ತಾಲ್ಲೂಕಿನ ಚಂದಗಾಲು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಶಾಸಕ ರಮೇಶ ಬಂಡಿಸಿದ್ದೇಗೌಡ ಅವರ ಸಮ್ಮುಖದಲ್ಲಿ ಅವರು ಕಾಂಗ್ರೆಸ್ಗೆ ಸೇರ್ಪಡೆಯಾದರು. ವೆಂಕಟೇಶ್ ಅವರ ಜತೆಗೆ ಎಎಪಿ ಕಾರ್ಯಕರ್ತರರಾದ ಚಿಕ್ಕತಮ್ಮೇಗೌಡ, ಮೇಳಾಪುರ ಶ್ರೀನಿವಾಸ್, ಸದಾನಂದ, ಪುಟ್ಟರಾಜು, ಶಿವಕುಮಾರ್, ಹೆಬ್ಬಾಡಿಹುಂಡಿ ಸಿದ್ದರಾಮೇಗೌಡ ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಸೇರಿದರು.