<p><strong>ಕಿಕ್ಕೇರಿ</strong>: ಕಾರ್ತಿಕ ಮಾಸದ ಕಡೇ ಸೋಮವಾರದ ಪ್ರಯುಕ್ತ ಹೋಬಳಿಯ ಸಾಸಲು ಗ್ರಾಮದಲ್ಲಿ ದೇವರ ದರ್ಶನಕ್ಕೆ ಹೆಚ್ಚಿನ ಭಕ್ತರು ಭೇಟಿ ನೀಡಿದ್ದರು.</p>.<p>ಬ್ರಾಹ್ಮಿ ಮುಹೂರ್ತದಿಂದ ರಾತ್ರಿಯವರೆಗೆ ಭಕ್ತರ ದಂಡು ದಂಡು ನೆರೆದಿತ್ತು. ಹೋಬಳಿಯಲ್ಲದೇ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿ ಸೋಮೇಶ್ವರ ಪುಷ್ಕರಿಣಿಯಲ್ಲಿ ಸ್ನಾನ ಮಾಡಿ ಸೋಮೇಶ್ವರ, ಶಂಭುಲಿಂಗೇಶ್ವರ, ಕುದುರೆಮಂಡಮ್ಮ ದೇವರ ದರ್ಶನ ಪಡೆಯಲು ಜಮಾಯಿಸಿದ್ದರು.</p>.<p>ಅರ್ಚಕರು ಸೋಮೇಶ್ವರ, ಶಂಭುಲಿಂಗೇಶ್ವರ ದೇವರಿಗೆ ವಿಶೇಷ ಅಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ ನೆರವೇರಿಸಿದ್ದರು. ವಿವಿಧ ಪುಷ್ಪ, ಆಭರಣದೊಂದಿಗೆ ಮೂರ್ತಿಯನ್ನು ಅಲಂಕರಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಟ್ಟರು. ನಾಗಬನದಲ್ಲಿ ಭಕ್ತರು ಹುತ್ತಕ್ಕೆ ಹಾಲಿನ ತನಿ ಎರೆದು ಇಷ್ಟಾರ್ಥ ಸಿದ್ಧಿ, ಚರ್ಮರೋಗ ಬಾಧಿಸದಂತೆ ಪ್ರಾರ್ಥಿಸಿದರು.</p>.<p>ಮುಜರಾಯಿ ಇಲಾಖೆಯ ದೇಗುಲ ನವೀಕರಣದ ನಿಮಿತ್ತ ದೇವರ ಮೂರ್ತಿಗಳನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಿದ್ದರಿಂದ ಕಿಷ್ಕಿಂದೆಯಂತಹ ಜಾಗದಲ್ಲಿ ದೇವರ ದರ್ಶನ ಪಡೆಯಲು ಪರಿತಪಿಸಿದರು. ಮಹಿಳೆಯರು ಬಟ್ಟೆ ಬದಲಾಯಿಸಿಕೊಳ್ಳಲು ಸೂಕ್ತ ಸ್ಥಳವಿಲ್ಲದೆ ಪರದಾಡಿದರು.</p>.<p>೧೭ಕೆಕೆಆರ್೧<br /> ಕಿಕ್ಕೇರಿ ಹೋಬಳಿಯ ಸಾಸಲು ಸೋಮೇಶ್ವರ ದೇವರಿಗೆ ಕಾರ್ತಿಕ ಮಾಸದ ಸೋಮವಾರ ಮಾಡಲಾಗಿದ್ದ ಅಲಂಕಾರ. <br /> ೧೭ಕೆಕೆಆರ್೨<br /> ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದಲ್ಲಿನ ಸೋಮೇಶ್ವರ ದೇವರಿಗೆ ಪೂಜಿಸಲು ಸೋಮವಾರ ಸ್ಥಳಾವಕಾಶವಿಲ್ಲದೆ ಭಕ್ತರು ಹೊರಾಲಯದಲ್ಲಿ ಪೂಜಿಸುತ್ತಿರುವ ಭಕ್ತರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಿಕ್ಕೇರಿ</strong>: ಕಾರ್ತಿಕ ಮಾಸದ ಕಡೇ ಸೋಮವಾರದ ಪ್ರಯುಕ್ತ ಹೋಬಳಿಯ ಸಾಸಲು ಗ್ರಾಮದಲ್ಲಿ ದೇವರ ದರ್ಶನಕ್ಕೆ ಹೆಚ್ಚಿನ ಭಕ್ತರು ಭೇಟಿ ನೀಡಿದ್ದರು.</p>.<p>ಬ್ರಾಹ್ಮಿ ಮುಹೂರ್ತದಿಂದ ರಾತ್ರಿಯವರೆಗೆ ಭಕ್ತರ ದಂಡು ದಂಡು ನೆರೆದಿತ್ತು. ಹೋಬಳಿಯಲ್ಲದೇ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿ ಸೋಮೇಶ್ವರ ಪುಷ್ಕರಿಣಿಯಲ್ಲಿ ಸ್ನಾನ ಮಾಡಿ ಸೋಮೇಶ್ವರ, ಶಂಭುಲಿಂಗೇಶ್ವರ, ಕುದುರೆಮಂಡಮ್ಮ ದೇವರ ದರ್ಶನ ಪಡೆಯಲು ಜಮಾಯಿಸಿದ್ದರು.</p>.<p>ಅರ್ಚಕರು ಸೋಮೇಶ್ವರ, ಶಂಭುಲಿಂಗೇಶ್ವರ ದೇವರಿಗೆ ವಿಶೇಷ ಅಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ ನೆರವೇರಿಸಿದ್ದರು. ವಿವಿಧ ಪುಷ್ಪ, ಆಭರಣದೊಂದಿಗೆ ಮೂರ್ತಿಯನ್ನು ಅಲಂಕರಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಟ್ಟರು. ನಾಗಬನದಲ್ಲಿ ಭಕ್ತರು ಹುತ್ತಕ್ಕೆ ಹಾಲಿನ ತನಿ ಎರೆದು ಇಷ್ಟಾರ್ಥ ಸಿದ್ಧಿ, ಚರ್ಮರೋಗ ಬಾಧಿಸದಂತೆ ಪ್ರಾರ್ಥಿಸಿದರು.</p>.<p>ಮುಜರಾಯಿ ಇಲಾಖೆಯ ದೇಗುಲ ನವೀಕರಣದ ನಿಮಿತ್ತ ದೇವರ ಮೂರ್ತಿಗಳನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಿದ್ದರಿಂದ ಕಿಷ್ಕಿಂದೆಯಂತಹ ಜಾಗದಲ್ಲಿ ದೇವರ ದರ್ಶನ ಪಡೆಯಲು ಪರಿತಪಿಸಿದರು. ಮಹಿಳೆಯರು ಬಟ್ಟೆ ಬದಲಾಯಿಸಿಕೊಳ್ಳಲು ಸೂಕ್ತ ಸ್ಥಳವಿಲ್ಲದೆ ಪರದಾಡಿದರು.</p>.<p>೧೭ಕೆಕೆಆರ್೧<br /> ಕಿಕ್ಕೇರಿ ಹೋಬಳಿಯ ಸಾಸಲು ಸೋಮೇಶ್ವರ ದೇವರಿಗೆ ಕಾರ್ತಿಕ ಮಾಸದ ಸೋಮವಾರ ಮಾಡಲಾಗಿದ್ದ ಅಲಂಕಾರ. <br /> ೧೭ಕೆಕೆಆರ್೨<br /> ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದಲ್ಲಿನ ಸೋಮೇಶ್ವರ ದೇವರಿಗೆ ಪೂಜಿಸಲು ಸೋಮವಾರ ಸ್ಥಳಾವಕಾಶವಿಲ್ಲದೆ ಭಕ್ತರು ಹೊರಾಲಯದಲ್ಲಿ ಪೂಜಿಸುತ್ತಿರುವ ಭಕ್ತರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>