ಕಾರ್ಯನಿಮಿತ್ತ ಮದ್ದೂರಿಗೆ ಬಂದಿದ್ದ ಬೆಂಗಳೂರಿನ ವ್ಯಕ್ತಿ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಹಿಂದಿನ ರಸ್ತೆಯಲ್ಲಿರುವ, ಕುಂದಾಪುರ ಮೂಲದ ವಾಸು ಎಂಬುವವರ ಅಂಗಡಿಗೆ ತೆರಳಿದ್ದರು. ಅಲ್ಲಿ ಟೀ ಕುಡಿದು, ಜತೆಗಿದ್ದ ಬ್ಯಾಗನ್ನು ಟೇಬಲ್ ಮೇಲೆ ಇರಿಸಿ ತೆರಳಿದ್ದಾರೆ. ಬ್ಯಾಗ್ನಲ್ಲಿ ಹಣ ಇರುವುದನ್ನು ಕಂಡ ವಾಸು ಭದ್ರವಾಗಿ ಎತ್ತಿಟ್ಟಿದ್ದರು.