ಈ ಕುರಿತು ಕೆಎಸ್ನ ಅವರ ಮೊಮ್ಮಗಳು ಡಾ.ಮೇಖಲಾ ವೆಂಕಟೇಶ್ ಪ್ರತಿಕ್ರಿಯಿಸಿದ್ದು, ‘ತವರಿನಲ್ಲಿ ನಮ್ಮ ತಾತನ ಜನ್ಮದಿನ ಆಚರಣೆ ಮಾಡಿರುವುದು ಖುಷಿಯ ಸಂಗತಿ. ಆದರೆ, ಆ ಶಾಲೆಯ ಶಿಕ್ಷಕರಿಗೆ ಕೆಎಸ್ನ ಅವರ ಮುಖವೇ ಗೊತ್ತಿಲ್ಲ ಎಂಬುದು ಬೇಸರ ತರಿಸುತ್ತದೆ. ಜಾಲತಾಣದಲ್ಲಿ ನೋಡಿ ನನಗೆ ದಿಗ್ಭ್ರಮೆಯಾಯಿತು. ನಮ್ಮ ಸ್ಥಿತಿ ಎಂತಹ ಮಟ್ಟಕ್ಕೆ ತಲುಪಿದೆ ಎಂಬ ಆತಂಕವಾಗಿದೆ. ಬೇವಿನ ಬೀಜ
ಬಿತ್ತಿ ಮಾವು ಕೇಳುವ ಸ್ಥಿತಿ ತಲುಪುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.