ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳ್ಳನ ಪೊಲೀಸರಿಗೊಪ್ಪಿಸಿದ ಜನ

Last Updated 9 ಡಿಸೆಂಬರ್ 2020, 16:45 IST
ಅಕ್ಷರ ಗಾತ್ರ

ಮಂಡ್ಯ: ನಗರದ ಯೂನಿಯನ್‌ ಬ್ಯಾಂಕ್‌ನಿಂದ (ಕಾರ್ಪೊರೇಷನ್‌ ಬ್ಯಾಂಕ್‌) ಹೊರ ಬಂದ ಮಹಿಳೆಯಿಂದ ಹಣ ಕಸಿದು ಪರಾರಿಯಾಗುತ್ತಿದ್ದ ಕಳ್ಳನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಗರದ ಕೆ.ಆರ್‌.ರಸ್ತೆಯಲ್ಲಿ ಬುಧವಾರ ನಡೆದಿದೆ.

ಶಂಕರ ಮಠ ಬಡಾವಣೆ ನಿವಾಸಿ ಕಮಲಮ್ಮ ಅವರು ಬೆಳಿಗ್ಗೆ ₹31 ಸಾವಿರ ನಗದೀಕರಿಸಿ ಬ್ಯಾಗಿನಲ್ಲಿ ಇಟ್ಟುಕೊಂಡು ಹೊರ ಬಂದ ಸಂದರ್ಭದಲ್ಲಿ ಮಹಾರಾಷ್ಟ್ರದ ನಾಗಪುರ ಮೂಲದ ಅನಿಲ್‌ರಾಜ್‌ ಎಂಬುವನು ಬ್ಯಾಗ್‌ ಕಸಿದು, ಆಟೊದಲ್ಲಿ ಪರಾರಿಯಾಗಲು ಯತ್ನಿದ್ದಾನೆ.

ಈ ಸಂದರ್ಭದಲ್ಲಿ ಕಮಲಮ್ಮ ಕೂಗಿಕೊಂಡಾಗ ಸಾರ್ವಜನಿಕರು ಅನಿಲ್‌ರಾಜ್‌ನನ್ನು ಹಿಡಿದು ಥಳಿಸಿ, ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಚಿಕಿತ್ಸೆಗಾಗಿ ಮಿಮ್ಸ್‌ಗೆ ದಾಖಲಿಸಲಾಗಿದ್ದು, ಮಂಡ್ಯ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT