ವಿ.ಸಿ.ಫಾರಂ ಕೃಷಿ ಭೂಮಿಯಲ್ಲಿ ಯಂತ್ರಗಳ ಪ್ರಾತ್ಯಕ್ಷಿಕೆ ನಡೆಯುತ್ತಿರುವುದು
ವಿ.ಸಿ.ಪಾರಂ ಸಮಗ್ರ ಕೃಷಿ ವಿವಿ ಘೋಷಣೆ ಸಂಬಂಧ ಈಚೆಗೆ ಪ್ರಜಾವಾಣಿಯಲ್ಲಿ ಪ್ರಕಟಗೊಂಡಿದ್ದ ವಿಶೇಷ ವರದಿ
ಬೃಂದಾವನ ಉನ್ನತೀಕರಣ
ಕೆಆರ್ಎಸ್ ಬೃಂದಾವನ ಉದ್ಯಾನವನ್ನು ಸಾರ್ಜಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಉನ್ನತೀಕರಣಗೊಳಿಸುವ ಘೋಷಣೆ ಮಾಡಿರುವುದು ಮುಖ್ಯಮಂತ್ರಿಗಳು ಮಂಡ್ಯಕ್ಕೆ ನೀಡಿರುವ ಇನ್ನೊಂದು ಪ್ರಮುಖ ಕೊಡುಗೆಯಾಗಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಗೊಳಿಸುವ ಮಾತುಗಳನ್ನಾಡುತ್ತಿದ್ದರು. ಇದಕ್ಕೆ ರೈತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಡಿಸ್ನಿಲ್ಯಾಂಡ್ ಪರಿಕಲ್ಪನೆ ಕೈಬಿಟ್ಟ ಕಾಂಗ್ರೆಸ್ ಸರ್ಕಾರ ವಿಶ್ವದರ್ಜೆಯ ಪ್ರವಾಸಿತಾಣವನ್ನಾಗಿ ರೂಪಿಸುವುದಾಗಿ ಘೋಷಿಸಿದೆ. ಜಿಲ್ಲಾಸ್ಪತ್ರೆಯಲ್ಲಿ ಸಂಯೋಜಿತ ಮತ್ತು ಸಾರ್ವಜನಿಕ ಆರೋಗ್ಯ ಪ್ರಯಾಗಾಲಯ (ಐಪಿಎಚ್ಎಲ್) ಸ್ಥಾಪಿಸುವ ಮೂಲಕ ಕೈಗೆಟುಕುವ ದರದಲ್ಲಿ ಪ್ರಯೋಗಾಲಯ ಸೇವೆ ನೀಡುವ ನಿರ್ಧಾರವನ್ನು ಮುಖ್ಯಮಂತ್ರಿಗಳು ಪ್ರಕಟಿಸಿದ್ದಾರೆ. ಜೊತೆಗೆ ₹ 187 ಕೋಟಿ ವೆಚ್ಚದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಆತ್ಯಾಧುನಿಕ ತುರ್ತು ಚಿಕಿತ್ಸಾ (ಕ್ರಿಟಿಕಲ್ ಕೇರ್) ಬ್ಲಾಕ್ ನಿರ್ಮಾಣದ ಘೋಷಣೆಯೂ ಜಿಲ್ಲೆಗೆ ದೊರತಿದೆ.
ನಾಲೆಗಳ ಆಧುನೀಕರಣ
ಮಳವಳ್ಳಿ ಹಾಗೂ ಮದ್ದೂರು ತಾಲ್ಲೂಕುಗಳ ನಾಲೆಗಳಿಗೆ ಕೆಆರ್ಎಸ್ ನೀರು ತಲುಪುತ್ತಿಲ್ಲ ಈ ಭಾಗದ ರೈತರು ವಾರ್ಷಿಕವಾಗಿ ಒಂದೇ ಬೆಳೆ ಬೆಳೆಯುತ್ತಿದ್ದಾರೆ ಎಂಬ ಕೊರಗಿದೆ. ಇದಕ್ಕೆ ನಾಲೆಗಳ ಆಧುನೀಕರಣವೇ ಪರಿಹಾರವಾಗಿದ್ದು ಮುಖ್ಯಮಂತ್ರಿಗಳು ತಮ್ಮ ಬಜೆಟ್ನಲ್ಲಿ ಮಳವಳ್ಳಿ ತಾಲ್ಲೂಕಿನ ಮಾಧವಮಂತ್ರಿ ನಾಲೆ ಮದ್ದೂರು ತಾಲ್ಲೂಕಿನ ಕೆಮ್ಮಣ್ಣು ನಾಲೆಗಳ ಆಧುನೀಕರಣ ಘೋಷಣೆ ಮಾಡಿರುವುದು ಆ ಭಾಗದ ರೈತರ ಮೊಗದಲ್ಲಿ ಹೊಸ ನಿರೀಕ್ಷೆ ಮೂಡಿದೆ.