ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಮಂಡ್ಯ: ವನ್ಯಜೀವಿ ದಾಳಿಗೆ 1,336 ಜಾನುವಾರು ಸಾವು

ಅರಣ್ಯ ಇಲಾಖೆಯಿಂದ ₹1.01 ಕೋಟಿ ಪರಿಹಾರ; ಕಬ್ಬಿನ ಗದ್ದೆಗಳೇ ಚಿರತೆಯ ವಾಸಸ್ಥಾನ
Published : 18 ಏಪ್ರಿಲ್ 2025, 4:08 IST
Last Updated : 18 ಏಪ್ರಿಲ್ 2025, 4:08 IST
ಫಾಲೋ ಮಾಡಿ
Comments
ಚಿರತೆ 
ಚಿರತೆ 
ಮಾನವ–ವನ್ಯಜೀವಿ ಸಂಘರ್ಷ ಪ್ರಕರಣ ತಡೆಗಟ್ಟಲು ಅರಣ್ಯ ಸಂರಕ್ಷಣೆ ಮತ್ತು ಅರಣ್ಯ ಪ್ರದೇಶದ ಒತ್ತುವರಿ ತೆರವಿಗೆ ಕ್ರಮ ಕೈಗೊಂಡಿದ್ದೇವೆ. ಅರಣ್ಯ ರಕ್ಷಣೆಗೆ ಸಾರ್ವಜನಿಕರ ಸಹಕಾರವೂ ಅಗತ್ಯ
– ಬಿ.ಮಹಾದೇವಸ್ವಾಮಿ ಎಸಿಎಫ್‌ ಮಂಡ್ಯ ಉಪವಿಭಾಗ
ಚಿರತೆ ದಾಳಿಯಿಂದ ಸಾಕುಪ್ರಾಣಿ ಕಳೆದುಕೊಂಡ ರೈತರು ಅಪಾರ ನಷ್ಟ ಅನುಭವಿಸಿದ್ದಾರೆ. ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯವರು ವಿಶೇಷ ಕಾರ್ಯಾಚರಣೆ ನಡೆಸಬೇಕು
– ಶಿವರಾಜು ರೈತ ಮುಖಂಡ ಬಾಳೆಹೊನ್ನಿಗ ಗ್ರಾಮ
ಆನೆ ದಾಳಿಗೆ ಮಹಿಳೆ ಬಲಿ
2023ರ ನವೆಂಬರ್‌ನಲ್ಲಿ ಮಂಡ್ಯ ತಾಲ್ಲೂಕಿನ ಲಾಳನಕೆರೆ ಗ್ರಾಮದ ಸಮೀಪ ಜಮೀನಿನಲ್ಲಿ ಕೂಲಿ ಕೆಲಸ ಮಾಡುವ ಸಮಯದಲ್ಲಿ ಹಠಾತ್ತನೆ ಆನೆಯೊಂದು ನಡೆಸಿದ ದಾಳಿಯಲ್ಲಿ ಕೂಲಿ ಕಾರ್ಮಿಕ ಮಹಿಳೆ ಸಾಕಮ್ಮ (50) ಮೃತಪಟ್ಟಿದ್ದರು. ಆನೆಗಳ ದಾಳಿ ಹೆಚ್ಚಾಗಿ ಮಳವಳ್ಳಿ ಮದ್ದೂರು ಮತ್ತು ಮಂಡ್ಯ ವಲಯಗಳಲ್ಲಿ ಇದುವರೆಗೆ ಕಂಡುಬಂದಿದೆ.  ಕಳೆದ ವರ್ಷ ಎರಡು ಆನೆಗಳು ಮದ್ದೂರು ಮಂಡ್ಯ ತಾಲ್ಲೂಕಿನಲ್ಲೇ ಅಡ್ಡಾಡಿ ಭಾರತೀನಗರ ಸಮೀಪದ ಗುಡಿಗೆರೆ ಗ್ರಾಮದ ಕಬ್ಬಿನ ಗದ್ದೆಯೊಂದರಲ್ಲಿ ಬೀಡು ಬಿಟ್ಟಿದ್ದವು. ಭತ್ತ ಮತ್ತು ಕಬ್ಬಿನ ಬೆಳೆಗಳನ್ನು ನಾಶ ಮಾಡಿ ರೈತರಿಗೆ ನಷ್ಟ ಉಂಟು ಮಾಡಿದ್ದವು.  ಕಾಡು ಹಂದಿ ದಾಳಿಗೆ ಇಬ್ಬರಿಗೆ ಗಾಯ ಇದೇ ಏಪ್ರಿಲ್‌ 6ರಂದು ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಸಮೀಪದ ಕಿರಗಸೂರು ಗ್ರಾಮಕ್ಕೆ ಏಕಾಏಕಿಯಾಗಿ ನುಗ್ಗಿದ ಕಾಡುಹಂದಿ ಇಬ್ಬರು ವ್ಯಕ್ತಿಗಳು ಸೇರಿದಂತೆ ಹಸುವಿನ ಮೇಲೆ ದಾಳಿ ಮಾಡಿ ಕೋರೆಯಿಂದ ತಿವಿದು ಗಾಯಗೊಳಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT