ಮಂಡ್ಯ: ನಗರದ ಯೂನಿಯನ್ ಬ್ಯಾಂಕ್ನಿಂದ (ಕಾರ್ಪೊರೇಷನ್ ಬ್ಯಾಂಕ್) ಹೊರ ಬಂದ ಮಹಿಳೆಯಿಂದ ಹಣ ಕಸಿದು ಪರಾರಿಯಾಗುತ್ತಿದ್ದ ಕಳ್ಳನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಗರದ ಕೆ.ಆರ್.ರಸ್ತೆಯಲ್ಲಿ ಬುಧವಾರ ನಡೆದಿದೆ.
ಶಂಕರ ಮಠ ಬಡಾವಣೆ ನಿವಾಸಿ ಕಮಲಮ್ಮ ಅವರು ಬೆಳಿಗ್ಗೆ ₹31 ಸಾವಿರ ನಗದೀಕರಿಸಿ ಬ್ಯಾಗಿನಲ್ಲಿ ಇಟ್ಟುಕೊಂಡು ಹೊರ ಬಂದ ಸಂದರ್ಭದಲ್ಲಿ ಮಹಾರಾಷ್ಟ್ರದ ನಾಗಪುರ ಮೂಲದ ಅನಿಲ್ರಾಜ್ ಎಂಬುವನು ಬ್ಯಾಗ್ ಕಸಿದು, ಆಟೊದಲ್ಲಿ ಪರಾರಿಯಾಗಲು ಯತ್ನಿದ್ದಾನೆ.
ಈ ಸಂದರ್ಭದಲ್ಲಿ ಕಮಲಮ್ಮ ಕೂಗಿಕೊಂಡಾಗ ಸಾರ್ವಜನಿಕರು ಅನಿಲ್ರಾಜ್ನನ್ನು ಹಿಡಿದು ಥಳಿಸಿ, ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಚಿಕಿತ್ಸೆಗಾಗಿ ಮಿಮ್ಸ್ಗೆ ದಾಖಲಿಸಲಾಗಿದ್ದು, ಮಂಡ್ಯ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.