‘ಭಾಗ್ಯಲಕ್ಷ್ಮಿ ಯೋಜನೆಯಡಿ ಸಂಪರ್ಕ ಪಡೆದು, ಕೋಟ್ಯಂತರ ರೂಪಾಯಿ ಬಾಕಿ ಉಳಿಸಿಕೊಂಡಿದ್ದಾರೆ’ ಎಂದು ದೀಪಕ್ ಹೇಳುತ್ತಿದ್ದಂತೆ ಕೋಪಗೊಂಡ ಡಾ.ಯತೀಂದ್ರ, ‘ಬಾಯಿ ಮುಚ್ಚಿಕೊಂಡು ಹೇಳಿದಷ್ಟು ಕೇಳ್ರಿ. ಪಂಚಾಯಿತಿ ಹಾಗೂ ಸೆಸ್ಕ್ ಎರಡೂ ಸರ್ಕಾರದ ಭಾಗ. ನೀವೇನು ಖಾಸಗಿ ಕಂಪನಿ ಅಧಿಕಾರಿಯಲ್ಲ. ಅಧಿಕ ಪ್ರಸಂಗಿ. ಮೊದಲು ಬಡವರ ಪರ ಕೆಲಸ ಮಾಡಿ’ ಎಂದು ಹರಿಹಾಯ್ದರು.