರಮುಖ ಕಾರಣವಾಗಿದೆ.</p>.<p>ಕೊರೊನಾ ಸಂಕಷ್ಟದ ಸಮಯದಲ್ಲಿ ಕೂಲಿಕಾರರಿಗೆ ನರೇಗಾ ಕೆಲಸ ನೀಡಿದ ಪರಿಣಾಮ ಒಟ್ಟು 12,400 ಮಾನವ ದಿನಗಳ ಸೃಜನೆಯಿಂದ ಈ ಹಸಿರು ವಾತಾವರಣ ಸೃಷ್ಟಿಯಾಗಿದೆ.</p>.<p>ತಾಲ್ಲೂಕಿನ ಚಿಕ್ಕಮಾದಿನಾಳ, ಮುಸಲಾಪುರ, ಹುಲಿಹೈದರ, ಕರಡೋಣ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗುಡ್ಡಗಳು ಹಸಿರು ರೂಪ ಪಡೆದು ಕಂಗೊಳಿಸುತ್ತಿವೆ.</p>.<p>ಕಳೆದ ಎರಡು ವರ್ಷಗಳಿಂದಲೂ ತಾಲ್ಲೂಕು ಪಂಚಾಯಿತಿ, ಸಾಮಾಜಿಕ ಅರಣ್ಯ ಇಲಾಖೆ ಗಂಗಾವತಿ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಈ ಭಾಗದಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆ (ಎಸ್ಎಂಸಿ) ಕಾಮಗಾರಿಗೆ ಒತ್ತು ನೀಡಿದ ಪರಿಣಾಮ ಮಳೆ ನೀರು ಪೋಲಾಗುವುದನ್ನು ತಪ್ಪಿಸಲು ಟ್ರೆಂಚ್ಗಳನ್ನು(ಇಂಗು ಗುಂಡಿ) ತೆಗಿಸಿ ನೀರು ಸಂಗ್ರಹವಾಗುವಂತೆ ನೋಡಿಕೊಳ್ಳಲಾಗಿದೆ.</p>.<p>ತೆಗ್ಗುಗುಂಡಿಗಳಿಂದ ಭೂಮಿಯ ಅಂತರ್ಜಲ ಮಟ್ಟ ಸಹ ಹೆಚ್ಚಳವಾಗಿದೆ. ಸುತ್ತಮುತ್ತಲ್ಲಿನ ಗುಡ್ಡಗಳು ಹಸಿರುಮಯವಾಗಿವೆ ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಾದ ರಾಮು ನಾಯಕ, ನಾಗೇಶ ಪೂಜಾರ, ಶರಣೆಗೌಡ ಹಾಗೂ ರವೀಂದ್ರ ಕುಲಕರ್ಣಿ ತಿಳಿಸುತ್ತಾರೆ.</p>.<p>ಚಿಕ್ಕಮಾದಿನಾಳ ಗ್ರಾ.ಪಂ. ವ್ಯಾಪ್ತಿಯ ಬಂಕಾಪುರ ಗ್ರಾಮದಲ್ಲಿ 120 ಜನ ಕೂಲಿಕಾರರು 45 ದಿನ ಕೆಲಸ ಮಾಡಿ 830 ಟ್ರೆಂಚ್ ನಿರ್ಮಾಣ ಮಾಡಿದರೆ ನಾಗಲಾಪುರ ಗ್ರಾಮದಲ್ಲಿ 95 ಕೂಲಿಕಾರರು 20 ದಿನ ಕೆಲಸ ಮಾಡಿ 300 ಟ್ರೆಂಚ್ಗಳನ್ನು ನಿರ್ಮಾಣ ಮಾಡಿದ್ದಾರೆ.</p>.<p>ಕರಡೋಣ ಗ್ರಾ.ಪಂ ವ್ಯಾಪ್ತಿಯ ಉಮಳಿ ಕಾಟಾಪುರದಲ್ಲಿ 105 ಕೂಲಿಕಾರ್ಮಿಕರು 30 ದಿನ ಕೆಲಸ ಮಾಡಿ 400 ಟ್ರೆಂಚ್ಗಳನ್ನು ತೆಗೆದಿದ್ದರಿಂದ ಇಲ್ಲಿನ ಬೆಟ್ಟದಲ್ಲಿ ನೆಡುತೋಪು ಯೋಜನೆಯಡಿ ಹಾಕಿದ್ದ 8000 ಗಿಡಗಳಿಗೆ ಮರುಜೀವ ಬಂದಿದೆ.</p>.<p>ಹುಲಿಹೈದರ ಗ್ರಾ.ಪಂ. ವ್ಯಾಪ್ತಿಯ ಹೊಸಗುಡ್ಡದಲ್ಲಿ 95 ಕೂಲಿ ಕಾರ್ಮಿಕರು 20 ದಿನ ಕೆಲಸ ಮಾಡಿ 200 ಟ್ರೆಂಚ್ಗಳನ್ನು ತೋಡಿದ್ದಾರೆ.</p>.<p>ಎರಡು ದಿನಗಳ ಹಿಂದೆ ಈ ಭಾಗದಲ್ಲಿ ಉತ್ತಮ ಮಳೆ ಸುರಿದಿದೆ. ಆದ್ದರಿಂದ ಅವು ಭರ್ತಿಯಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>