ಹಾರೋಹಳ್ಳಿ ಶ್ರೀಧರ ಮಾತನಾಡಿ ‘ಇತರೆ ದುಂದು ವೆಚ್ಚ ಕಡಿಮೆ ಮಾಡಿ ಷೇರುದಾರರ ಸದಸ್ಯರ ಮಕ್ಕಳ ಮದುವೆಗೆ ಕಲ್ಯಾಣ ಮಂಟಪದಲ್ಲಿ ₹5 ಸಾವಿರ ರಿಯಾಯಿತಿ ಕೊಡಬೇಕು. ಇದರಿಂದ ಬಡವರಿಗೆ ಅನುಕೂಲವಾಗಲಿದೆ. ಸಣ್ಣಪುಟ್ಟ ಸೊಸೈಟಿಗಳು ರಿಯಾಯಿತಿ ನೀಡುತ್ತಿರುವಾಗ ನೀವು ಏಕೆ ಕೊಡಬಾರದು. ಜತೆಗೆ ಮರಣ ನಿಧಿಯನ್ನು ₹5 ಸಾವಿರದಿಂದ ₹10 ಸಾವಿರಕ್ಕೆ ಹೆಚ್ಚಿಸಬೇಕು. ಈ ವಿಚಾರದ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.