’ಗಿಡದಲ್ಲಿ ಮೆಣಸಿನಕಾಯಿ ಫಸಲು ಉತ್ತಮವಾಗಿ ಬಿಟ್ಟಿದೆ. ಆದರೆ, ಮೆಣಸಿನಕಾಯಿಗೆ ಖಾರದ ಗುಣವೆ ಇಲ್ಲ, ದಪ್ಪವಾಗಿದ್ದು, ಹಣ್ಣು ಸಹ ಆಗದೇ ಕೊಳೆತುಹೋಗುತ್ತಿದೆ. ಕಳೆದ ವರ್ಷ ಇದೇ ತಳಿಯನ್ನು ಬಿತ್ತನೆ ಮಾಡಿ ಉತ್ತಮ ಲಾಭ ಗಳಿಸಿದ್ದೆವು. ಆದ್ದರಿಂದ ಈ ಭಾರಿಯೂ ಅದೇ ತಳಿಯನ್ನು ಬೆಳೆದಿದ್ದೆವು. ಈಗ ತಿಪ್ಪೆಗೆ ಸುರಿಯುವ ಪರಿಸ್ಥಿತಿ ಬಂದೊದಗಿದೆ’ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.