<p><strong>ಮೇಲುಕೋಟೆ</strong>: ಓದು ಬರಹದ ಜೊತೆಗೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಿಗೆ ಆದ್ಯತೆ ನೀಡಿದಾಗ, ಮಕ್ಕಳು ಸರ್ವಾಂಗೀಣ ವಿಕಾಸ ಹೊಂದಲು ಸಾಧ್ಯ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ವೆಂಕಟರಾಮೇಗೌಡ ಹೇಳಿದರು.</p>.<p>ಇಲ್ಲಿನ ಗುರುಶೇನೆಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಶಾಲೆಗಳು ನಮ್ಮ ಕಲೆ-ಸಂಸ್ಕೃತಿ ಬೆಳೆಸುವ ಕೇಂದ್ರಗಳಾಗಿವೆ. ನಶಿಸಿಹೋಗುತ್ತಿರುವ ಕಲೆ ಸಂಸ್ಕೃತಿ ಉಳಿಸುವ ಜವಾಬ್ದಾರಿ ಶಾಲೆಗಳದ್ದಾಗಿದೆ. ಓದು ಬರಹದ ಜೊತೆಗೆ ಸೃಜನಶೀಲ ಅಭಿವ್ಯಕ್ತಿ ಬಹುಮುಖ್ಯವಾದುದು. ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಬೆಳೆದುಬರಲು ಇಂಥ ಸ್ಪರ್ಧೆಗಳು ಅವಶ್ಯವಾಗಿವೆ’ ಎಂದರು.</p>.<p>ಮೇಲುಕೋಟೆ ಸಂಸ್ಕೃತ ಸಂಶೋಧನ ಕೇಂದ್ರ ವಿದ್ವಾನ ಕುಮಾರ್ ಮಾತನಾಡಿ, ‘ಕಲೆ, ಸಾಹಿತ್ಯ, ಸಂಸ್ಕೃತಿ ಮನುಷ್ಯನ ಬೆಳವಣಿಗೆಗೆ ಸಹಾಯಕವಾಗಿವೆ. ಇವುಗಳ ಬಗ್ಗೆ ಅಭಿರುಚಿಯನ್ನು ಪ್ರಾಥಮಿಕ ಹಂತದಿಂದಲೇ ಮೂಡಿಸಬೇಕಾಗಿದೆ. ಮಕ್ಕಳಲ್ಲಿ ಸಹಜವಾಗಿ ವಿವಿಧ ಕಲೆಗಳು ಇದ್ದು, ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಅವಶ್ಯ’ ಎಂದರು.</p>.<p>ಗ್ರಾ.ಪಂ. ಅಧ್ಯಕ್ಷೆ ಭವಾನಿ ಹರಿದರ್ ಮಾತನಾಡಿ, ‘ಅನೇಕ ಜನಪದ ಕಲಾ ಪ್ರಕಾರಗಳು ಇಂದು ಆಧುನಿಕತೆಯ ಭರಾಟೆಯಲ್ಲಿ ನಶಿಸಿ ಹೋಗುತ್ತಿವೆ. ಅವುಗಳ ಬಗ್ಗೆ ಮಕ್ಕಳಿಗೆ ತಿಳಿಸಿ, ಕಲಾಪ್ರದರ್ಶನ ಉತ್ತಮ ವೇದಿಕೆ ನಿರ್ಮಿಸಬೇಕಾಗಿದೆ’ ಎಂದು ಹೇಳಿದರು.</p>.<p>ಗ್ರಾ.ಪಂ. ಉಪಾಧ್ಯಕ್ಷರಾದ ಜಿ.ಕೆ. ಕುಮಾರ್, ಸಿಆರ್ ಪಿ ಬೆಟ್ಟಸ್ವಾಮಿಗೌಡ, ಇಸಿಒ ಜಯರಾಮು, ಪ್ರಾಶ ಸೌಮ್ಯಶ್ರೀ, ವೀರಭಧ್ರಸ್ವಾಮಿ, ನಿಂಗೇಗೌಡ್ರು, ಪಿಡಿಒ ರಾಜೇಶ್ ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೇಲುಕೋಟೆ</strong>: ಓದು ಬರಹದ ಜೊತೆಗೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಿಗೆ ಆದ್ಯತೆ ನೀಡಿದಾಗ, ಮಕ್ಕಳು ಸರ್ವಾಂಗೀಣ ವಿಕಾಸ ಹೊಂದಲು ಸಾಧ್ಯ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ವೆಂಕಟರಾಮೇಗೌಡ ಹೇಳಿದರು.</p>.<p>ಇಲ್ಲಿನ ಗುರುಶೇನೆಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಶಾಲೆಗಳು ನಮ್ಮ ಕಲೆ-ಸಂಸ್ಕೃತಿ ಬೆಳೆಸುವ ಕೇಂದ್ರಗಳಾಗಿವೆ. ನಶಿಸಿಹೋಗುತ್ತಿರುವ ಕಲೆ ಸಂಸ್ಕೃತಿ ಉಳಿಸುವ ಜವಾಬ್ದಾರಿ ಶಾಲೆಗಳದ್ದಾಗಿದೆ. ಓದು ಬರಹದ ಜೊತೆಗೆ ಸೃಜನಶೀಲ ಅಭಿವ್ಯಕ್ತಿ ಬಹುಮುಖ್ಯವಾದುದು. ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಬೆಳೆದುಬರಲು ಇಂಥ ಸ್ಪರ್ಧೆಗಳು ಅವಶ್ಯವಾಗಿವೆ’ ಎಂದರು.</p>.<p>ಮೇಲುಕೋಟೆ ಸಂಸ್ಕೃತ ಸಂಶೋಧನ ಕೇಂದ್ರ ವಿದ್ವಾನ ಕುಮಾರ್ ಮಾತನಾಡಿ, ‘ಕಲೆ, ಸಾಹಿತ್ಯ, ಸಂಸ್ಕೃತಿ ಮನುಷ್ಯನ ಬೆಳವಣಿಗೆಗೆ ಸಹಾಯಕವಾಗಿವೆ. ಇವುಗಳ ಬಗ್ಗೆ ಅಭಿರುಚಿಯನ್ನು ಪ್ರಾಥಮಿಕ ಹಂತದಿಂದಲೇ ಮೂಡಿಸಬೇಕಾಗಿದೆ. ಮಕ್ಕಳಲ್ಲಿ ಸಹಜವಾಗಿ ವಿವಿಧ ಕಲೆಗಳು ಇದ್ದು, ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಅವಶ್ಯ’ ಎಂದರು.</p>.<p>ಗ್ರಾ.ಪಂ. ಅಧ್ಯಕ್ಷೆ ಭವಾನಿ ಹರಿದರ್ ಮಾತನಾಡಿ, ‘ಅನೇಕ ಜನಪದ ಕಲಾ ಪ್ರಕಾರಗಳು ಇಂದು ಆಧುನಿಕತೆಯ ಭರಾಟೆಯಲ್ಲಿ ನಶಿಸಿ ಹೋಗುತ್ತಿವೆ. ಅವುಗಳ ಬಗ್ಗೆ ಮಕ್ಕಳಿಗೆ ತಿಳಿಸಿ, ಕಲಾಪ್ರದರ್ಶನ ಉತ್ತಮ ವೇದಿಕೆ ನಿರ್ಮಿಸಬೇಕಾಗಿದೆ’ ಎಂದು ಹೇಳಿದರು.</p>.<p>ಗ್ರಾ.ಪಂ. ಉಪಾಧ್ಯಕ್ಷರಾದ ಜಿ.ಕೆ. ಕುಮಾರ್, ಸಿಆರ್ ಪಿ ಬೆಟ್ಟಸ್ವಾಮಿಗೌಡ, ಇಸಿಒ ಜಯರಾಮು, ಪ್ರಾಶ ಸೌಮ್ಯಶ್ರೀ, ವೀರಭಧ್ರಸ್ವಾಮಿ, ನಿಂಗೇಗೌಡ್ರು, ಪಿಡಿಒ ರಾಜೇಶ್ ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>