ಕೆಆರ್ಎಸ್ ಜಲಾಶಯ ನಿರ್ಮಾಣದಿಂದಾಗಿ ಪ್ರಸಿದ್ಧ ವೇಣು ಗೋಪಾಲಸ್ವಾಮಿ ದೇವಾಲಯ ಸೇರಿ ಹತ್ತಕ್ಕೂ ಹೆಚ್ಚು ದೇವಾಲಯಗಳು ಮುಳುಗಡೆಯಾದವು. ಈ ಪೈಕಿ 12ನೇ ಶತಮಾನದ ಹೊಯ್ಸಳ ಶೈಲಿಯ ವೇಣುಗೋಪಾಲಸ್ವಾಮಿ ದೇಗುಲವನ್ನು ಹರಿಖೋಡೆ ಫೌಂಡೇಷನ್ನವರು ಜಲಾಶಯದ ವಾಯವ್ಯ ದಡಕ್ಕೆ ಸ್ಥಳಾಂತರಿಸಿದ್ದರು. ಲಕ್ಷ್ಮಿನಾರಾಯಣ, ಕಣ್ಣೇಶ್ವರ ಇತರ ದೇವಾಲಯಗಳು ಜಲಾಶಯದಲ್ಲೇ ಉಳಿದಿವೆ. ಸಂಪೂರ್ಣ ಶಿಲೆಯಿಂದ ನಿರ್ಮಾಣ ವಾಗಿರುವುದರಿಂದ ನೀರಿನಲ್ಲಿದ್ದರೂ ಇವು ಇನ್ನೂ ಉಳಿದಿವೆ ಎಂದು ಕೆಆರ್ಎಸ್ ಗ್ರಾಮ ಪಂಚಾಯಿತಿ ಸದಸ್ಯ ಸಿ. ಮಂಜುನಾಥ್ ಹೇಳುತ್ತಾರೆ.