<p><strong>ಕೊಪ್ಪಳ</strong>: ಭಾರತೀಯರ ಪಾಲಿಗೆ ಹೊಸ ವರ್ಷವೇ ಎಂದೇ ಪರಿಗಣಿತವಾದ ಚಂದ್ರಮಾನ ಯುಗಾದಿಯನ್ನು ಜಿಲ್ಲೆಯಾದ್ಯಂತ ಜನ ಏನೇ ತೊಂದರೆ ಇದ್ದರೂ ಸಂಭ್ರಮದಿಂದ ಆಚರಿಸಿದ್ದು ಕಂಡು ಬಂತು.</p>.<p>ಕೊರೊನಾ ಹಿನ್ನೆಲೆಯಲ್ಲಿ ಎರಡನೇಯ ಅಲೆಯ ಭೀತಿಯಲ್ಲಿ ಮಾಸ್ಕ್ ಧರಿಸದೇ, ಪರಸ್ಪರ ಅಂತರ ಇಲ್ಲದೆ ನಗರದ ಜೆಪಿ ಮಾರುಕಟ್ಟೆ ಸೇರಿದಂತೆ ಪ್ರಮುಖ ವ್ಯಾಪಾರ ವಹಿವಾಟು ಪ್ರದೇಶಗಳಲ್ಲಿ ಸಾವಿರಾರು ಜನ ನೆರೆದು ಹೂವು, ಹಣ್ಣು ಖರೀದಿಸುತ್ತಿರುವುದು ಕಂಡು ಬಂತು.</p>.<p>ಪ್ರಖರ ಬಿಸಿಲು ಮತ್ತು ಬೆಲೆ ಏರಿಕೆ ಮಧ್ಯೆ ಜನರು ಉತ್ಸಾಹದಿಂದ ಹಬ್ಬಕ್ಕೆ ಅಗತ್ಯವಾದ ಹೂವು, ಹಣ್ಣು, ಕಬ್ಬು, ಬಾಳೆ, ಬೆಲ್ಲ ಖರೀದಿಸಿದರು.</p>.<p>ಹೂವು, ಹಣ್ಣುಗಳ ಬೆಲೆ ದುಪ್ಪಟ್ಟು ಬೆಲೆಯಲ್ಲಿ ಏರಿಕೆ ಕಂಡರೂ ಖರೀದಿಸುವುದೇ ನಡೆದೇ ಇತ್ತು. ಹಿಂದೂಗಳ ಪಾಲಿನ ದೊಡ್ಡ ಹಬ್ಬವಾದ ಇದು, ವ್ಯಾಪಾರಸ್ಥರಿಗೂ ಪ್ರಮುಖವಾದ ಹಬ್ಬ ಲೇವಾದೇವಿ, ಖರೀದಿ, ಖಾತಾ ಪುಸ್ತಕ, ಹೊಲ, ಮನೆ ಲೀಸ್ ಪತ್ರಗಳು ಸೇರಿದಂತೆ ವಿವಿಧ ವ್ಯವಹಾರಗಳು ಭರ್ಜರಿಯಾಗಿ ನಡೆದವು.</p>.<p>ಸೋಮವಾರಅಮವಾಸ್ಯೆ ಪ್ರಯುಕ್ತ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.</p>.<p>ಗವಿಮಠದ ಎದುರು ಹೊಸ ವಾಹನಗಳು ಪೂಜೆಗೆ ಸಾಲುಗಟ್ಟಿನಿಂತಿದ್ದವು. ಹೊಸ ಪಂಚಾಂಗ ಖರೀದಿ ಮತ್ತು ಪಠಣ, ಮಳೆ, ರಾಶಿ ಭವಿಷ್ಯ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು.</p>.<p>ಮಂಗಳವಾರ ಯುಗಾದಿ ಪಾಡ್ಯಯನ್ನು ಈ ಭಾಗದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದ್ದು, ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ಇದನ್ನು ಪವಿತ್ರ ಮತ್ತು ವಿಶೇಷ ದಿನವೆಂದು ಪರಿಗಣಿಸಲಾಗುತ್ತದೆ.</p>.<p>ಗೃಹಪ್ರವೇಶ ಸೇರಿದಂತೆ ವಿವಿಧ ಖಾಸಗಿ ಕಾರ್ಯಕ್ರಮಗಳು ನಡೆಯುತ್ತವೆ. ಅತ್ಯಂತ ಪ್ರಶಸ್ತ ದಿನವಾಗಿದ್ದರಿಂದ ಪಾಡ್ಯಕ್ಕೆ ಹೆಚ್ಚಿನ ಮಹತ್ವವಿದೆ.</p>.<p>ಗ್ರಾಮೀಣ ಪ್ರದೇಶದಲ್ಲಿ ಯುಗಾದಿಯಂದು ಅಡವಿಗೆ ತೆರಳಿ ಮೊಲಗಳ ಬೇಟೆಯಾಡಿ ಅವುಗಳನ್ನು ಮೆರವಣಿಗೆ ಮೂಲಕ ತಂದು ಬಾಡೂಟ ಮಾಡುವ ಪದ್ಧತಿ ಕೂಡಾ ಇತ್ತು. ಅರಣ್ಯ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಬೇಟೆಯನ್ನು ನಿಷೇಧಿಸಲಾಗಿದೆ.</p>.<p>ಇದಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹದ್ದಿನ ಕಣ್ಣು ಇಟ್ಟು ಕಾಯುತ್ತಾರೆ. ಹನುಮಂತ ದೇವರ ಮಂದಿರದ ಎದುರು ಹಾಲೋಕಳಿ, ಬಣ್ಣದ ಓಕುಳಿ ಆಡುವ ಪದ್ಧತಿ ಕೂಡಾ ಇದೆ.</p>.<p>ಕೊರೊನಾ ಕಾರಣ ಸಂಕ್ಷಿಪ್ತವಾಗಿ ಧಾರ್ಮಿಕ ಆಚರಣೆಗಳು ನಡೆಯಲಿವೆ ಎನ್ನಲಾಗುತ್ತದೆ. ಪಾಡ್ಯದ ಕರಿದಿನದಂದು ಮಾಂಸದ ಊಟಕ್ಕೆ ಮೊದಲ ಪ್ರಾಶಸ್ತ್ಯವಿದ್ದು, ಮಾಂಸಾಹಾರಿಗಳು ಸಂಭ್ರಮದಿಂದ ಬಾಡೂಟ ಸೇವಿಸುವುದು ವಾಡಿಕೆಯೂ ಇದೆ.</p>.<p>ವಿವಿಧ ಭಾಗದಲ್ಲಿ ದೇವರ ಜಾತ್ರೆ, ಪಲ್ಲಕ್ಕಿ ಉತ್ಸವ, ಹೊಳೆಗೆ ದೇವರನ್ನು ಕರೆದುಕೊಂಡು ಹೋಗುವುದು, ಮುಖ ತೊಳೆಯುವ ಶಾಸ್ತ್ರ, ಎಲೆ ಪೂಜೆ, ಬಣ್ಣದಾಟ ಕೂಡಾ ನಡೆಯುತ್ತದೆ.</p>.<p>ಈ ಎಲ್ಲ ಕಾರಣಗಳಿಗಾಗಿ ಹಬ್ಬಕ್ಕೆ ಅಗತ್ಯ ವಸ್ತು ಖರೀದಿಗೆ ಜನರು ಟಂಟಂ, ರಿಕ್ಷಾ, ಟ್ರ್ಯಾಕ್ಸ್, ಕಾರು ಸೇರಿದಂತೆ ವಿವಿಧ ವಾಹನಗಳಲ್ಲಿ ತಂಡೋಪತಂಡವಾಗಿ ಮಾರುಕಟ್ಟೆಗೆ ಬಂದಿದ್ದರಿಂದ ಗಿಜಿಗಿಡುತ್ತಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ</strong>: ಭಾರತೀಯರ ಪಾಲಿಗೆ ಹೊಸ ವರ್ಷವೇ ಎಂದೇ ಪರಿಗಣಿತವಾದ ಚಂದ್ರಮಾನ ಯುಗಾದಿಯನ್ನು ಜಿಲ್ಲೆಯಾದ್ಯಂತ ಜನ ಏನೇ ತೊಂದರೆ ಇದ್ದರೂ ಸಂಭ್ರಮದಿಂದ ಆಚರಿಸಿದ್ದು ಕಂಡು ಬಂತು.</p>.<p>ಕೊರೊನಾ ಹಿನ್ನೆಲೆಯಲ್ಲಿ ಎರಡನೇಯ ಅಲೆಯ ಭೀತಿಯಲ್ಲಿ ಮಾಸ್ಕ್ ಧರಿಸದೇ, ಪರಸ್ಪರ ಅಂತರ ಇಲ್ಲದೆ ನಗರದ ಜೆಪಿ ಮಾರುಕಟ್ಟೆ ಸೇರಿದಂತೆ ಪ್ರಮುಖ ವ್ಯಾಪಾರ ವಹಿವಾಟು ಪ್ರದೇಶಗಳಲ್ಲಿ ಸಾವಿರಾರು ಜನ ನೆರೆದು ಹೂವು, ಹಣ್ಣು ಖರೀದಿಸುತ್ತಿರುವುದು ಕಂಡು ಬಂತು.</p>.<p>ಪ್ರಖರ ಬಿಸಿಲು ಮತ್ತು ಬೆಲೆ ಏರಿಕೆ ಮಧ್ಯೆ ಜನರು ಉತ್ಸಾಹದಿಂದ ಹಬ್ಬಕ್ಕೆ ಅಗತ್ಯವಾದ ಹೂವು, ಹಣ್ಣು, ಕಬ್ಬು, ಬಾಳೆ, ಬೆಲ್ಲ ಖರೀದಿಸಿದರು.</p>.<p>ಹೂವು, ಹಣ್ಣುಗಳ ಬೆಲೆ ದುಪ್ಪಟ್ಟು ಬೆಲೆಯಲ್ಲಿ ಏರಿಕೆ ಕಂಡರೂ ಖರೀದಿಸುವುದೇ ನಡೆದೇ ಇತ್ತು. ಹಿಂದೂಗಳ ಪಾಲಿನ ದೊಡ್ಡ ಹಬ್ಬವಾದ ಇದು, ವ್ಯಾಪಾರಸ್ಥರಿಗೂ ಪ್ರಮುಖವಾದ ಹಬ್ಬ ಲೇವಾದೇವಿ, ಖರೀದಿ, ಖಾತಾ ಪುಸ್ತಕ, ಹೊಲ, ಮನೆ ಲೀಸ್ ಪತ್ರಗಳು ಸೇರಿದಂತೆ ವಿವಿಧ ವ್ಯವಹಾರಗಳು ಭರ್ಜರಿಯಾಗಿ ನಡೆದವು.</p>.<p>ಸೋಮವಾರಅಮವಾಸ್ಯೆ ಪ್ರಯುಕ್ತ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.</p>.<p>ಗವಿಮಠದ ಎದುರು ಹೊಸ ವಾಹನಗಳು ಪೂಜೆಗೆ ಸಾಲುಗಟ್ಟಿನಿಂತಿದ್ದವು. ಹೊಸ ಪಂಚಾಂಗ ಖರೀದಿ ಮತ್ತು ಪಠಣ, ಮಳೆ, ರಾಶಿ ಭವಿಷ್ಯ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು.</p>.<p>ಮಂಗಳವಾರ ಯುಗಾದಿ ಪಾಡ್ಯಯನ್ನು ಈ ಭಾಗದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದ್ದು, ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ಇದನ್ನು ಪವಿತ್ರ ಮತ್ತು ವಿಶೇಷ ದಿನವೆಂದು ಪರಿಗಣಿಸಲಾಗುತ್ತದೆ.</p>.<p>ಗೃಹಪ್ರವೇಶ ಸೇರಿದಂತೆ ವಿವಿಧ ಖಾಸಗಿ ಕಾರ್ಯಕ್ರಮಗಳು ನಡೆಯುತ್ತವೆ. ಅತ್ಯಂತ ಪ್ರಶಸ್ತ ದಿನವಾಗಿದ್ದರಿಂದ ಪಾಡ್ಯಕ್ಕೆ ಹೆಚ್ಚಿನ ಮಹತ್ವವಿದೆ.</p>.<p>ಗ್ರಾಮೀಣ ಪ್ರದೇಶದಲ್ಲಿ ಯುಗಾದಿಯಂದು ಅಡವಿಗೆ ತೆರಳಿ ಮೊಲಗಳ ಬೇಟೆಯಾಡಿ ಅವುಗಳನ್ನು ಮೆರವಣಿಗೆ ಮೂಲಕ ತಂದು ಬಾಡೂಟ ಮಾಡುವ ಪದ್ಧತಿ ಕೂಡಾ ಇತ್ತು. ಅರಣ್ಯ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಬೇಟೆಯನ್ನು ನಿಷೇಧಿಸಲಾಗಿದೆ.</p>.<p>ಇದಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹದ್ದಿನ ಕಣ್ಣು ಇಟ್ಟು ಕಾಯುತ್ತಾರೆ. ಹನುಮಂತ ದೇವರ ಮಂದಿರದ ಎದುರು ಹಾಲೋಕಳಿ, ಬಣ್ಣದ ಓಕುಳಿ ಆಡುವ ಪದ್ಧತಿ ಕೂಡಾ ಇದೆ.</p>.<p>ಕೊರೊನಾ ಕಾರಣ ಸಂಕ್ಷಿಪ್ತವಾಗಿ ಧಾರ್ಮಿಕ ಆಚರಣೆಗಳು ನಡೆಯಲಿವೆ ಎನ್ನಲಾಗುತ್ತದೆ. ಪಾಡ್ಯದ ಕರಿದಿನದಂದು ಮಾಂಸದ ಊಟಕ್ಕೆ ಮೊದಲ ಪ್ರಾಶಸ್ತ್ಯವಿದ್ದು, ಮಾಂಸಾಹಾರಿಗಳು ಸಂಭ್ರಮದಿಂದ ಬಾಡೂಟ ಸೇವಿಸುವುದು ವಾಡಿಕೆಯೂ ಇದೆ.</p>.<p>ವಿವಿಧ ಭಾಗದಲ್ಲಿ ದೇವರ ಜಾತ್ರೆ, ಪಲ್ಲಕ್ಕಿ ಉತ್ಸವ, ಹೊಳೆಗೆ ದೇವರನ್ನು ಕರೆದುಕೊಂಡು ಹೋಗುವುದು, ಮುಖ ತೊಳೆಯುವ ಶಾಸ್ತ್ರ, ಎಲೆ ಪೂಜೆ, ಬಣ್ಣದಾಟ ಕೂಡಾ ನಡೆಯುತ್ತದೆ.</p>.<p>ಈ ಎಲ್ಲ ಕಾರಣಗಳಿಗಾಗಿ ಹಬ್ಬಕ್ಕೆ ಅಗತ್ಯ ವಸ್ತು ಖರೀದಿಗೆ ಜನರು ಟಂಟಂ, ರಿಕ್ಷಾ, ಟ್ರ್ಯಾಕ್ಸ್, ಕಾರು ಸೇರಿದಂತೆ ವಿವಿಧ ವಾಹನಗಳಲ್ಲಿ ತಂಡೋಪತಂಡವಾಗಿ ಮಾರುಕಟ್ಟೆಗೆ ಬಂದಿದ್ದರಿಂದ ಗಿಜಿಗಿಡುತ್ತಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>