<p><strong>ಹಲಗೂರು:</strong> ಸಮೀಪದ ಗುಂಡಾಪುರ ಗ್ರಾಮದ ಬೆಟ್ಟದ ಅರಸಮ್ಮ ಜಾತ್ರೆಯ ಪ್ರಾರಂಭದ ಮೊದಲನೇ ದಿನದ ಪೂಜಾ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಂಡರು.</p>.<p>ಗ್ರಾಮದ ಮಧ್ಯ ಭಾಗದಲ್ಲಿರುವ ಕರಗದ ಮನೆಯಲ್ಲಿ ಬುಧವಾರ ದೇವರ ಕರಗಕ್ಕೆ ವಿಶೇಷ ಪೂಜೆ ನಡೆದವು. ದೇವರ ಗುಡ್ಡರು ತಮ್ಮ ಹೆಬ್ಬಾರೆಗಳಿಗೆ ಪೂಜೆ ಸಲ್ಲಿಸಿ ಹೂವು, ಹೊಂಬಾಳೆ ಪ್ರಸಾದ ಪಡೆದು, ಸಾಂಪ್ರದಾಯಿಕವಾಗಿ ಆಯ್ದ ಕೆಲವು ಮನೆಗಳಲ್ಲಿ ಅಚ್ಚಂದ ಪಡೆದು ಪೂಜೆಯನ್ನು ಸ್ವೀಕರಿಸಿದರು.</p>.<p>ದೇವಸ್ಥಾನಕ್ಕೆ ಅರ್ಚಕರು ದೇವರ ಕರಗವನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಹರಕೆ ಹೊತ್ತವರು ಪಾನಕ ಮಜ್ಜಿಗೆಯನ್ನು ಎತ್ತಿನ ಗಾಡಿಗಳಲ್ಲಿ ತಂದು ನೆರೆದಿದ್ದ ಭಕ್ತರಿಗೆ ನೀಡಿ ಬಿಸಿಲಿನ ತಾಪ ತಣಿಸಿದರು.</p>.<p>ರಾತ್ರಿ ದೇವಿಯ ಕರಗ ಉತ್ಸವ ಮತ್ತು ಉರ್ಜಿ ಕುಣಿತದೊಂದಿಗೆ ಹೆಬ್ಬಾರೆಗಳ ನಾದ ನುಡಿಸುತ್ತ ಕರಗದ ಮನೆಗೆ ಮೆರವಣಿಗೆ ಮುಖಾಂತರ ಬರುವ ಸಂದರ್ಭ ಬೀದಿಯಲ್ಲಿ ಅಮ್ಮನವರಿಗೆ ಮತ್ತು ಹೆಬ್ಬಾರೆಗಳಿಗೆ ಗ್ರಾಮದ ಮುತ್ತೈದೆಯರು ಹಾಗೂ ಮಹಿಳೆಯರು ಆರತಿ ಮಾಡಿ ಪೂಜೆ ಸಲ್ಲಿಸಿದರು.</p>.<p>ಸಮೀಪದ ಬಾಳೆ ಹೊನ್ನಿಗ, ದಳವಾಯಿ ಕೋಡಿಹಳ್ಳಿ, ನಂದೀಪುರ, ಕೆಂಪಯ್ಯನದೊಡ್ಡಿ, ಎಚ್.ಬಸಾಪುರ, ಹಾಗಾದೂರು ಮತ್ತು ಗುಂಡಾಪುರ ಸೇರಿದಂತೆ ಏಳು ಗ್ರಾಮದ ಭಕ್ತರು ಹಬ್ಬ ಆಚರಿಸುವ ಸಂಪ್ರದಾಯವಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಲಗೂರು:</strong> ಸಮೀಪದ ಗುಂಡಾಪುರ ಗ್ರಾಮದ ಬೆಟ್ಟದ ಅರಸಮ್ಮ ಜಾತ್ರೆಯ ಪ್ರಾರಂಭದ ಮೊದಲನೇ ದಿನದ ಪೂಜಾ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಂಡರು.</p>.<p>ಗ್ರಾಮದ ಮಧ್ಯ ಭಾಗದಲ್ಲಿರುವ ಕರಗದ ಮನೆಯಲ್ಲಿ ಬುಧವಾರ ದೇವರ ಕರಗಕ್ಕೆ ವಿಶೇಷ ಪೂಜೆ ನಡೆದವು. ದೇವರ ಗುಡ್ಡರು ತಮ್ಮ ಹೆಬ್ಬಾರೆಗಳಿಗೆ ಪೂಜೆ ಸಲ್ಲಿಸಿ ಹೂವು, ಹೊಂಬಾಳೆ ಪ್ರಸಾದ ಪಡೆದು, ಸಾಂಪ್ರದಾಯಿಕವಾಗಿ ಆಯ್ದ ಕೆಲವು ಮನೆಗಳಲ್ಲಿ ಅಚ್ಚಂದ ಪಡೆದು ಪೂಜೆಯನ್ನು ಸ್ವೀಕರಿಸಿದರು.</p>.<p>ದೇವಸ್ಥಾನಕ್ಕೆ ಅರ್ಚಕರು ದೇವರ ಕರಗವನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಹರಕೆ ಹೊತ್ತವರು ಪಾನಕ ಮಜ್ಜಿಗೆಯನ್ನು ಎತ್ತಿನ ಗಾಡಿಗಳಲ್ಲಿ ತಂದು ನೆರೆದಿದ್ದ ಭಕ್ತರಿಗೆ ನೀಡಿ ಬಿಸಿಲಿನ ತಾಪ ತಣಿಸಿದರು.</p>.<p>ರಾತ್ರಿ ದೇವಿಯ ಕರಗ ಉತ್ಸವ ಮತ್ತು ಉರ್ಜಿ ಕುಣಿತದೊಂದಿಗೆ ಹೆಬ್ಬಾರೆಗಳ ನಾದ ನುಡಿಸುತ್ತ ಕರಗದ ಮನೆಗೆ ಮೆರವಣಿಗೆ ಮುಖಾಂತರ ಬರುವ ಸಂದರ್ಭ ಬೀದಿಯಲ್ಲಿ ಅಮ್ಮನವರಿಗೆ ಮತ್ತು ಹೆಬ್ಬಾರೆಗಳಿಗೆ ಗ್ರಾಮದ ಮುತ್ತೈದೆಯರು ಹಾಗೂ ಮಹಿಳೆಯರು ಆರತಿ ಮಾಡಿ ಪೂಜೆ ಸಲ್ಲಿಸಿದರು.</p>.<p>ಸಮೀಪದ ಬಾಳೆ ಹೊನ್ನಿಗ, ದಳವಾಯಿ ಕೋಡಿಹಳ್ಳಿ, ನಂದೀಪುರ, ಕೆಂಪಯ್ಯನದೊಡ್ಡಿ, ಎಚ್.ಬಸಾಪುರ, ಹಾಗಾದೂರು ಮತ್ತು ಗುಂಡಾಪುರ ಸೇರಿದಂತೆ ಏಳು ಗ್ರಾಮದ ಭಕ್ತರು ಹಬ್ಬ ಆಚರಿಸುವ ಸಂಪ್ರದಾಯವಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>