‘ಕಳೆದ ವರ್ಷ ಭಾರಿ ಪ್ರವಾಹದಿಂದ ಕಟ್ಟೆಯ ಮೇಲ್ಭಾಗಕ್ಕೆ ಅನಾಹುತ ಸಂಭವಿಸಿದೆ. ಕಾಡುಗಲ್ಲುಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಕಟ್ಟೆ ದುರಸ್ತಿಗೆ ಈಗ ₹ 98 ಲಕ್ಷ ವೆಚ್ಚದ ಟೆಂಡರ್ ಕರೆಯಲಾಗಿದೆ. ನೀರು ಬೀಳುವ ಭಾಗಕ್ಕೆ ಕಾಡುಗಲ್ಲು ತುಂಬಿಸಿ, ಮೇಲ್ಭಾಗಕ್ಕೆ ಕಾಂಕ್ರೀಟ್ ಹಾಕುವುದರಿಂದ ಪ್ರವಾಹ ಬಂದರೂ ಯಾವುದೇ ಅನಾಹುತ ಆಗದು’ ಎಂದು ಹಾರಂಗಿ ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್ ಪ್ರಸಾದ್ ವಿಶ್ವಾಸ ವ್ಯಕ್ತಪಡಿಸುವರು.